
ದೋಹಾ(ಜೂ.05): ಇಲ್ಲಿ ನಡೆದ ಫುಟ್ಬಾಲ್ ವಿಶ್ವಕಪ್, ಏಷ್ಯಾಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಏಷ್ಯಾ ಚಾಂಪಿಯನ್ ಕತಾರ್ ವಿರುದ್ಧ ಭಾರತ 1-0 ಗೋಲುಗಳ ವೀರೋಚಿತ ಸೋಲು ಕಂಡಿದೆ.
ಕತಾರ್ ಪರ ಅಬ್ದೆಲ್ ಅಜೀಜ್ 33ನೇ ನಿಮಿಷದಲ್ಲಿ ಗೋಲು ಹೊಡೆದರು. ಪಂದ್ಯದ 18ನೇ ನಿಮಿಷದಲ್ಲಿ 2ನೇ ಬಾರಿ ಹಳದಿ ಕಾರ್ಡ್ ಪಡೆದ ಕಾರಣ, ರಾಹುಲ್ ಮೈದಾನದಿಂದ ಹೊರನಡೆದರು. ಹೀಗಾಗಿ ಭಾರತ, ಉಳಿದ ಪಂದ್ಯವನ್ನು 10 ಆಟಗಾರರಿಂದಲೇ ಆಡಿದರೂ, ಉತ್ತಮ ಪ್ರದರ್ಶನ ತೋರಿ ಗಮನ ಸೆಳೆಯಿತು.
ಹೀಗಿತ್ತು ನೋಡಿ ಅಜೀಜ್ ಗೋಲು ಬಾರಿಸಿದ ಕ್ಷಣ:
ಕೊರೋನಾದಿಂದ ಕನಸು ನುಚ್ಚುನೂರು; ದಿನಗೂಲಿಯಿಂದ ಸಾಗುತ್ತಿದೆ ಭಾರತ ಫುಟ್ಬಾಲ್ ಆಟಗಾರ್ತಿ ಜೀವನ!
ಭಾರತದ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಅವರು ಎದುರಾಳಿ ತಂಡ ಗೋಲು ಹೊಡೆಯುವ 9 ಅವಕಾಶಗಳನ್ನು ತಡೆದು ಅದ್ಭುತ ಪ್ರದರ್ಶನ ನೀಡಿದರು. ಭಾರತ ಫುಟ್ಬಾಲ್ ತಂಡ ಕೊನೆಯಲ್ಲಿ ಆಕ್ರಮಣಕಾರಿ ಆಟದ ಮೊರೆ ಹೋಯಿತಾದರೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.