ಕೊರೋನಾ ಗಲಾಟೆ ವೇಳೆಯಲ್ಲಿ 8 ಹಳ್ಳಿಗಳ ದತ್ತು ತೆಗೆದು ಕೊಂಡ ಹಿರಿಯ ನಟ

Suvarna News   | Asianet News
Published : Apr 09, 2020, 05:48 PM ISTUpdated : Apr 09, 2020, 06:26 PM IST

ಕೊರೋನಾ ಹರಡದಂತೆ ತಡೆಯಲು ದೇಶವೇ ಲಾಕ್‌ಡೌನ್‌ ಆಗಿರುವ ಪರಿಸ್ಥಿತಿಯಲ್ಲಿ ಸೆಲಬ್ರೆಟಿಗಳು ಕಷ್ಟದಲ್ಲಿರುವವರಿಗೆ ಸಹಾಯಮಾಡಲು ಮುಂದಾಗಿದ್ದಾರೆ. ಅಗತ್ಯವಿರುವವರಿಗೆ ಆಹಾರ ಪೂರೈಸಲು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾರಂಗದ ನಟ-ನಟಿರು ಕೈಚಾಚಿದ್ದಾ‌ರೆ. ಹಲವರು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಪರಿಹಾರ ನಿಧಿಗಳಿಗೆ ದೇಣಿಗೆ ನೀಡಿದರೆ, ಕೆಲವರು ಮಾಸ್ಕ್‌ ಸ್ಯಾನಿಟೈಜರ್‌ ಮತ್ತು ದಿನಸಿ ವಸ್ತುಗಳನ್ನು ತಲುಪಿಸಿ ನೇರವಾಗಿ ಸಹಾಯ ಮಾಡುತ್ತಿದ್ದಾರೆ. ಟಾಲಿವುಡ್‌ನ ಹಿರಿಯ ನಟ ಮೋಹನ್‌ ಬಾಬು ತಮ್ಮ ಹಿರಿಯ ಮಗ ಮಂಚು ವಿಷ್ಣು ಜೊತೆ ಸೇರಿ ಚಂದ್ರಗಿರಿ ಕ್ಷೇತ್ರದ ಸುಮಾರು 8 ಹಳ್ಳಿಗಳನ್ನು ದತ್ತು ತೆಗೆದುಕೊಂಡು ದಿನಕ್ಕೆ 2 ಹೊತ್ತು ಆಹಾರದ ವ್ಯವಸ್ಥೆ ಮಾಡಿದ್ದಾರೆ.

PREV
110
ಕೊರೋನಾ ಗಲಾಟೆ ವೇಳೆಯಲ್ಲಿ 8 ಹಳ್ಳಿಗಳ ದತ್ತು ತೆಗೆದು ಕೊಂಡ ಹಿರಿಯ ನಟ
8 ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಕೊರೋನಾ ಸಂತ್ರಸ್ತರ ನೆರವಿಗೆ ಮುಂದಾದ ಹಿರಿಯ ನಟ ಮೋಹನ್‌ ಬಾಬು.
8 ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಕೊರೋನಾ ಸಂತ್ರಸ್ತರ ನೆರವಿಗೆ ಮುಂದಾದ ಹಿರಿಯ ನಟ ಮೋಹನ್‌ ಬಾಬು.
210
ತಮ್ಮ ಹಿರಿಯ ಮಗ ಮಂಚು ವಿಷ್ಣು ಜೊತೆ ಸೇರಿ ಚಂದ್ರಗಿರಿ ಕ್ಷೇತ್ರದ ಸುಮಾರು 8 ಹಳ್ಳಿಗಳನ್ನು ದತ್ತು ತೆಗೆದುಕೊಂಡು ದಿನಕ್ಕೆ 2 ಹೊತ್ತು ಆಹಾರದ ವ್ಯವಸ್ಥೆ ಮಾಡಿದ್ದಾರೆ.
ತಮ್ಮ ಹಿರಿಯ ಮಗ ಮಂಚು ವಿಷ್ಣು ಜೊತೆ ಸೇರಿ ಚಂದ್ರಗಿರಿ ಕ್ಷೇತ್ರದ ಸುಮಾರು 8 ಹಳ್ಳಿಗಳನ್ನು ದತ್ತು ತೆಗೆದುಕೊಂಡು ದಿನಕ್ಕೆ 2 ಹೊತ್ತು ಆಹಾರದ ವ್ಯವಸ್ಥೆ ಮಾಡಿದ್ದಾರೆ.
310
ಕಳೆದ ಹತ್ತು ದಿನಗಳಿಂದ ಆ ಹಳ್ಳಿಗಳ ಬಡ ಕುಟುಂಬಗಳಿಗೆ ಆಹಾರ ನೀಡುತ್ತಿದ್ದಾರೆ ಅಪ್ಪ ಮಗ.
ಕಳೆದ ಹತ್ತು ದಿನಗಳಿಂದ ಆ ಹಳ್ಳಿಗಳ ಬಡ ಕುಟುಂಬಗಳಿಗೆ ಆಹಾರ ನೀಡುತ್ತಿದ್ದಾರೆ ಅಪ್ಪ ಮಗ.
410
ಈ ವ್ಯವಸ್ಥೆ ಲಾಕ್‌ಡೌನ್‌ ಮುಗಿಯುವ ವರೆಗೆ ಮುಂದುವರೆಯುತ್ತದೆ ಎಂಬ ಸುದ್ದಿ ಇದೆ.
ಈ ವ್ಯವಸ್ಥೆ ಲಾಕ್‌ಡೌನ್‌ ಮುಗಿಯುವ ವರೆಗೆ ಮುಂದುವರೆಯುತ್ತದೆ ಎಂಬ ಸುದ್ದಿ ಇದೆ.
510
ಇದಲ್ಲದೆ, ಪ್ರತಿನಿತ್ಯ 8 ಟನ್‌ ತರಕಾರಿಗಳನ್ನು ಸಹ ಸಪ್ಲೈ ಮಾಡುತ್ತಿರುವ ಮೋಹನ್‌ ಬಾಬು.
ಇದಲ್ಲದೆ, ಪ್ರತಿನಿತ್ಯ 8 ಟನ್‌ ತರಕಾರಿಗಳನ್ನು ಸಹ ಸಪ್ಲೈ ಮಾಡುತ್ತಿರುವ ಮೋಹನ್‌ ಬಾಬು.
610
ಮುಖ್ಯ ಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ಪುನೀತ್‌ ರಾಜ್‌ಕುಮಾರ್‌ ನೀಡಿದರೆ, ಅವರ ಜೊತೆ ದರ್ಶನ್‌ ಸೇರಿ ಸ್ಯಾಂಡಲ್‌ವುಡ್‌ನ ಹಲವು ನಟನಟಿಯರು ದೇಣಿಗೆ ನೀಡಿದ್ದಾರೆ.
ಮುಖ್ಯ ಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ಪುನೀತ್‌ ರಾಜ್‌ಕುಮಾರ್‌ ನೀಡಿದರೆ, ಅವರ ಜೊತೆ ದರ್ಶನ್‌ ಸೇರಿ ಸ್ಯಾಂಡಲ್‌ವುಡ್‌ನ ಹಲವು ನಟನಟಿಯರು ದೇಣಿಗೆ ನೀಡಿದ್ದಾರೆ.
710
ಕಾಲಿವುಡ್‌ನ ರಜನಿಕಾಂತ್‌ 50 ಲಕ್ಷ ನೀಡಿದ್ದಾರೆ.
ಕಾಲಿವುಡ್‌ನ ರಜನಿಕಾಂತ್‌ 50 ಲಕ್ಷ ನೀಡಿದ್ದಾರೆ.
810
ಬಾಲಿವುಡ್‌ನ ಅಕ್ಷಯ್‌ ಕುಮಾರ್‌ 25 ಕೋಟಿ ದಾನ ನೀಡಿದ್ದಾರೆ ಹಾಗೆ ಸಿನಿಮಾಕ್ಕೆ ಸಂಬಂಧಿಸಿದ 25000 ಡೈಲಿ ವರ್ಕರ್ಸ್‌ಗೆ ಸಹಾಯ ಮಾಡುತ್ತಿದ್ದಾರೆ ಸಲ್ಮಾನ್‌ ಖಾನ್‌.
ಬಾಲಿವುಡ್‌ನ ಅಕ್ಷಯ್‌ ಕುಮಾರ್‌ 25 ಕೋಟಿ ದಾನ ನೀಡಿದ್ದಾರೆ ಹಾಗೆ ಸಿನಿಮಾಕ್ಕೆ ಸಂಬಂಧಿಸಿದ 25000 ಡೈಲಿ ವರ್ಕರ್ಸ್‌ಗೆ ಸಹಾಯ ಮಾಡುತ್ತಿದ್ದಾರೆ ಸಲ್ಮಾನ್‌ ಖಾನ್‌.
910
ಮೆಗಾ ಸ್ಟಾರ್‌ ಚಿರಜೀವಿ ಸ್ಥಾಪಿಸಿರುವ ಕೊರೋನಾ ಕ್ರೈಸಿಸ್‌ ಚಾರಿಟಿಗೆ ಟಾಲಿವುಡ್‌ನ ಯಂಗ್‌ ಸ್ಟಾರ್‌ಗಳು ಸಹ ದಾನ ನೀಡುತ್ತಿದ್ದಾರೆ.
ಮೆಗಾ ಸ್ಟಾರ್‌ ಚಿರಜೀವಿ ಸ್ಥಾಪಿಸಿರುವ ಕೊರೋನಾ ಕ್ರೈಸಿಸ್‌ ಚಾರಿಟಿಗೆ ಟಾಲಿವುಡ್‌ನ ಯಂಗ್‌ ಸ್ಟಾರ್‌ಗಳು ಸಹ ದಾನ ನೀಡುತ್ತಿದ್ದಾರೆ.
1010
ಇತ್ತೀಚಿಗೆ 20 ಲಕ್ಷ ಹಣ ದಾನ ಮಾಡಿದ್ಗಾರೆ ನಟಿ ನಯನಾತಾರಾ. ಹೀಗೆ ಭಾರತದ ಎಲ್ಲಾ ಭಾಷೆಯ ಸಿನಿಮಾ ಸ್ಷಾರ್‌ಗಳು ಕೋವಿಡ್‌ 19 ವಿರುದ್ಧ ಹೋರಾಡಲು ಜನತೆಯ ಜೊತೆ ನಿಂತಿದ್ದಾರೆ.
ಇತ್ತೀಚಿಗೆ 20 ಲಕ್ಷ ಹಣ ದಾನ ಮಾಡಿದ್ಗಾರೆ ನಟಿ ನಯನಾತಾರಾ. ಹೀಗೆ ಭಾರತದ ಎಲ್ಲಾ ಭಾಷೆಯ ಸಿನಿಮಾ ಸ್ಷಾರ್‌ಗಳು ಕೋವಿಡ್‌ 19 ವಿರುದ್ಧ ಹೋರಾಡಲು ಜನತೆಯ ಜೊತೆ ನಿಂತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories