ಐಟಂ ಸಾಂಗ್ಸ್ಗಳಿಂದ ಸೌತ್ ಸಿನಿಮಾವನ್ನೇ ಅಲ್ಲಾಡಿಸಿದ್ದ ಸಿಲ್ಕ್ ಸ್ಮಿತಾ ಸಾವಿನ ಬಗ್ಗೆ ಹೊಸ ಟ್ವಿಸ್ಟ್ ಬೆಳಕಿಗೆ ಬಂದಿದೆ. ಅವರು ಒಬ್ಬ ನಿರ್ಮಾಪಕರನ್ನ ಮದುವೆ ಆಗ್ಬೇಕಿತ್ತಂತೆ ಎಂಬ ಸುದ್ದಿ ಹರಿದಾಡುತ್ತಿದೆ.
ಖಳನಾಯಕಿ ಪಾತ್ರಗಳು ಮತ್ತು ಐಟಂ ಸಾಂಗ್ಸ್ಗಳಿಂದ ಸೌತ್ ಇಂಡಸ್ಟ್ರಿಯಲ್ಲಿ ಫೇಮಸ್ ಆಗಿದ್ದ ಸಿಲ್ಕ್ ಸ್ಮಿತಾ ಸಾವು ಇನ್ನೂ ಒಂದು ಮಿಸ್ಟರಿಯಾಗಿಯೇ ಉಳಿದಿದೆ. ಅವರು ಆತ್ಮಹತ್ಯೆ ಮಾಡಿಕೊಂಡು ಸತ್ತಿದ್ದಾರೆ ಅಂತ ಎಲ್ಲರಿಗೂ ಗೊತ್ತು. ಸೂಸೈಡ್ ನೋಟ್ ಸಿಕ್ಕಿದ್ದರಿಂದ ಪೊಲೀಸರು ಆತ್ಮಹತ್ಯೆ ಅಂತಲೇ ತೀರ್ಮಾನಿಸಿದ್ರು. ಆದ್ರೆ ಯಾಕೆ ಆತ್ಮಹತ್ಯೆ ಮಾಡಿಕೊಂಡ್ರು ಅನ್ನೋದು ಸಸ್ಪೆನ್ಸ್ ಆಗಿ ಉಳಿದಿದೆ.
25
ಸಿಲ್ಕ್ ಸ್ಮಿತಾ ಸಾವಿಗೆ ಡಾ. ರಾಧಾಕೃಷ್ಣ ಕಾರಣ ಅಲ್ಲವೇ?
ಸಿಲ್ಕ್ ಸ್ಮಿತಾ ಬರೆದ ಸೂಸೈಡ್ ನೋಟ್ನಲ್ಲಿ, ಅವರನ್ನ ಬಹಳಷ್ಟು ಜನ ಮೋಸ ಮಾಡಿದ್ದಾರೆ ಅಂತ ಬರೆದಿದ್ದಾರಂತೆ. ಅದರಲ್ಲಿ ಡಾ. ರಾಧಾಕೃಷ್ಣ ಕೂಡ ಒಬ್ಬರು ಅಂತ ಜನ ಹೇಳ್ತಾರೆ. ಅವರೇ ಮುಖ್ಯ ಕಾರಣ ಅಂತಾರೆ. ಮದುವೆ ಆಗ್ತೀನಿ ಅಂತ ಮೋಸ ಮಾಡಿ, ದುಡ್ಡನ್ನೆಲ್ಲಾ ಖರ್ಚು ಮಾಡಿಸಿಕೊಂಡು ಮೋಸ ಮಾಡಿದ್ರಂತೆ.
35
ಸಿಲ್ಕ್ ಸ್ಮಿತಾ ಸಾವಿನಲ್ಲಿ ಹೊಸ ತಿರುವು
ಒಬ್ಬ ಸ್ಟಾರ್ ಹೀರೋನನ್ನ ಪ್ರೀತಿಸಿದ್ರು, ಆದ್ರೆ ಅವನು ಮೋಸ ಮಾಡಿದ ಅಂತಲೂ ಹೇಳ್ತಾರೆ. ಹೀಗೆ ನಾನಾ ರೀತಿಯ ವದಂತಿಗಳಿವೆ. ಈಗ ಹೊಸ ವಿಷಯ ಬೆಳಕಿಗೆ ಬಂದಿದೆ. ಹಿರಿಯ ಪತ್ರಕರ್ತ ತೋಟ ಭವನಾರಾಯಣ ಒಂದು ಹೊಸ ವಿಷಯ ಹೇಳಿದ್ದಾರೆ. ಸಿಲ್ಕ್ ಸ್ಮಿತಾ ಬಗ್ಗೆ ಹೊಸ ಆಯಾಮವನ್ನ ಬಿಚ್ಚಿಟ್ಟಿದ್ದಾರೆ.
ಸಿಲ್ಕ್ ಸ್ಮಿತಾ ತಮ್ಮ ಮ್ಯಾನೇಜರ್ ಆಗಿದ್ದ ಡಾ. ರಾಧಾಕೃಷ್ಣರನ್ನ ಎಲ್ಲೂ ದೂಷಿಸಿಲ್ಲ, ಬಾಬು ಮಾತ್ರ ಒಳ್ಳೆಯವರು, ನನಗೆ ಆಸರೆಯಾಗಿದ್ದಾರೆ ಅಂತ ಬರೆದಿದ್ದಾರಂತೆ. ಕೆಲವರು ತನ್ನನ್ನ ಮೋಸ ಮಾಡಿದ್ದಾರೆ ಅಂತ ಬರೆದಿದ್ದಾರೆ. ಸಿಲ್ಕ್ ಸ್ಮಿತಾ ಒಬ್ಬ ತಮಿಳು ನಿರ್ಮಾಪಕರನ್ನ ಮದುವೆ ಆಗ್ಬೇಕಿತ್ತು ಅಂತ ಪತ್ರಕರ್ತರು ಹೇಳಿದ್ದಾರೆ.
55
ಬದುಕಿನಲ್ಲಿ ಶೂನ್ಯ ಕಂಡು ಸಿಲ್ಕ್ ಸ್ಮಿತಾ ಆತ್ಮಹತ್ಯೆ?
ಸಿಲ್ಕ್ ಸ್ಮಿತಾರನ್ನ ಬಹಳಷ್ಟು ಜನ ಮೋಸ ಮಾಡಿದ್ರು, ಅವರಿಗೆ ಕುಟುಂಬ ಇರಲಿಲ್ಲ, ಹೀಗಾಗಿ ಒಂಟಿತನ ಕಾಡ್ತಿತ್ತು, ಬದುಕಿನಲ್ಲಿ ಶೂನ್ಯ ಕಂಡು, ಮದ್ಯ ವ್ಯಸನಿಯಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಂತ ಪತ್ರಕರ್ತರು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.