ನಾಗರ ಪಂಚಮಿಯನ್ನು ಏಕೆ ಆಚರಿಸಲಾಗುತ್ತದೆ? ಪೂಜೆಯ ಶುಭ ಸಮಯ ಮತ್ತು ಮಹತ್ವ ತಿಳಿಯಿರಿ

By Sushma HegdeFirst Published Aug 8, 2024, 4:15 PM IST
Highlights

ಅನಂತ್, ವಾಸುಕಿ, ಪದ್ಮ, ಮಹಾಪದ್ಮ, ತಕ್ಷಕ್, ಕುಳಿರ್, ಕರ್ಕಟ್, ಶಂಖ, ಕಾಲಿಯಾ, ಪಿಂಗಲ್ ಅನ್ನು ನಾಗ ಪಂಚಮಿಯ ದಿನದಂದು ಪೂಜಿಸಲಾಗುತ್ತದೆ.
 

 ಶ್ರಾವಣ ಮಾಸವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಅನೇಕ ಜನರು ಈ ತಿಂಗಳಲ್ಲಿ ಉಪವಾಸ ಮತ್ತು ಪೂಜೆ ಮಾಡುತ್ತಾರೆ. ಈ ತಿಂಗಳು ಮಹಾದೇವನಿಗೆ ಸಮರ್ಪಿತವಾಗಿದೆ. ಎಷ್ಟೋ ಜನ ಈ ಮಾಸದಲ್ಲಿ ಶ್ರಾವಣ ಸೋಮವಾರದಂದು ಮಹಾದೇವನನ್ನು ಪೂಜಿಸುತ್ತಾರೆ. ಅಲ್ಲದೆ ನಾಗಪಂಚಮಿ, ಕೃಷ್ಣಾಷ್ಟಮಿ, ರಕ್ಷಾಬಂಧನ ಹಬ್ಬಗಳನ್ನೂ ಈ ಮಾಸದಲ್ಲಿ ಆಚರಿಸಲಾಗುತ್ತದೆ. ಈ ವರ್ಷ, ನಾಗಪಂಚಮಿ ಹಬ್ಬವನ್ನು ಆಗಸ್ಟ್ 9, 2024 ರಂದು ಆಚರಿಸಲಾಗುತ್ತದೆ, ಅಂದರೆ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ. ಈ ದಿನದಂದು ದೇಶದೆಲ್ಲೆಡೆ ನಾಗದೇವತೆಯನ್ನು ಪೂಜಿಸಲಾಗುತ್ತದೆ.

 ನಾಗರ ಪಂಚಮಿಯ ಶುಭ ಸಮಯ

Latest Videos

ನಾಗಪಂಚಮಿಯನ್ನು ಶುಕ್ರವಾರ ಆಗಸ್ಟ್ 9 ನಾಳೆ ದಿನದಂದು ಶುಭ ಮುಹೂರ್ತವು  ಮಧ್ಯಾಹ್ನ 12:13 ರಿಂದ ಪ್ರಾರಂಭವಾಗಿ ಮಧ್ಯಾಹ್ನ 1 ಗಂಟೆಗೆ ಕೊನೆಗೊಳ್ಳುತ್ತದೆ.

ನಾಗನನ್ನು ದೇವರ ರೂಪವೆಂದು ಏಕೆ ಪರಿಗಣಿಸಲಾಗುತ್ತದೆ?

ಪುರಾಣಗಳ ಪ್ರಕಾರ, ಹಿಂದೂ ಧರ್ಮದಲ್ಲಿ ನಾಗನನ್ನು ದೇವರ ರೂಪವೆಂದು ಪರಿಗಣಿಸಲಾಗಿದೆ ಮತ್ತು ಪೂಜಿಸಲಾಗುತ್ತದೆ. ಏಕೆಂದರೆ ಮಹಾದೇವನ ಕೊರಳನ್ನು ವಾಸುಕಿ ಎಂಬ ನಾಗದೇವತೆ ಆಕ್ರಮಿಸಿಕೊಂಡಿದೆ, ಶ್ರೀ ವಿಷ್ಣುವು ಶೇಷನಾಗನ ಮೇಲೆ ವಿಶ್ರಾಂತಿ ಪಡೆಯುತ್ತಾನೆ ಆದ್ದರಿಂದ, ನಾವು ಪ್ರಾಚೀನ ಕಾಲದಿಂದಲೂ ಹಾವುಗಳನ್ನು ಆರಾಧಕರು ಎಂದು ಪರಿಗಣಿಸಿದ್ದೇವೆ. ನಾಗಪಂಚಮಿಯ ದಿನದಂದು ನಾಗದೇವತೆಯನ್ನು ಪೂಜಿಸುವುದರಿಂದ ಆತನ ಕೃಪೆಯು ನಮಗೆ ಲಭಿಸುತ್ತದೆ. ನಾಗಪಂಚಮಿಯ ದಿನದಂದು ಪೂಜೆ ಮಾಡುವುದರಿಂದ ಕಾಳಸರ್ಪ ದೋಷ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.

ನಾಗರ ಪಂಚಮಿಯ ಮಹತ್ವ

ನಾಗಪಂಚಮಿಯ ದಿನದಂದು ಅನಂತ, ವಾಸುಕಿ, ಪದ್ಮ, ಮಹಾಪದ್ಮ, ತಕ್ಷಕ, ಕುಳಿರ್, ಕರ್ಕಟ್, ಶಂಖ, ಕಾಳಿಯ, ಪಿಂಗಲರನ್ನು ಪೂಜಿಸಲಾಗುತ್ತದೆ. ಈ ದಿನ ಶಂಕರ, ನಾಗನನ್ನು ಪೂಜಿಸುವವರಿಗೆ ಮಹಾದೇವನ ಕೃಪೆ ಸಿಗುತ್ತದೆ. ಈ ದಿನವನ್ನು ನಾಗಸ್ತೋತ್ರ ಎಂದೂ ಕರೆಯುತ್ತಾರೆ.

ನಾಗರ ಪಂಚಮಿ ಪೂಜಾ ವಿಧಿವಿಧಾನ

ಈ ದಿನ ಮರದ ಹಲಗೆ ಅಥವಾ ಗೋಡೆಯ ಮೇಲೆ ಹಾವಿನ ಚಿತ್ರ ಬಿಡಿಸಿ ಅಥವಾ ಮಣ್ಣಿನ ಹಾವನ್ನು ತಂದು ಪೂಜಿಸುತ್ತಾರೆ. ನಾಗನಿಗೆ ಹಸಿ ಹಾಲು ಮತ್ತು ಎಲೆಗಳನ್ನು ನೈವೇದ್ಯ ಮಾಡಲಾಗುತ್ತದೆ. ದೂರ್ವಾ, ಮೊಸರು, ಗಂಧ, ಅಕ್ಷತೆ, ಪುಷ್ಪಗಳನ್ನು ಅರ್ಪಿಸಿ ಪೂಜಿಸುತ್ತಾರೆ. ಈ ವ್ರತವನ್ನು ಮಾಡುವುದರಿಂದ ಮನೆಯಲ್ಲಿ ಹಾವಿನ ಭಯ ಇರುವುದಿಲ್ಲ ಎಂಬ ಸಾಂಪ್ರದಾಯಿಕ ನಂಬಿಕೆ ಇದೆ.

ನಾಗರ ಪಂಚಮಿಯ ಇತಿಹಾಸ

ಶ್ರಾವಣ ಶುದ್ಧ ಪಂಚಮಿಯಂದು ಶ್ರೀಕೃಷ್ಣನು ಕಾಳಿಯ ನಾಗನನ್ನು ಸೋಲಿಸಿ ಯಮುನಾ ನದಿಯಿಂದ ಸುರಕ್ಷಿತವಾಗಿ ಹೊರಬಂದ ದಿನವನ್ನು ನಾಗ ಪಂಚಮಿ ಎಂದು ಆಚರಿಸಲಾಗುತ್ತದೆ. ಇತರ ಪ್ರಸಿದ್ಧ ದಂತಕಥೆಗಳೂ ಇವೆ. ಹಾವನ್ನು ರೈತನ ಸ್ನೇಹಿತ ಎಂದು ಪರಿಗಣಿಸಲಾಗುತ್ತದೆ. ಅದರ ಹೊರತಾಗಿ ನಾಗಪಂಚಮಿಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವೂ ವಿಭಿನ್ನವಾಗಿದೆ. ನಾಗಪಂಚಮಿದಿನಿಯಂದು ನವನಾಗಗಳನ್ನು ಸ್ಮರಿಸಲಾಗುತ್ತದೆ.

click me!