ಈ 6 ಲಕ್ಷಣಗಳು ಕಂಡು ಬಂದರೆ 6 ತಿಂಗಳೊಳಗೆ ಸಾವು ಖಚಿತ..

Published : Jun 13, 2023, 11:43 AM IST
ಈ 6 ಲಕ್ಷಣಗಳು ಕಂಡು ಬಂದರೆ 6 ತಿಂಗಳೊಳಗೆ ಸಾವು ಖಚಿತ..

ಸಾರಾಂಶ

ಮನುಷ್ಯನಿಗೆ ಸಾವು (death) ಯಾವುದೇ ಸಮಯದಲ್ಲಿ ಬರಬಹುದು. ಒಬ್ಬ ವ್ಯಕ್ತಿಯು ಆರು ತಿಂಗಳ ಮೊದಲು ಸಾವಿನ ಭಾವನೆಯನ್ನು ಪಡೆಯುತ್ತಾನೆ ಎಂದು ಹೇಳುತ್ತಾರೆ. ಮರಣಕ್ಕೂ 6 ತಿಂಗಳು ಮುನ್ನ ಓರ್ವ ವ್ಯಕ್ತಿಗೆ ಯಾವೆಲ್ಲಾ ಲಕ್ಷಣಗಳು ಕಾಣಿಸಬಹುದು ಎಂದು ಮಾಹಿತಿ ಇಲ್ಲಿದೆ.

ಮನುಷ್ಯನಿಗೆ ಸಾವು (death) ಯಾವುದೇ ಸಮಯದಲ್ಲಿ ಬರಬಹುದು. ಒಬ್ಬ ವ್ಯಕ್ತಿಯು ಆರು ತಿಂಗಳ ಮೊದಲು ಸಾವಿನ ಭಾವನೆಯನ್ನು ಪಡೆಯುತ್ತಾನೆ ಎಂದು ಹೇಳುತ್ತಾರೆ. ಮರಣಕ್ಕೂ 6 ತಿಂಗಳು ಮುನ್ನ ಓರ್ವ ವ್ಯಕ್ತಿಗೆ ಯಾವೆಲ್ಲಾ ಲಕ್ಷಣಗಳು ಕಾಣಿಸಬಹುದು ಎಂದು ಮಾಹಿತಿ ಇಲ್ಲಿದೆ.

ಸಾವು ಅನಿವಾರ್ಯ, ಜಗತ್ತಿನಲ್ಲಿ ಹುಟ್ಟಿದ ಯಾವುದೇ ಜೀವಿ ಸಾಯುವುದು ನಿಶ್ಚಿತ. ಸಾವು ಯಾವಾಗ ಮತ್ತು ಹೇಗೆ ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಸಾವಿಗೆ ಸಂಬಂಧಿಸಿದ ಈ ಆಳವಾದ ರಹಸ್ಯ (secret) ವನ್ನು ಶಿವ ಪುರಾಣ (Shiva Purana) ದಲ್ಲಿ ಹೇಳಲಾಗಿದೆ.

ಭೋಲೇನಾಥ್ ಒಮ್ಮೆ ತಾಯಿ ಪಾರ್ವತಿಗೆ ಸಾವಿನ ಮೊದಲು ಕಾಣುವ ಲಕ್ಷಣಗಳ ಬಗ್ಗೆ ಹೇಳಿದರು. ಈ ಚಿಹ್ನೆಗಳ ಮೂಲಕ ಮನುಷ್ಯನು ತನ್ನ ಸಾವು (death) ಹತ್ತಿರದಲ್ಲಿದೆ ಎಂದು ಈಗಾಗಲೇ ತಿಳಿದಿರುತ್ತಾನೆ. ಅಂತಹ ಸ್ಥಿತಿಯಲ್ಲಿ ಅವನು ದೇವರ ಸ್ಮರಣೆ (Remembering God) ಯನ್ನು ಪ್ರಾರಂಭಿಸಬೇಕು. ಇದರಿಂದ ಅಂತ್ಯಕಾಲವು ಆಹ್ಲಾದಕರವಾಗಿರುತ್ತದೆ. ಹಾಗಾದರೆ ಸಾವಿಗೆ ಮುನ್ನ ವ್ಯಕ್ತಿಗೆ ಯಾವ ಲಕ್ಷಣಗಳು ಕಾಣಿಸಬಹುದು ಎಂದು ತಿಳಿಯೋಣ.

ಸಾವಿನ ಮೊದಲು ಕಾಣುವ ಚಿಹ್ನೆಗಳು

ಶಿವ ಪುರಾಣದಲ್ಲಿ ಭೋಲೇನಾಥನು ತಾಯಿ ಪಾರ್ವತಿಗೆ ಸಾವಿನ ರಹಸ್ಯ (secret of death) ವನ್ನು ಹೇಳಿದನು. ಒಬ್ಬನ ನಾಲಿಗೆ, ಮೂಗು, ಕಿವಿ ಮತ್ತು ಬಾಯಿ ನಡುಗಿದರೆ ಅವನು 6 ತಿಂಗಳೊಳಗೆ ಸಾಯುತ್ತಾನೆ. ಇಂತಹ ಸ್ಥಿತಿಯಲ್ಲಿ ದೇವರನ್ನು ಸ್ಮರಿಸಲು ಆರಂಭಿಸಬೇಕು.

ನೆರಳಿನ ನಿಲುಗಡೆ

ಒಬ್ಬ ವ್ಯಕ್ತಿಯು ಕನ್ನಡಿ (mirror), ಎಣ್ಣೆ ಮತ್ತು ನೀರಿನಲ್ಲಿ ತನ್ನ ಪ್ರತಿಬಿಂಬ (reflection) ವನ್ನು ನೋಡುವುದನ್ನು ಇದ್ದಕ್ಕಿದ್ದಂತೆ ನಿಲ್ಲಿಸಿದರೆ, ಅವನ ಸಾವು ಹತ್ತಿರದಲ್ಲಿದೆ ಎಂದು ಅವನು ತಿಳಿದುಕೊಳ್ಳಬೇಕು ಎಂದು ಶಿವನು ಹೇಳುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ ಅವನು ತನ್ನ ಸಮಯವನ್ನು ದೇವರ ಪೂಜೆಯಲ್ಲಿ ಕಳೆಯಬೇಕು.

ಸಂಗಾತಿಯನ್ನು ರಾಣಿಯಂತೆ ನೋಡಿಕೊಳ್ಳುವ ರಾಶಿ ಚಕ್ರ ಯಾವುದು...?

 

ಹಕ್ಕಿ ತಲೆಯ ಮೇಲೆ ಕುಳಿತರೆ

ಶಿವಪುರಾಣದ ಪ್ರಕಾರ, ಪಾರಿವಾಳ (dove) ಅಥವಾ ರಣಹದ್ದು ವ್ಯಕ್ತಿಯ ತಲೆಯ ಮೇಲೆ ಕುಳಿತರೆ, ಅದು ಸಾವನ್ನು ಸೂಚಿಸುತ್ತದೆ. ಈ ಚಿಹ್ನೆಯು ನಿಮ್ಮ ಜೀವನದಲ್ಲಿ ಏನಾದರೂ ದುರಂತ (Tragedy) ಸಂಭವಿಸಲಿದೆ ಎಂದು ಸೂಚಿಸುತ್ತದೆ. 

ದೇಹದ ಬಣ್ಣ ಬದಲಾದರೆ

ಒಬ್ಬ ವ್ಯಕ್ತಿಯ ದೇಹವು ಇದ್ದಕ್ಕಿದ್ದಂತೆ ಹಳದಿ (Yellow) ಅಥವಾ ಬಿಳಿ ಬಣ್ಣಕ್ಕೆ ತಿರುಗಿದರೆ, ಅದು ಅವನ ಅಂತ್ಯವು ಹತ್ತಿರದಲ್ಲಿದೆ ಎಂಬುದರ ಸಂಕೇತವಾಗಿದೆ ಎಂದು ಪುರಾಣಗಳು ಹೇಳುತ್ತವೆ. ಅದೇ ಸಮಯದಲ್ಲಿ, ದೇಹದ ಮೇಲೆ ಕೆಂಪು ದದ್ದು (Red rash) ಗಳು ಕಾಣಿಸಿಕೊಳ್ಳುತ್ತವೆ.

Ravan Charitra: ಅಪಹರಿಸಿದರೂ ಸೀತೆಯನ್ನು ರಾವಣ ಮುಟ್ಟದಿರಲು ಕಾರಣವೇನು?

 

ದೃಷ್ಟಿ ಪರಿಣಾಮ ಬೀರಿದರೆ

ಶಿವ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯ ಮರಣವು ತುಂಬಾ ಹತ್ತಿರದಲ್ಲಿದ್ದಾಗ, ಅವನ ದೃಷ್ಟಿ (vision) ಇದ್ದಕ್ಕಿದ್ದಂತೆ ಬಹಳ ದುರ್ಬಲಗೊಳ್ಳುತ್ತದೆ. ಅವನು ತನ್ನ ಸುತ್ತಲಿನ ಜನರನ್ನು ಚೆನ್ನಾಗಿ ನೋಡುವುದಿಲ್ಲ. ಅವನು ತನ್ನ ಸುತ್ತಲೂ ಕತ್ತಲೆ (darkness) ಯನ್ನು ನೋಡಲಾರಂಭಿಸುತ್ತಾನೆ.

ಬೆಳಕು ನೋಡಲು ಸಾಧ್ಯವಾಗಲ್ಲ

ಮನುಷ್ಯನಿಗೆ ಸಾವು ಸಮೀಪ ಬಂದಾಗ ಬೆಳಕ (light) ನ್ನು ನೋಡಲು ಸಾಧ್ಯವಾಗಲ್ಲ. ಚಂದ್ರ, ಸೂರ್ಯ  (sun) ಅಥವಾ ಬೆಂಕಿಯಿಂದ ಉತ್ಪತ್ತಿಯಾಗುವ ಬೆಳಕನ್ನು ನೋಡಲು ಆಗಲ್ಲ. ಅಂತಹ ವ್ಯಕ್ತಿಯು ಇನ್ನೂ ಕೆಲವು ತಿಂಗಳಲ್ಲಿ ಸಾಯುತ್ತಾನೆ ಎಂಬುದನ್ನು ಅರ್ಥೈಸಿಕೊಳ್ಳಬೇಕು.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ