ಧನಲಕ್ಷ್ಮಿಯನ್ನು ಮನೆಗೆ ಕರೆ ತರುತ್ತೆ ಅಶೋಕ ಮರದ ಈ ಉಪಾಯ

By Suvarna NewsFirst Published Apr 20, 2023, 5:07 PM IST
Highlights

ಸೀತೆ ರಾವಣನ ಸೆರೆಯಲ್ಲಿ ಅಶೋಕ ಮರದ ಕೆಳಗೆ ಕುಳಿತು ರಾಮನ ಬರುವಿಕೆಗಾಗಿ ಕಾಯುತ್ತಿದ್ದಳು. ಶೋಕ ಪರಿಹರಿಸುವಂಥದ್ದು ಅಶೋಕ. ಈ ಮರದ ಪರಿಹಾರ ಕಾರ್ಯಗಳು ನಿಮ್ಮ ಶೋಕ, ನೋವುಗಳಿಗೂ ಮದ್ದಾದೀತು. 

ಅಶೋಕ ಮರ ಮತ್ತು ಅದರ ಎಲೆಗಳನ್ನು ಧಾರ್ಮಿಕ ದೃಷ್ಟಿಕೋನದಿಂದ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಅವುಗಳನ್ನು ಪೂಜಾ ಕಾರ್ಯಗಳಿಗೆ ಹಾಗೂ ವಾಸ್ತುದೋಷ ನಿವಾರಣೆಗೆ ಬಳಸಲಾಗುತ್ತದೆ. ಅಶೋಕ ಮರದ ಎಲೆಗಳ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ, ನಿಮ್ಮ ಸಂಪತ್ತು ಹೆಚ್ಚಾಗುತ್ತದೆ ಮತ್ತು ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ, ನಿಮ್ಮ ಮನೆಯಲ್ಲಿ ಸಂಪತ್ತನ್ನು ಸುರಿಸುತ್ತಾಳೆ. ಅಶೋಕ ಎಲೆಗಳ ವಿಶೇಷ ಪರಿಹಾರಗಳನ್ನು ನಾವು ನಿಮಗೆ ಹೇಳೋಣ.

ಹಿಂದೂ ಧರ್ಮಗ್ರಂಥಗಳಲ್ಲಿ, ಅಲೌಕಿಕ ಶಕ್ತಿಗಳಿವೆ ಎಂದು ನಂಬಲಾದ ಅನೇಕ ಮರಗಳು ಮತ್ತು ಸಸ್ಯಗಳ ಉಲ್ಲೇಖವಿದೆ. ಇವುಗಳಲ್ಲಿ ಅಶೋಕ ಮರವೂ ಒಂದು. ಅಶೋಕ ಮರವನ್ನು ಪೂಜಿಸಲಾಗುತ್ತದೆ ಮತ್ತು ಅಶೋಕ ಎಲೆಗಳನ್ನು ಧಾರ್ಮಿಕ ಕಾರ್ಯಗಳಲ್ಲಿ ಬಳಸಲಾಗುತ್ತದೆ. 

Latest Videos

ಅಶೋಕ ಎಂಬ ಹೆಸರು ಬಂದಿದ್ದು ಹೀಗೆ..
ರಾಮಾಯಣದಲ್ಲಿ ತಾಯಿ ಸೀತೆಯನ್ನು ಅಪಹರಿಸಿದ ನಂತರ ರಾವಣ ಅವಳನ್ನು ಅಶೋಕ ವಾಟಿಕಾಕ್ಕೆ ಕರೆದೊಯ್ದ ಘಟನೆಯಿದೆ. ಅಲ್ಲಿನ ಅಶೋಕ ವೃಕ್ಷದ ಕೆಳಗೆ ಕುಳಿತು ಸೀತಾ ಮಾತೆ ಶ್ರೀರಾಮ ಬರಲೆಂದು ಪ್ರಾರ್ಥಿಸುತ್ತಿದ್ದಳು. ಈ ಮರದ ಕೆಳಗೆ ಕೂತು ಪ್ರಾರ್ಥಿಸಿದ್ದರಿಂದ ಸೀತೆಯ ಎಲ್ಲಾ ದುಃಖಗಳು ದೂರವಾದ ಕಾರಣ ಈ ಮರವನ್ನು ಅಶೋಕ(ಶೋಕ ದೂರ ಮಾಡುವಂಥದ್ದು) ಎಂದೂ ಕರೆಯುತ್ತಾರೆ. ಅದಕ್ಕಾಗಿಯೇ ಈ ಮರ ಹಾಗೂ ಎಲೆಯನ್ನು ಪೂಜೆಯಲ್ಲಿ ಬಳಸುವುದರಿಂದ ಧನಾತ್ಮಕ ಫಲಿತಾಂಶಗಳನ್ನು ಗಳಿಸಬಹುದು ಎನ್ನಲಾಗುತ್ತದೆ.

Gautam Buddha Story: ಕರ್ಮ ಎಂದರೇನು? ರಾಜನ ಸಾವನ್ನು ಬಯಸಿದ ವ್ಯಾಪಾರಿಯ ಕತೆ!

ಅಶೋಕ ಮರದ ಪರಿಹಾರ
ನಿಮ್ಮ ಮನೆಯಲ್ಲಿ ಪದೇ ಪದೇ ಹಣದ ಕೊರತೆಯಿದ್ದರೆ ಮತ್ತು ನೀವು ನಿರಂತರವಾಗಿ ಆರ್ಥಿಕ ಬಿಕ್ಕಟ್ಟಿನಿಂದ ಸುತ್ತುವರೆದಿದ್ದರೆ, ಅಶೋಕ ಮರದ ಬೇರನ್ನು ನಿಮ್ಮ ಮನೆಗೆ ತಂದರೆ ನಿಮ್ಮ ಸಮಸ್ಯೆಗಳನ್ನು ಕೊನೆಗೊಳಿಸಬಹುದು. ಈ ಮರದ ಬೇರನ್ನು ನಿಮ್ಮ ಮನೆಯ ತಿಜೋರಿಯಲ್ಲಿ ಅಥವಾ ಅಂಗಡಿಯಲ್ಲಿನ ಹಣದ ಸ್ಥಳದಲ್ಲಿ ಇರಿಸಿ. ಹೀಗೆ ಮಾಡುವುದರಿಂದ ನಿಮ್ಮ ಹಣದ ಸಮಸ್ಯೆ ಶೀಘ್ರ ಪರಿಹಾರವಾಗುತ್ತದೆ.

ದಾಂಪತ್ಯ ಜೀವನದ ಸುಖಕ್ಕಾಗಿ..
ಪತಿ-ಪತ್ನಿಯರ ನಡುವೆ ಪದೇ ಪದೇ ಜಗಳ ಆಗುವ ಮನೆಯಲ್ಲಿ ಆ ಮನೆಯವರು ಅಶೋಕ ಎಲೆಯ ಈ ಪರಿಹಾರವನ್ನು ಮಾಡಬೇಕು. ನಿಮ್ಮ ಮನೆಯಲ್ಲಿ ಪೂಜಾ ಸ್ಥಳದಲ್ಲಿ 7 ಅಶೋಕ ಎಲೆಗಳನ್ನು ಇಟ್ಟರೆ ಸಾಕು. ಅದರ ನಂತರ, ಎಲೆಗಳು ಒಣಗಲು ಪ್ರಾರಂಭಿಸಿದಾಗ, ಅವುಗಳ ಸ್ಥಳದಲ್ಲಿ ಇತರ ಹಸಿರು ಎಲೆಗಳನ್ನು ಹಾಕಿ. ನಂತರ ಒಣ ಎಲೆಗಳನ್ನು ಅಶೋಕ ಮರದ ಬೇರಿಗೆ ಹಾಕುತ್ತಲೇ ಇರಿ. ಹೀಗೆ ಮಾಡುವುದರಿಂದ ನಿಮ್ಮ ವೈವಾಹಿಕ ಸಂಬಂಧ ಮಧುರವಾಗುತ್ತದೆ ಮತ್ತು ನಿಮ್ಮ ಮನೆಯಲ್ಲಿ ಸಮೃದ್ಧಿ ಇರುತ್ತದೆ.

ಅಶೋಕ ಎಲೆಗಳ ನಮಸ್ಕಾರ
ಅಶೋಕ ಎಲೆಗಳನ್ನು ಪೂಜಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಯಾವುದೇ ಹಬ್ಬದಂದು ಅಥವಾ ಮಂಗಳಕರ ಕಾರ್ಯಕ್ರಮದ ಮೊದಲು ಅದನ್ನು ಮನೆಯ ಮುಖ್ಯ ಬಾಗಿಲಿಗೆ ಹಾಕುವುದರಿಂದ ಯಾವುದೇ ಅಡೆತಡೆಗಳಿಲ್ಲದೆ ಆ ಕೆಲಸವು ಪೂರ್ಣಗೊಳ್ಳುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸಮೃದ್ಧಿ ಹೆಚ್ಚುತ್ತದೆ ಮತ್ತು ಧನಾತ್ಮಕ ಶಕ್ತಿ ಬರುತ್ತದೆ.

Jupiter Transit 2023: ಮಿಥುನ, ತುಲಾ ರಾಶಿಗೆ ರಾಜಕೀಯದಲ್ಲಿ ಅಧಿಕಾರ, ಉಳಿದ ರಾಶಿಗಳ ಫಲವೇನು?

ಲಕ್ಷ್ಮಿ ದೇವಿಯನ್ನು ಮೆಚ್ಚಿಸುವ ಮಾರ್ಗಗಳು
ನೀವು ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಲು ಬಯಸಿದರೆ, ನಿಮ್ಮ ಮನೆಯಲ್ಲಿ ಅಶೋಕ ಮರವನ್ನು ನೆಟ್ಟು ಅದಕ್ಕೆ ಪ್ರತಿದಿನ ನೀರನ್ನು ಅರ್ಪಿಸಿ. ನೀರನ್ನು ಅರ್ಪಿಸುವಾಗ ಲಕ್ಷ್ಮಿ ದೇವಿಯ ಮಂತ್ರವನ್ನು ಪಠಿಸುತ್ತಿರಿ. ನಿಮ್ಮ ಮನೆಯಲ್ಲಿ ನಿಮಗೆ ಸ್ಥಳವಿಲ್ಲದಿದ್ದರೆ, ನೀವು ಅದನ್ನು ಮಡಕೆಯಲ್ಲಿ ಸಣ್ಣ ರೂಪದಲ್ಲಿ ನೆಡಬಹುದು. ಇದು ಕೂಡ ಅದೇ ಫಲಿತಾಂಶವನ್ನು ನೀಡುತ್ತದೆ.

click me!