ಕೊರೋನಾ ಗಲಾಟೆ ವೇಳೆಯಲ್ಲಿ 8 ಹಳ್ಳಿಗಳ ದತ್ತು ತೆಗೆದು ಕೊಂಡ ಹಿರಿಯ ನಟ
First Published Apr 9, 2020, 5:48 PM ISTಕೊರೋನಾ ಹರಡದಂತೆ ತಡೆಯಲು ದೇಶವೇ ಲಾಕ್ಡೌನ್ ಆಗಿರುವ ಪರಿಸ್ಥಿತಿಯಲ್ಲಿ ಸೆಲಬ್ರೆಟಿಗಳು ಕಷ್ಟದಲ್ಲಿರುವವರಿಗೆ ಸಹಾಯಮಾಡಲು ಮುಂದಾಗಿದ್ದಾರೆ. ಅಗತ್ಯವಿರುವವರಿಗೆ ಆಹಾರ ಪೂರೈಸಲು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾರಂಗದ ನಟ-ನಟಿರು ಕೈಚಾಚಿದ್ದಾರೆ. ಹಲವರು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಪರಿಹಾರ ನಿಧಿಗಳಿಗೆ ದೇಣಿಗೆ ನೀಡಿದರೆ, ಕೆಲವರು ಮಾಸ್ಕ್ ಸ್ಯಾನಿಟೈಜರ್ ಮತ್ತು ದಿನಸಿ ವಸ್ತುಗಳನ್ನು ತಲುಪಿಸಿ ನೇರವಾಗಿ ಸಹಾಯ ಮಾಡುತ್ತಿದ್ದಾರೆ. ಟಾಲಿವುಡ್ನ ಹಿರಿಯ ನಟ ಮೋಹನ್ ಬಾಬು ತಮ್ಮ ಹಿರಿಯ ಮಗ ಮಂಚು ವಿಷ್ಣು ಜೊತೆ ಸೇರಿ ಚಂದ್ರಗಿರಿ ಕ್ಷೇತ್ರದ ಸುಮಾರು 8 ಹಳ್ಳಿಗಳನ್ನು ದತ್ತು ತೆಗೆದುಕೊಂಡು ದಿನಕ್ಕೆ 2 ಹೊತ್ತು ಆಹಾರದ ವ್ಯವಸ್ಥೆ ಮಾಡಿದ್ದಾರೆ.