ಈ ದೇವಸ್ಥಾನವು ತಿರುಪತಿ ದೇವಸ್ಥಾನದ ಮಾದರಿಯಲ್ಲಿ ನಿರ್ಮಾಣವಾಗಲಿದ್ದು, ವಸತಿ ವ್ಯವಸ್ಥೆ, ಪ್ರಸಾದ ವಿತರಣೆ ಹಾಗೂ ಉಚಿತ ಅನ್ನದಾನ ವ್ಯವಸ್ಥೆಯನ್ನೂ ಒಳಗೊಂಡಿರುತ್ತದೆ.
ಹೊಸ ದೇವಾಲಯ ನಿರ್ಮಾಣ ಹಾಗೂ ದೇವಾಲಯಗಳ ಜಿರ್ಣೋದಾರಕ್ಕಾಗಿ 9 ಸಾವಿರ ಕೋಟಿ ಹಣ ಟಿಟಿಡಿ ಮೀಸಲು ಇಟ್ಟಿದೆ. ಬೆಳಗಾವಿ ಅಷ್ಟೇ ಅಲ್ಲದೇ ದೇಶದ ಆರು ಕಡೆಗಳಲ್ಲಿ ಹೊಸ ವೆಂಕಟೇಶ್ವರನ ದೇವಾಲಯಗಳು ನಿರ್ಮಾಣಕ್ಕೆ ಟಿಟಿಡಿ ಮುಂದಾಗಿದೆ. ಒಟ್ಟಾರೆಯಾಗಿ ದೇವಾಲಯ ನಿರ್ಮಾಣದಿಂದ ಬೆಳಗಾವಿ ಶೈಕ್ಷಣಿಕ, ಸಾಮಾಜಿಕವಾಗಿ ಅಷ್ಟೇ ಅಲ್ಲದೇ ಧಾರ್ಮಿಕವಾಗಿ ಗುರುತಿಸುವಂತೆ ಆಗಲಿದೆ. ಶೀಘ್ರದಲ್ಲಿ ದೇವಾಲಯ ನಿರ್ಮಾಣಕ್ಕೆ ಭೂಮಿಪೂಜೆ ಸಹ ನಡೆಯಲಿದೆ ಎಂದು ಟಿಟಿಡಿ ತಿಳಿಸಿದೆ.