ರಾಮಮಂದಿರದಲ್ಲಿ ಇಂದಿನಿಂದ ಶುರು ಪೂರ್ವಾಭಾವಿ ಆಚರಣೆಗಳು; 7 ದಿನಗಳ ವಿಧಿ ವಿಧಾನಗಳೇನು?

Published : Jan 16, 2024, 12:27 PM IST
ರಾಮಮಂದಿರದಲ್ಲಿ ಇಂದಿನಿಂದ ಶುರು ಪೂರ್ವಾಭಾವಿ ಆಚರಣೆಗಳು;  7 ದಿನಗಳ ವಿಧಿ ವಿಧಾನಗಳೇನು?

ಸಾರಾಂಶ

ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ಕಾರ್ಯದ ಪೂರ್ವಾಭಾವಿ ಕಾರ್ಯಕ್ರಮಗಳು ಇಂದಿನಿಂದ ಆರಂಭಗೊಂಡಿವೆ. ಇಂದಿನಿಂದ ದೇವಾಲಯದಲ್ಲಿ ಏನೆಲ್ಲ ವಿಧಿಗಳು ಜರುಗಲಿವೆ ತಿಳಿಯೋಣ.

ಅಯೋಧ್ಯೆಯ ರಾಮ ಮಂದಿರದ ಮಹಾಭಿಷೇಕ ಸಮಾರಂಭಕ್ಕೆ ಇನ್ನು ಕೇವಲ ಒಂದು ವಾರ ಮಾತ್ರ ಬಾಕಿ ಇದೆ. ಜನವರಿ 16ರಿಂದ, ಭಗವಾನ್ ರಾಮನ ಶಿಶು ರೂಪವಾದ ರಾಮ್ ಲಲ್ಲಾನ 'ಪ್ರಾಣ ಪ್ರತಿಷ್ಠಾ' ಗಾಗಿ ವೈದಿಕ ಆಚರಣೆಗಳು ಪ್ರಾರಂಭವಾಗಲಿವೆ. ವೈದಿಕ ವಿಧಿಗಳ ಏಳನೇ ಮತ್ತು ಅಂತಿಮ ದಿನದಂದು, ಜನವರಿ 22ರಂದು ಮಧ್ಯಾಹ್ನ 12:15 ರಿಂದ 12:45 ರ ಸಮಯದಲ್ಲಿ ದೇವಸ್ಥಾನದಲ್ಲಿ ಭಗವಾನ್ ರಾಮನು ವಿಧ್ಯುಕ್ತವಾಗಿ ಕುಳಿತುಕೊಳ್ಳುತ್ತಾನೆ.

ಅಯೋಧ್ಯೆ ದೇವಾಲಯದ ಉದ್ಘಾಟನೆಯು ವಿಶ್ವಾದ್ಯಂತ ಹಿಂದೂಗಳಿಗೆ ಅತ್ಯಂತ ಮಹತ್ವದ್ದಾಗಿದೆ. ಉದ್ಘಾಟನೆಯು ಅಯೋಧ್ಯಾ ನಗರಕ್ಕೆ ಆಧ್ಯಾತ್ಮಿಕ ಮಹತ್ವ ಮತ್ತು ಆರ್ಥಿಕ ಸಮೃದ್ಧಿಯ ಹೊಸ ಯುಗವನ್ನು ಸೂಚಿಸುತ್ತದೆ. ಈ ಕಾರ್ಯಕ್ರಮವು ವಿಶ್ವಾದ್ಯಂತ ಹಿಂದೂಗಳ ನಡುವೆ ಏಕತೆ ಮತ್ತು ಸೌಹಾರ್ದತೆಯ ಭಾವನೆಯನ್ನು ಬೆಳೆಸುತ್ತಿದೆ.

ಭಕ್ತರಿಗೆ ರಾಮಲಲ್ಲಾ ದರ್ಶನ ಯಾವಾಗಿಂದ? ದೇಗುಲ ಸಮಿತಿಯಿಂದ ದಿನಾಂಕ ಘೋಷಣೆ

ಅಯೋಧ್ಯೆಯಲ್ಲಿ ಇಂದಿನಿಂದ ಜರುಗುವ ವಿಧಿ ವಿಧಾನಗಳ ವೇಳಾಪಟ್ಟಿ ಇಲ್ಲಿದೆ; 
ವೇಳಾಪಟ್ಟಿಯು ಜನವರಿ 16ರಂದು ಪ್ರಾಯಶ್ಚಿತ್ತ ಸಮಾರಂಭ ಮತ್ತು ದಶವಿಧ ಸ್ನಾನವನ್ನು ಒಳಗೊಂಡಿದೆ. ಸರಯೂ ನದಿಯ ದಡದಲ್ಲಿ ‘ದಶವಿಧ’ ಸ್ನಾನ ನಡೆಯುತ್ತದೆ. ನಂತರ ಪ್ರಾಯಶ್ಚಿತ್ತ ಹಾಗೂ ಕರ್ಮಕುಟಿ ಪೂಜೆ ನಡೆಯಲಿದೆ.

ಜನವರಿ 17ರಂದು, ಗಣೇಶನ ಆರಾಧನೆ ನಡೆಸಲಾಗುತ್ತದೆ. ಮತ್ತು ರಾಮಲಲ್ಲಾ ವಿಗ್ರಹದ ಪರಿಸರ ಪ್ರವೇಶ ಪೂಜೆ ಜರುಗಲಿದೆ.
ಜನವರಿ 18, ಮಂಟಪ ಪ್ರವೇಶ ಪೂಜೆ, ತೀರ್ಥ ಪೂಜೆ, ವಾಸ್ತು ಪೂಜೆ, ಮತ್ತು ವರುಣನ ಪೂಜೆಯಂತಹ ವಿಶೇಷ ಆಚರಣೆಗಳ ಆರಂಭಕ್ಕೆ ಸಾಕ್ಷಿಯಾಗಲಿದೆ.
ಜನವರಿ 19ರಂದು ರಾಮಮಂದಿರದಲ್ಲಿ ಯಾಗದ ಅಗ್ನಿಕುಂಡವನ್ನು ಸಿದ್ಧಪಡಿಸಲಾಗುತ್ತದೆ. ವೈದಿಕ ಮಂತ್ರಗಳು ಮತ್ತು ವಿಶೇಷ ವಿಧಾನಗಳಿಂದ ಮಾರ್ಗದರ್ಶಿಸಲ್ಪಟ್ಟ ಅರ್ಚಕರು ಪವಿತ್ರವಾದ ಅಗ್ನಿಯನ್ನು ಹೊತ್ತಿಸುತ್ತಾರೆ.



ಜನವರಿ 20ರಂದು ವಿವಿಧ ಪವಿತ್ರ ನದಿಗಳ ನೀರಿನಿಂದ ತುಂಬಿದ 81 ಕಲಶಗಳನ್ನು ಇರಿಸುವ ಮೂಲಕ ರಾಮಮಂದಿರದ ಗರ್ಭಗುಡಿ ಶುದ್ಧೀಕರಣಕ್ಕೆ ಒಳಗಾಗುತ್ತದೆ. ವಾಸ್ತು ಆಚರಣೆಗಳು ದೇವಾಲಯದ ಪಾವಿತ್ರ್ಯತೆಗೆ ಕೊಡುಗೆ ನೀಡುತ್ತವೆ.
ಜನವರಿ 21ರಂದು ರಾಮ್ ಲಲ್ಲಾ ವಿಧ್ಯುಕ್ತ ಸ್ನಾನವು ಯಾಗದ ಆಚರಣೆಗಳೊಂದಿಗೆ ನಡೆಯುತ್ತದೆ.

ಬಹು ನಿರೀಕ್ಷಿತ ಮಹಾಮಸ್ತಕಾಭಿಷೇಕವು ಜನವರಿ 22ರಂದು ಮಂಗಳಕರವಾದ ಮೃಗಶಿರಾ ನಕ್ಷತ್ರದ ಜೊತೆಗೆ ತೆರೆದುಕೊಳ್ಳುತ್ತದೆ. ಈ ಮಹತ್ವದ ಘಟನೆಯನ್ನು ವೀಕ್ಷಿಸುವ ಅವಕಾಶಕ್ಕಾಗಿ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.

PREV
Read more Articles on
click me!

Recommended Stories

ಆದಿತ್ಯ ಮಂಗಳ ಯೋಗದಿಂದ ಫುಲ್‌ ಅದೃಷ್ಟ, ಫೆಬ್ರವರಿ 26 ರವರೆಗೆ 4 ರಾಶಿಗೆ ರಾಜಯೋಗ
ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ