
ಈ ಬ್ರಹ್ಮಾಂಡದ ರಕ್ಷಕ ಎಂದು ಪುರಾಣಗಳಲ್ಲಿ ಉಲ್ಲೇಖಿಸಿರುವ ದೇವರು ಮಹಾವಿಷ್ಣು. ಹೀಗಾಗಿ ಜನರು ಲೌಕಿಕ ಆಶೀರ್ವಾದಗಳಿಗಾಗಿ ಮಾತ್ರವಲ್ಲದೆ ಆಂತರಿಕ ಶಾಂತಿ, ಶಕ್ತಿ ಮತ್ತು ಗುಣಪಡಿಸುವಿಕೆಗಾಗಿಯೂ ಅವನ ಕಡೆಗೆ ತಿರುಗುತ್ತಾರೆ. ಭಗವಾನ್ ವಿಷ್ಣುವಿನ ಉಪಸ್ಥಿತಿಯು ತುಂಬಾ ಆಳವಾದ ಮತ್ತು ಸುಂದರವಾದ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ, ಭಗವಾನ್ ವಿಷ್ಣುವಿನ ಹಲವು ಅವತಾರಗಳಾದ ರಾಮ, ಶ್ರೀಕೃಷ್ಣ, ಮತ್ಸ್ಯ ಅವತಾರ ಅಥವಾ ಇನ್ನುಳಿದ ಅವತಾರವಾಗಿರಬಹುದು, ಅದು ಜನರು ಪ್ರಕ್ಷುಬ್ಧ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಜೀವನದ ಯಾವುದೇ ಅನುಮಾನ ಮತ್ತು ಗೊಂದಲವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆದ್ದರಿಂದ, ಇಲ್ಲಿ ನಾವು ನಮ್ಮನ್ನುಒಳಗಿನಿಂದ ಗುಣಪಡಿಸಲು ಸಹಾಯ ಮಾಡುವ ಭಗವಾನ್ ವಿಷ್ಣುವಿನ 6 ಶಕ್ತಿಶಾಲಿ ಮಂತ್ರಗಳ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದೇವೆ.
ವಿಷ್ಣುವಿನ ಅತ್ಯಂತ ಪ್ರಸಿದ್ಧ ಮಂತ್ರಗಳಲ್ಲಿ ಇದು ಒಂದು. ಓಂ ನಮೋ ಭಗವತೇ ವಾಸುದೇವಾಯ' ಎಂದರೆ ಎಲ್ಲೆಡೆ ಇರುವ ದೈವಿಕ ಶಕ್ತಿಯಾದ ವಿಷ್ಣುವಿಗೆ ನಾನು ನಮಸ್ಕರಿಸುತ್ತೇನೆ'ಇದು ಹನ್ನೆರಡು ಅಕ್ಷರಗಳನ್ನು ಹೊಂದಿರುವುದರಿಂದ ಮತ್ತು ನೆನಪಿಟ್ಟುಕೊಳ್ಳಲು ಮತ್ತು ಜಪಿಸಲು ಸರಳವಾಗಿರುವುದರಿಂದ ಇದನ್ನು ದ್ವಾದಶಾಕ್ಷರಿ ಮಂತ್ರ ಎಂದೂ ಕರೆಯುತ್ತಾರೆ, ಅತ್ಯಂತ ಶಕ್ತಿಶಾಲಿಯಾದ ಈ ಮಂತ್ರವನ್ನು ಪಠಿಸುವುದು ಅಥವಾ ಪದೇ ಪದೇ ಕೇಳುವುದರಿಂದ ಜನರು ವಿಷ್ಣುವಿನ ಶಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ ಮತ್ತು ಆಂತರಿಕ ಶಾಂತತೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.
ವಿಷ್ಣುವಿನ ಮತ್ತೊಂದು ಶಕ್ತಿಶಾಲಿ ಮಂತ್ರವೆಂದರೆ ಇದು. 'ಶಾಂತಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ ವಿಶ್ವಧರಂ ಗಗನಸದೃಶಂ ಮೇಘವರ್ಣಂ ಶುಭಾಂಗಂ'. ಸ್ತುತಿಯ ಮೊದಲ ಎರಡು ಸಾಲುಗಳು, ಇದರರ್ಥ 'ಭಗವಾನ್ ವಿಷ್ಣುವು ಸ್ವಭಾವತಃ ಶಾಂತನಾಗಿರುವವನು, ಶೇಷನಾಗದ ಮೇಲೆ ನಿಂತಿರುವವನು, ನಾಭಿಯಲ್ಲಿ ಕಮಲವನ್ನು ಹೊಂದಿರುವವನು, ದೇವರುಗಳ ಅಧಿಪತಿ, ವಿಶ್ವವನ್ನು ಬೆಂಬಲಿಸುವವನು, ಆಕಾಶದಂತೆ ಬಣ್ಣದಲ್ಲಿ ಕಾಣುವವನು ಮತ್ತು ಶಾಂತಿಯುತ ರೂಪವನ್ನು ಹೊಂದಿರುವವನು ಎಂದು ಹೇಳುತ್ತದೆ. ಇದು ವಿಷ್ಣುವಿನ ಗುಣಲಕ್ಷಣಗಳು ಮತ್ತು ಅವನ ಸ್ವಭಾವದ ಬಗ್ಗೆ.
ಭಕ್ತರು ವಿಷ್ಣುವಿನ ಸ್ಮರಣೆಯನ್ನು ಮಾಡಲು ಬಯಸಿದಾಗ ಮತ್ತು ಅವನ ಶಾಂತಿಯುತ, ಆದರೆ ಭವ್ಯವಾದ ರೂಪವನ್ನು ನೆನಪಿಸಿಕೊಳ್ಳಲು ಬಯಸಿದಾಗ ಇದನ್ನು ಸಾಮಾನ್ಯವಾಗಿ ಪಠಿಸಲಾಗುತ್ತದೆ.
ಇನ್ನೊಂದು ಸರಳ, ಆದರೆ ಶಕ್ತಿಶಾಲಿ ಮಂತ್ರ ಎಂದರೆ 'ಓಂ ನಮೋ ನಾರಾಯಣ', ಇದರ ಅರ್ಥ 'ನಾನು ವಿಷ್ಣುವಿಗೆ (ನಾರಾಯಣ) ನಮಸ್ಕರಿಸುತ್ತೇನೆ. ಇದು ವಿಷ್ಣುವಿಗೆ ಶರಣಾಗುವ ಸಾರ್ವತ್ರಿಕ ಮಂತ್ರವಾಗಿದೆ. ಮತ್ತು ಭಕ್ತರು ಓಂ ನಮೋ ನಾರಾಯಣ ಎಂದು ಜಪಿಸಿದಾಗ, ಅವರು ತಮ್ಮೊಳಗಿನ ಶಕ್ತಿಗಳಲ್ಲಿ ಬದಲಾವಣೆಯನ್ನು ಗಮನಿಸುತ್ತಾರೆ. ಓಂ ಮತ್ತು ನಾರಾಯಣ ಇಬ್ಬರೂ ಅಪಾರ ಶಕ್ತಿಯನ್ನು ಹೊಂದಿರುವುದರಿಂದ ಮತ್ತು ವಿಷ್ಣುವಿಗೆ ಶರಣಾಗುವ ಮೂಲಕ, ನೀವು ಅವನಿಗೆ ನಿಮ್ಮೆಲ್ಲವನ್ನೂ ನೀಡುತ್ತೀರಿ ಮತ್ತು ಆಶೀರ್ವಾದ, ರಕ್ಷಣೆಯನ್ನು ಕೇಳುತ್ತೀರಿ. ನೀವು ಈ ಮಂತ್ರವನ್ನು 108 ಬಾರಿ ಅಥವಾ ಅದಕ್ಕಿಂತ ಕಡಿಮೆ ಬಾರಿ ಆದರೆ ಸಂಪೂರ್ಣ ಸಮರ್ಪಣೆ ಮತ್ತು ಏಕಾಗ್ರತೆಯಿಂದ ಪಠಿಸಿದಾಗ ಒಳಗಿನಿಂದ ಗುಣಮುಖರಾಗಲು ಸಾಧ್ಯವಾಗುತ್ತದೆ.
ವಿಷ್ಣುವಿನ ಇನ್ನೊಂದು ಮಂತ್ರ 'ಮಂಗಳಂ ಭಗವಾನ್ ವಿಷ್ಣುಃ, ಮಂಗಲಂ ಗರುಡಧ್ವಜಃ, ಮಂಗಲಂ ಪುಂಡರೀಕಾಕ್ಷಃ, ಮಂಗಲಾಯ ತನೋ ಹರಿಃ' ಈ ಮಂತ್ರದ ಅರ್ಥ 'ಶುಭದ ಪ್ರತಿರೂಪವಾದ, ಗರುಡನನ್ನು ಸವಾರಿ ಮಾಡುವ ಮತ್ತು ಕಮಲದಂತಹ ಕಣ್ಣುಗಳನ್ನು ಹೊಂದಿರುವ ಭಗವಾನ್ ವಿಷ್ಣುವು ನಮ್ಮ ಜೀವನದಲ್ಲಿ ಒಳ್ಳೆಯತನ ಮತ್ತು ಯೋಗಕ್ಷೇಮವನ್ನು ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ'. ಇದು ಉತ್ತಮ ಆರೋಗ್ಯ, ಉತ್ತಮ ಸಂಬಂಧಗಳು ಮತ್ತು ಸಾಮಾನ್ಯವಾಗಿ ಉತ್ತಮ ಜೀವನಕ್ಕಾಗಿ ಮಾಡುವ ಪ್ರಾರ್ಥನೆಯಾಗಿದೆ ಮತ್ತು ಪೂರ್ಣ ಭಕ್ತಿಯಿಂದ ಈ ಮಂತ್ರವನ್ನು ಪಠಿಸುವುದು ಆಶೀರ್ವಾದಕ್ಕಿಂತ ಕಡಿಮೆ ಏನಲ್ಲ, ಇದನ್ನು ಯಾವುದಾದರು ಶುಭ ಸಮಾರಂಭಗಳ ಮೊದಲು ಪಠಿಸಲಾಗುತ್ತದೆ, ಆದರೆ ನೀವು ಧ್ಯಾನದಲ್ಲಿರುವಾಗ ಅದನ್ನು ಪಠಿಸಿದರೂ ಸಹ, ಅದು ಒಳಗಿನಿಂದ ಗುಣವಾಗಲು ಸಹಾಯ ಮಾಡುತ್ತದೆ ಮತ್ತು ಜೀವನದಲ್ಲಿ ಆಧ್ಯಾತ್ಮಿಕ ಯೋಗಕ್ಷೇಮವನ್ನು ತರುತ್ತದೆ.
ಜನರನ್ನು ಒಳಗಿನಿಂದ ಗುಣಪಡಿಸುವ ಭಗವಾನ್ ವಿಷ್ಣುವಿನ ಮಂತ್ರವೆಂದರೆ ಓಂ ಶ್ರೀ ವಿಷ್ಣವೇ ಚ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್'. ಇದನ್ನು ವಿಷ್ಣು ಗಾಯತ್ರಿ ಮಂತ್ರ ಎಂದೂ ಕರೆಯುತ್ತಾರೆ ಮತ್ತು ಇದು ಭಕ್ತನಿಗೆ ಬುದ್ಧಿವಂತಿಕೆ, ಮಾರ್ಗದರ್ಶನ, ಜೀವನದಲ್ಲಿ ಬೆಳಕು ಮತ್ತು ಇನ್ನೂ ಹೆಚ್ಚಿನದನ್ನು ಆಶೀರ್ವದಿಸುವಂತೆ ವಿಷ್ಣುವಿಗೆ ಮಾಡುವ ಪ್ರಾರ್ಥನೆಯಾಗಿದೆ. ಜನರು ಇದನ್ನು ನಿಯಮಿತವಾಗಿ ಜಪಿಸಿದಾಗ, ಅವರು ಕಾಲಾನಂತರದಲ್ಲಿ ಉತ್ತಮ ಮಾನಸಿಕ ಸ್ಥಿರತೆಯನ್ನು ಕಾಣುತ್ತಾರೆ. ಏನೇ ಆದರೂ ಭಗವಾನ್ ವಿಷ್ಣುವಿನ ಕೈ ಯಾವಾಗಲೂ ನಮ್ಮ ರಕ್ಷಣೆಗೆ ಹಾಗೂ ಮಾರ್ಗದರ್ಶನಕ್ಕೆ ಸಿದ್ಧವಿದೆ ಎಂಬ ನಂಬಿಕೆ ಬೆಳೆಸಿಕೊಳ್ಳುತ್ತಾರೆ.
ಎಲ್ಲಾ 'ಬೀಜ' ಶಬ್ದಗಳನ್ನು ಹೊಂದಿರುವ ಮಂತ್ರ ಇದು. 'ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀಂ ಸಿದ್ಧ ಲಕ್ಷ್ಮಿ ನಾರಾಯಣ ನಮಃ' ಎಂಬ ಈ ಮಂತ್ರ ಮೂಲತಃ ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುವ ತಾಯಿ ಲಕ್ಷ್ಮಿಯ ಶಕ್ತಿಯ ಸಹಿತ ಸಮತೋಲನ ಮತ್ತು ತೃಪ್ತಿಯನ್ನು ನೀಡುವ ಭಗವಾನ್ ವಿಷ್ಣುವಿನ ಮಂತ್ರವಾಗಿದೆ. 'ಶ್ರೀಂ', 'ಹ್ರೀಂ' ಮತ್ತು 'ಕ್ಲೀಂ' ಬೀಜ ಮಂತ್ರವು ಜೀವನದ ವಿವಿಧ ಭಾಗಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ನೀವು ಭಕ್ತಿ ಮತ್ತು ಏಕಾಗ್ರತೆಯಿಂದ ಮಂತ್ರವನ್ನು ಪಠಿಸಿದಾಗ ಉತ್ತಮ ಶಕ್ತಿಗಳನ್ನು ಆಕರ್ಷಿಸಲು ಸಹಾಯ ಮಾಡುತ್ತದೆ.