ಮಹಾಶಿವರಾತ್ರಿಗಾಗಿ ಶಿವಭಕ್ತರು ಕಾತುರದಿಂದ ಕಾಯುತ್ತಾರೆ. ಈ ದಿನ ಮಾಡುವ ಕೆಲವು ಕೆಲಸಗಳು ಸಂಪತ್ತು ಮತ್ತು ಆರ್ಥಿಕ ಸ್ಥಿರತೆಯನ್ನು ತರುತ್ತವೆ. ಪೂಜೆಯ ನಂತರ ಯಾವ ವಸ್ತುವನ್ನು ಮನೆಗೆ ತರಬೇಕು ಎಂದು ತಿಳಿಯಿರಿ.
ಪ್ರತಿ ವರ್ಷ ಬರುವ ದೊಡ್ಡ ಹಬ್ಬಗಳಲ್ಲಿ ಮಹಾಶಿವರಾತ್ರಿಯೂ ಒಂದು. ಫಾಲ್ಗುಣ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು ಈ ಪವಿತ್ರ ಹಬ್ಬವನ್ನು ಆಚರಿಸುತ್ತಾರೆ. ಈ ದಿನ ಶಿವ-ಪಾರ್ವತಿಯರು ಒಂದಾದರು ಎಂದು ಪುರಾಣಗಳು ಹೇಳುತ್ತವೆ. ಇದೇ ದಿನ ಶಿವನು ಲಿಂಗರೂಪದಲ್ಲಿ ಉದ್ಭವಿಸಿದನೆಂಬ ನಂಬಿಕೆಯೂ ಇದೆ. ಈ ದಿನ ಶಿವಲಿಂಗಕ್ಕೆ ಅಭಿಷೇಕ ಮಾಡುವುದು ಬಹಳ ಶುಭ. ಭಕ್ತಿಯಿಂದ ಶಿವನನ್ನು ಪೂಜಿಸಿದರೆ ಜೀವನದ ಅಡೆತಡೆಗಳು, ಗ್ರಹದೋಷಗಳು ದೂರವಾಗಿ ಸಂತೋಷ ನೆಲೆಸುತ್ತದೆ.
26
ಅಭಿಷೇಕ ಮಾಡುವುದರಿಂದ ಆಗುವ ಲಾಭಗಳು
ಮಹಾಶಿವರಾತ್ರಿಯಂದು ಶಿವಲಿಂಗಕ್ಕೆ ನೀರಿನಿಂದ ಅಭಿಷೇಕ ಮಾಡಬೇಕು. ಹೀಗೆ ಮಾಡಿದರೆ ಶಿವನು ಪ್ರಸನ್ನನಾಗುತ್ತಾನೆ ಎಂಬ ನಂಬಿಕೆ ಇದೆ. ನಂತರ ಹಾಲಿನಿಂದ ಅಭಿಷೇಕ ಮಾಡಿದರೆ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
36
ಮೊಸರಿನ ಅಭಿಷೇಕ ಮಾಡಿದ್ರೆ ಮಾನಸಿಕ ಶಾಂತಿ
ಮೊಸರಿನಿಂದ ಅಭಿಷೇಕ ಮಾಡಿದರೆ ಮಾನಸಿಕ ಶಾಂತಿ ಸಿಗುತ್ತದೆ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಜೇನುತುಪ್ಪದಿಂದ ಅಭಿಷೇಕ ಮಾಡಿದರೆ ದಾಂಪತ್ಯ ಜೀವನ ಮಧುರವಾಗಿರುತ್ತದೆ. ಆರೋಗ್ಯವೂ ಸುಧಾರಿಸುತ್ತದೆ.
ತುಪ್ಪದಿಂದ ಅಭಿಷೇಕ ಮಾಡಿದರೆ ಉತ್ತಮ ಸಂತಾನ ಪ್ರಾಪ್ತಿಯಾಗುತ್ತದೆ. ಅಭಿಷೇಕದ ನಂತರ, ಪಾರ್ವತಿ ದೇವಿಯೊಂದಿಗೆ ಶಿವನನ್ನು ಪೂಜಿಸಬೇಕು.
56
ಈ ವಸ್ತುಗಳನ್ನು ಮನೆಗೆ ತನ್ನಿ
ಪೂಜೆ ಮುಗಿದ ನಂತರ, ಶಿವಾಲಯದಿಂದ ಕೆಲವು ವಸ್ತುಗಳನ್ನು ಮನೆಗೆ ತರುವುದು ತುಂಬಾ ಒಳ್ಳೆಯದು. ಅಭಿಷೇಕದ ನಂತರ ಶಿವಲಿಂಗಕ್ಕೆ ಅರ್ಪಿಸಿದ ಬಿಲ್ವಪತ್ರೆಯನ್ನು ಮನೆಗೆ ತನ್ನಿ. ಅದನ್ನು ನಿಮ್ಮ ಪರ್ಸ್, ಹಣ ಇಡುವ ಜಾಗ ಅಥವಾ ದೇವರ ಕೋಣೆಯಲ್ಲಿ ಇಡಿ. ಇದು ಮನೆಯಲ್ಲಿ ಸಂಪತ್ತು, ಸಮೃದ್ಧಿಯನ್ನು ಹೆಚ್ಚಿಸುತ್ತದೆ.
66
ಈ ವಸ್ತುಗಳನ್ನು ಮನಗೆ ತನ್ನಿ
ಹಾಗೆಯೇ, ಪಾರ್ವತಿ ದೇವಿಗೆ ಅರ್ಪಿಸಿದ ಬಳೆ, ಕುಂಕುಮವನ್ನು ಮನೆಗೆ ತಂದು ಧರಿಸಿದರೆ ಅದೃಷ್ಟ ಒಲಿಯುತ್ತದೆ. ದಾಂಪತ್ಯದಲ್ಲಿ ಪ್ರೀತಿ ಹೆಚ್ಚುತ್ತದೆ. ಶಿವಲಿಂಗಕ್ಕೆ ಅಭಿಷೇಕ ಮಾಡಿದ ನೀರನ್ನು ಒಂದು ಕಲಶದಲ್ಲಿ ಸಂಗ್ರಹಿಸಿ ಮನೆಯಲ್ಲಿ ಇಟ್ಟುಕೊಳ್ಳುವುದು ಕೂಡಾ ಶ್ರೇಷ್ಠ. ಈ ನೀರನ್ನು ಮನೆಯ ನಾಲ್ಕು ಮೂಲೆಗಳಿಗೆ ಚಿಮುಕಿಸಿದರೆ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವವರ ಮೇಲೆ ಚಿಮುಕಿಸಿದರೆ ಆರೋಗ್ಯ ಸುಧಾರಿಸುತ್ತದೆ. ವಿಶೇಷವಾಗಿ ಸೋಮವಾರದಂದು ಈ ನೀರನ್ನು ಚಿಮುಕಿಸುವುದರಿಂದ ಹೆಚ್ಚು ಪ್ರಯೋಜನ ಸಿಗುತ್ತದೆ.