ಕೊಪ್ಪಳ: ಚನ್ನಬಸವ ಜಾತ್ರಾಮಹೋತ್ಸವದಲ್ಲಿ ಅಪಶಕುನ, ಗಂಗಾವತಿಗೆ ಕಾದಿದೆಯಾ ಕಂಟಕ?

Published : Jan 05, 2023, 02:00 AM IST
ಕೊಪ್ಪಳ: ಚನ್ನಬಸವ ಜಾತ್ರಾಮಹೋತ್ಸವದಲ್ಲಿ ಅಪಶಕುನ, ಗಂಗಾವತಿಗೆ ಕಾದಿದೆಯಾ ಕಂಟಕ?

ಸಾರಾಂಶ

ಮಹಾರಥದ ಕಳಸದ ರಕ್ಷಣಾ ಕೊಡೆ ಮುರಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಆರಾಧ್ಯ ದೈವ ಚನ್ನಬಸವಸ್ವಾಮಿ ಜಾತ್ರಾಮಹೋತ್ಸವದಲ್ಲಿ ನಡೆದ ಘಟನೆ.   

ಕೊಪ್ಪಳ(ಜ.05): ಮಹಾರಥದ ಕಳಸದ ರಕ್ಷಣಾ ಕೊಡೆ ಮುರಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಆರಾಧ್ಯ ದೈವ ಚನ್ನಬಸವಸ್ವಾಮಿ ಜಾತ್ರಾಮಹೋತ್ಸವದಲ್ಲಿ ನಿನ್ನೆ(ಬುಧವಾರ) ನಡೆದಿದೆ. ಕಳಸದ ರಕ್ಷಣಾ ಕೊಡೆ‌ ಮುರಿದಿದ್ದು ಅಪಶಕುನ ಅಂತ ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ. 

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆದ ಮಹಾರಥೋತ್ಸವದಲ್ಲಿ ಮಹಾರಥಕ್ಕೆ ತಂತಿ ತಗುಲಿ ಈ ಅವಘಡ ಸಂಭವಿಸಿದೆ ಅಂತ ತಿಳಿದು ಬಂದಿದೆ. ಕಳಸದ ರಕ್ಷಣಾ ಕೊಡೆ ಮುರಿದ ತಕ್ಷಣವೇ ಭಕ್ತರು ಶಾಕ್ ಆಗಿದ್ದಾರೆ. 

ಚಿಕ್ಕಮಗಳೂರು: ಸಾವಿರಾರು ಜನ ಇರುಮುಡಿ ಹೊತ್ತು ದೇವಸ್ಥಾನಕ್ಕೆ ತೆರಳಿದ ಭಕ್ತರು..!

ಕಳಸದ ರಕ್ಷಣಾ ಕೊಡೆ ಮುರಿದಿದ್ದರಿಂದ ರಥ ಕೆಲಕಾಲ ಮುಂದಕ್ಕೆ ಸಾಗದೆ ನಿಂತಿತ್ತು. ಈ ಬಾರಿ ಗಂಗಾವತಿಗೆ ಕಂಟಕ ಕಾದಿದಿಯಾ? ಅಂತ ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಇದೇ ವೇಳೆ ಕೆಲ ಭಕ್ತರು ಜೆಸ್ಕಾಂ ಅಧಿಕಾರಿಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ಕೂಡ ನಡೆದಿದೆ. 

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ