ಶೃಂಗೇರಿ ಶಾರದ ಪೀಠದ ಶ್ರೀಗಳ ವಿರಚಿತ 'ವೇದದೀಪಿಕಾ' ಗ್ರಂಥ ಬಿಡುಗಡೆ!

By Kannadaprabha NewsFirst Published Jan 19, 2024, 9:23 AM IST
Highlights

ಶೃಂಗೇರಿ ಜಗದ್ಗುರು ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ದಕ್ಷಿಣಂನಯ ಶೃಂಗೇರಿ ಶಾರದ ಪೀಠದ ವಿಧುಶೇಖರಭಾರತಿ ಮಹಾಸ್ವಾಮೀಜಿಯವರಿಂದ ರಚಿಸಲ್ಪಟ್ಟಿರುವ ‘ವೇದದೀಪಿಕಾ’ ಗ್ರಂಥ ಇತ್ತೀಚೆಗೆ ಶೃಂಗೇರಿಯಲ್ಲಿ ಲೋಕಾರ್ಪಣೆಗೊಂಡಿದೆ.

ಬೆಂಗಳೂರು (ಜ.19): ಶೃಂಗೇರಿ ಜಗದ್ಗುರು ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ದಕ್ಷಿಣಂನಯ ಶೃಂಗೇರಿ ಶಾರದ ಪೀಠದ ವಿಧುಶೇಖರಭಾರತಿ ಮಹಾಸ್ವಾಮೀಜಿಯವರಿಂದ ರಚಿಸಲ್ಪಟ್ಟಿರುವ ‘ವೇದದೀಪಿಕಾ’ ಗ್ರಂಥ ಇತ್ತೀಚೆಗೆ ಶೃಂಗೇರಿಯಲ್ಲಿ ಲೋಕಾರ್ಪಣೆಗೊಂಡಿದೆ.

ನಾಲ್ಕು ವೇದಗಳ ವಿಸ್ತೃತ ಪರಿಚಯ ಹಾಗೂ ವೇದಗಳ ನೈಜೋದ್ದೇಶ ನಿರೂಪಣೆ, ಸಂಧ್ಯಾವಂದನೆಯ ಗೂಢಾರ್ಥದ ಪರಿಚಯ ಹಾಗೂ ಶಾಸ್ತ್ರಾಧಾರಸಹಿತವಾಗಿ ಸಂಧ್ಯಾವಂದನೆಯ ವಿಧಿ-ವಿಧಾನಗಳ ವಿಮರ್ಶೆ, ನಮಸ್ಕಾರ ಕ್ರಿಯೆ, ಸಶಾಸ್ತ್ರೀಯವಾಗಿ ತರ್ಪಣದ ಹಿನ್ನೆಲೆ ಹಾಗೂ ಅದರ ವಿಧಿ ವಿಧಾನಗಳ ಸಂಪೂರ್ಣ ವಿಮರ್ಶೆ ಗ್ರಂಥದಲ್ಲಿದೆ.

Latest Videos

ಪ್ರಾತಃಸ್ಮರಣೆ, ತುಳಸೀಪೂಜೆ, ನಿತ್ಯದೇವತಾರ್ಚನೆ, ವೇದಭಾಗದಿಂದ ಶ್ರೀರುದ್ರಪ್ರಶ್ನ, ಶ್ರೀಚಮಕಪ್ರಶ್ನ, ಅರುಣಪ್ರಶ್ನ, ಉದಕಶಾಂತಿ ಹಾಗೂ 26 ಸೂಕ್ತಗಳು, ಉಪನಿಷತ್ತುಗಳು, ಶಾಂತಿ ಮಂತ್ರಗಳನ್ನು ಈ ಗ್ರಂಥ ಒಳಗೊಂಡಿದೆ. ಸಹಸ್ರನಾಮಾವಳಿಗಳು ಮತ್ತು ತರ್ಪಣವಿಧಿಗಳು ಮೊದಲಾದ ಇನ್ನೂ ಬಹಳಷ್ಟು ವಿಶೇಷವಾದ ವಿಷಯಗಳನ್ನು ವೇದದೀಪಿಕಾದಲ್ಲಿವೆ.

ಫೆ.16ರಂದು ಸಿದ್ದರಾಮಯ್ಯರಿಂದ ರಾಜ್ಯ ಬಜೆಟ್‌ ಮಂಡನೆ: ಸಚಿವ ಎಚ್‌.ಕೆ.ಪಾಟೀಲ್‌

ಸಾಮಾನ್ಯ ವ್ಯಕ್ತಿಗೆ ಬೇಕಾದ ಸಮಸ್ತ ವಿಷಯಗಳು ಈ ಗ್ರಂಥದಲ್ಲಿ ಅಡಕವಾಗಿವೆ. ಸಾಮಾನ್ಯ ವರ್ಗದಿಂದ ಹಿಡಿದು ಎಲ್ಲ ವರ್ಗದವರಿಗೂ ನಮ್ಮ ಸನಾತನ ಸಂಸ್ಕೃತಿ ಹಾಗೂ ಸನಾತನಾರ್ಯ ಮಹರ್ಷಿಗಳ ಸಾಹಿತ್ಯದ ಕಲಿಕೆಯು ಸುಲಭವಾಗಿಸುವುದು ಈ ಗ್ರಂಥದ ಪರಮೋದ್ದೇಶವಾಗಿದೆ ಎಂದು ಶ್ರೀ ಶಂಕರ ವೇದ ಪಾಠಶಾಲಾ ಟ್ರಸ್ಟ್ ತಿಳಿಸಿದೆ.

click me!