ವಿಧುರ ನೀತಿ: ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಮಹಾತ್ಮ ವಿಧುರ ಒಬ್ಬರು. ಹಸ್ತಿನಾಪುರದ ಮಹಾಮಂತ್ರಿ ಮತ್ತು ಧೃತರಾಷ್ಟ್ರ ಮತ್ತು ಪಾಂಡುವಿನ ಕಿರಿಯ ಸಹೋದರರೂ ಆಗಿದ್ದರು. ಅವರು ಹೇಳಿದ ನೀತಿಗಳು ಇಂದಿಗೂ ನಮಗೆ ತುಂಬಾ ಉಪಯುಕ್ತ.
Vidur Niti Life Management: ಮಹಾತ್ಮ ವಿಧುರ ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಬ್ಬರು. ಇಡೀ ಮಹಾಭಾರತದಲ್ಲಿ ಎಂಥಾ ಕಷ್ಟದ ಸಮಯದಲ್ಲೂ ಧರ್ಮವನ್ನು ಪಾಲನೆ ಮಾಡಿದ ವ್ಯಕ್ತಿಗಳಲ್ಲಿ ಇವರೂ ಒಬ್ಬರು. ಅವರು ಹೇಳಿದ ನೀತಿಗಳು ಇಂದಿಗೂ ನಮಗೆ ತುಂಬಾ ಉಪಯುಕ್ತ. ಅವರ ನೀತಿಗಳ ಸಂಗ್ರಹವನ್ನು ವಿಧುರ ನೀತಿ ಎಂದು ಕರೆಯಲಾಗುತ್ತದೆ. ಮಹಾತ್ಮ ವಿಧುರ ತಮ್ಮ ಒಂದು ನೀತಿಯಲ್ಲಿ 3 ಜನರ ಬಗ್ಗೆ ಹೇಳಿದ್ದಾರೆ, ಅವರು ಎಷ್ಟೇ ಹಣ ಗಳಿಸಿದರೂ ಸ್ವಂತ ಆಸ್ತಿಗೆ ಎಂದಿಗೂ ಅವರು ಮಾಲೀಕರಲ್ಲ. ಈ ಮೂರು ಜನ ಯಾರು ಅನ್ನೋದನ್ನ ಇಲ್ಲಿ ತಿಳಿಯಬಹುದು
ವಿಧುರ ನೀತಿಯ ಶ್ಲೋಕ
त्रय एवाधना राजन् भार्या दासस्तथा सुत:।
यत्ते समाधिगच्छन्ति यस्य ते तस्य तद्धनम्।।
ತ್ರಯ ಏವಾಧನ ರಾಜನ್ ಭಾರ್ಯ ದಾಸಸ್ತಥಾ ಸುತ:।
ಯತ್ತೇ ಸಮಾಧಿಗಚ್ಛಂತಿ ಯಸ್ಯ ತೇ ತಸ್ಯ ತದ್ಧನಮ್।।
ಅರ್ಥ- ಈ ಮೂವರನ್ನು ಧನದ ಅಧಿಕಾರಿಗಳು ಎಂದು ಪರಿಗಣಿಸಲಾಗುವುದಿಲ್ಲ - ಹೆಂಡತಿ, ಮಗ ಮತ್ತು ಸೇವಕ. ಇವರು ಏನೇ ಗಳಿಸಿದರೂ, ಅದು ಅವರ ಅಧೀನದಲ್ಲಿರುವವರದ್ದೇ ಆಗಿರುತ್ತದೆ.
ಹೆಂಡತಿಯ ಧನ ಯಾರದ್ದು?: ಮಹಾತ್ಮ ವಿಧುರ ಪ್ರಕಾರ, ಹುಡುಗಿಯ ಮದುವೆ ಆಗುವವರೆಗೂ ಅವಳ ಗಳಿಕೆಯ ಮೇಲೆ ತಂದೆಯ ಹಕ್ಕು ಇರುತ್ತದೆ ಮತ್ತು ಮದುವೆಯ ನಂತರ ಅವಳ ಗಳಿಕೆಯ ಮೇಲೆ ಗಂಡನ ಹಕ್ಕು ಇರುತ್ತದೆ. ಈ ರೀತಿಯಾಗಿ ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಎಷ್ಟೇ ಧನ-ಸಂಪತ್ತನ್ನು ಗಳಿಸಿದರೂ, ಆ ಧನ ಅವಳದ್ದಲ್ಲ. ಈ ಧನ ಅವಳ ಅಧೀನದಲ್ಲಿರುವವರದ್ದೇ ಆಗಿರುತ್ತದೆ.
ಮಗನ ಧನ ಯಾರದ್ದು?: ಧರ್ಮಗ್ರಂಥಗಳ ಪ್ರಕಾರ, ಮಗ ಯಾವಾಗಲೂ ತನ್ನ ತಂದೆಯ ಅಧೀನದಲ್ಲಿರುತ್ತಾನೆ, ತಂದೆ ವಯಸ್ಸಾದವರಾಗಿದ್ದರೂ ಸಹ. ಆದ್ದರಿಂದ ಮಗ ಗಳಿಸಿದ ಧನದ ಮೇಲೆ ಮೊದಲ ಹಕ್ಕು ತಂದೆಯದ್ದೇ ಎಂದು ಪರಿಗಣಿಸಲಾಗಿದೆ. ತಂದೆ ಜೀವಂತವಾಗಿರುವವರೆಗೂ ಮಗನ ಧನದ ಮೇಲೆ ಅವರದ್ದೇ ಹಕ್ಕು ಎಂದು ಪರಿಗಣಿಸಲಾಗಿದೆ.
ವಿಧುರ ನೀತಿ: ಮಹಿಳೆಯರು ಕೊಳಕು ಬಟ್ಟೆಗಳನ್ನು ಧರಿಸಬೇಕಾ?
ಸೇವಕನ ಧನ ಯಾರದ್ದು?: ಮಹಾತ್ಮ ವಿಧುರ ಪ್ರಕಾರ, ಸೇವಕ ಎಂದಿಗೂ ಸ್ವತಂತ್ರನಲ್ಲ, ಅವನು ಯಾವಾಗಲೂ ತನ್ನ ಯಜಮಾನನ ಅಧೀನದಲ್ಲಿರುತ್ತಾನೆ. ಆದ್ದರಿಂದ ಸೇವೆಗೆ ಪ್ರತಿಯಾಗಿ ಯಜಮಾನನು ಸೇವಕನಿಗೆ ಏನೇ ಧನವನ್ನು ನೀಡಿದರೂ, ಅದರ ಮೇಲೆ ಮೊದಲ ಹಕ್ಕು ಯಜಮಾನನದ್ದೇ ಎಂದು ಪರಿಗಣಿಸಲಾಗಿದೆ. ಅಗತ್ಯ ಬಿದ್ದರೆ ಯಜಮಾನನು ಆ ಧನವನ್ನು ಸೇವಕನಿಂದ ವಾಪಸ್ ಪಡೆಯಬಹುದು.
ವಿಧುರ ನೀತಿಯ ಈ ವಿಚಾರ ತಿಳಿದಿರಲಿ: ಈ 5 ಗುಣವಿರುವ ಜನರು ಬೇಗನೇ ಸಾಯುತ್ತಾರೆ!
Disclaimer
ಈ ಲೇಖನದಲ್ಲಿರುವ ಮಾಹಿತಿಯನ್ನು ಜ್ಯೋತಿಷಿಗಳು ತಿಳಿಸಿದ್ದಾರೆ. ನಾವು ಈ ಮಾಹಿತಿಯನ್ನು ನಿಮಗೆ ತಲುಪಿಸುವ ಒಂದು ಮಾಧ್ಯಮ ಮಾತ್ರ. ಬಳಕೆದಾರರು ಈ ಮಾಹಿತಿಯನ್ನು ಕೇವಲ ಮಾಹಿತಿ ಎಂದು ಪರಿಗಣಿಸಬೇಕು.