ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿ ಮತ್ತು ನಕ್ಷತ್ರಗಳನ್ನು ಬದಲಾಯಿಸುತ್ತವೆ. ಸೂರ್ಯ ಪ್ರತಿ ತಿಂಗಳು ರಾಶಿ ಬದಲಿಸಿದರೆ, ಗುರು ಗ್ರಹವು ವರ್ಷಕ್ಕೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಈಗ ಗುರು ಗ್ರಹವು ತನ್ನ ಉಚ್ಛ ರಾಶಿಯಾದ ಕಟಕ ರಾಶಿಯನ್ನು ಪ್ರವೇಶಿಸುತ್ತಿದೆ. ಇದೇ ವೇಳೆ, ಜುಲೈ 16 ರಂದು ಸೂರ್ಯ ಕೂಡ ಕಟಕ ರಾಶಿಗೆ ಸಾಗಲಿದ್ದಾನೆ. ಇದರಿಂದ ಕಟಕ ರಾಶಿಯಲ್ಲಿ ಗುರು ಮತ್ತು ಸೂರ್ಯನ ಸಂಯೋಗ ನಡೆಯಲಿದೆ. ಈ ಸಂಯೋಗದಿಂದ 'ಗುರು ಆದಿತ್ಯ ರಾಜಯೋಗ' ರೂಪುಗೊಳ್ಳಲಿದೆ. ಈ ಯೋಗವು ಆಗಸ್ಟ್ 17 ರವರೆಗೆ, ಅಂದರೆ ಒಂದು ತಿಂಗಳ ಕಾಲ ಇರುತ್ತದೆ. ಈ ರಾಜಯೋಗದಿಂದ ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿಗಳ ಮೇಲೆ ಬದಲಾವಣೆಗಳಾಗುತ್ತವೆ. ಆದರೆ, ಈ ಕೆಳಗಿನ 6 ರಾಶಿಯವರಿಗೆ ಇದು ಕೋಟ್ಯಾಧಿಪತಿ ಯೋಗ ಮತ್ತು ಭಾರಿ ಯಶಸ್ಸನ್ನು ತಂದುಕೊಡಲಿದೆ.