Mithun sankranti 2023 ದಿನ ಈ 5 ಕೆಲಸ ಮಾಡಿದ್ರೆ ಹೆಚ್ಚುವ ಸ್ಥಾನಮಾನ

By Suvarna NewsFirst Published Jun 15, 2023, 10:06 AM IST
Highlights

ಇಂದು ಮಿಥುನ ಸಂಕ್ರಾಂತಿ. ಸೂರ್ಯನು ವೃಷಭ ರಾಶಿಯಿಂದ ಮಿಥುನ ರಾಶಿಗೆ ಪ್ರವೇಶಿಸುತ್ತಿದ್ದಾನೆ.  ಈ ದಿನ ಸೂರ್ಯನಿಗೆ ಸಂಬಂಧಿಸಿದ ಕೆಲ ಪರಿಹಾರ ಕಾರ್ಯಗಳನ್ನು ಮಾಡುವುದರಿಂದ ಅಗಣಿತ ಫಲ ಪ್ರಾಪ್ತಿಯಾಗುತ್ತದೆ. 

ಸೂರ್ಯನ ರಾಶಿ ಬದಲಾವಣೆಯನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. 15ನೇ ಜೂನ್ 2023ರಂದು, ಗುರುವಾರ ಸಂಜೆ 06.07 ನಿಮಿಷಕ್ಕೆ ಸೂರ್ಯದೇವನು ವೃಷಭ ರಾಶಿಯನ್ನು ಬಿಟ್ಟು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ.

ಮಿಥುನ ಸಂಕ್ರಾಂತಿಯನ್ನು ರಾಜ ಹಬ್ಬ ಎಂದೂ ಕರೆಯುತ್ತಾರೆ. ಒಡಿಶಾದಲ್ಲಿ ಈ ಸಂಕ್ರಾಂತಿ ದಿನದಂದು, ಭಗವಾನ್ ಸೂರ್ಯನಲ್ಲಿ ಉತ್ತಮ ಫಸಲಿಗಾಗಿ ಮಳೆಗಾಗಿ ವಿನಂತಿಸುತ್ತಾರೆ. ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಮಿಥುನ ಸಂಕ್ರಾಂತಿಯನ್ನು ಅಂಬುಬಾಚಿ ಮೇಳ ಎಂದೂ ಕರೆಯಲಾಗುವ ಭೂಮಿ ತಾಯಿಯ ವಾರ್ಷಿಕ ಋತುಚಕ್ರದ ಹಬ್ಬವಾಗಿ ಆಚರಿಸಲಾಗುತ್ತದೆ. ಈ ದಿನದಂದು ಭೂಮಿಯನ್ನು ಪೂಜಿಸುವುದರಿಂದ ಭೂಮಿ ತಾಯಿಯ ಸಂಪತ್ತು ಮತ್ತು ಆಶೀರ್ವಾದ ಸಿಗುತ್ತದೆ. ಈ ದಿನದಿಂದ ಎಲ್ಲಾ ನಕ್ಷತ್ರಪುಂಜಗಳಲ್ಲಿ ರಾಶಿಚಕ್ರ ಚಿಹ್ನೆಗಳ ದಿಕ್ಕು ಸಹ ಬದಲಾಗುತ್ತದೆ. ಹಾಗಾಗಿ ಈ ಬದಲಾವಣೆಯನ್ನು ಪ್ರಮುಖವೆಂದು ಪರಿಗಣಿಸಲಾಗಿದೆ. ಇದರ ನಂತರವೇ ಮಳೆಗಾಲ ಔಪಚಾರಿಕವಾಗಿ ಪ್ರಾರಂಭವಾಗುತ್ತದೆ.

Latest Videos

ವಿಶೇಷ ದಿನವಾದ ಸೂರ್ಯನ ಮಿಥುನ ಸಂಕ್ರಾಂತಿಯಂದು ಈ 5 ಪ್ರಮುಖ ಕೆಲಸಗಳನ್ನು ಮಾಡುವುದರಿಂದ ಜೀವನದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ಉತ್ತಮ ಫಲಿತಾಂಶಗಳನ್ನು ಸಾಧಿಸಲಾಗುತ್ತದೆ.

ವಿಜಯಪುರ: ಇಲ್ಲಿನ ದೇವಿ ಜಾತ್ರೆ ನೋಡಲು ಬರ್ತಾರೆ ವಿವಿಧ ರಾಜ್ಯಗಳ ಸಿಎಂ, ಸಚಿವರು..!

ಮಿಥುನ ಸಂಕ್ರಾಂತಿ ಪರಿಹಾರಗಳು (Mithun Sankranti remedies)

1. ಸೂರ್ಯ ಪೂಜೆ: ಈ ದಿನ ಬೆಳಿಗ್ಗೆ ಸ್ನಾನ ಇತ್ಯಾದಿಗಳನ್ನು ಮಾಡಿದ ನಂತರ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಬೇಕು. ಇದರೊಂದಿಗೆ ಸೂರ್ಯ ದೇವರ ಪೂಜೆ ಮತ್ತು ಆರತಿಯನ್ನೂ ಮಾಡಬೇಕು. 
ಈ ಕೆಲಸದಿಂದ, ಸೂರ್ಯ ದೇವರು ಉತ್ತಮ ಆರೋಗ್ಯವನ್ನು ಆಶೀರ್ವದಿಸಿದರೆ, ಆರೋಗ್ಯವು ಉತ್ತಮವಾಗಿರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ ಮತ್ತು ಉನ್ನತ ಸ್ಥಾನಮಾನ ಪ್ರಾಪ್ತಿಯಾಗುತ್ತದೆ.

2. ದಾನ: ಈ ದಿನದಂದು ಬೆಲ್ಲ, ತುಪ್ಪ, ಗೋಧಿ ಮತ್ತು ತಾಮ್ರವನ್ನು ವಿಶೇಷವಾಗಿ ಬಡವರಿಗೆ ದಾನ ಮಾಡುವುದು ವೃತ್ತಿ ಮತ್ತು ಉದ್ಯೋಗದಲ್ಲಿ ಲಾಭವನ್ನು ನೀಡುತ್ತದೆ. ಇದರೊಂದಿಗೆ ಈ ದಿನದಂದು ಚಂದ್ರ, ಪಾಲಕ್ ಸೊಪ್ಪು ಮತ್ತು ಹಸಿರು ಬಟ್ಟೆಗಳನ್ನು ದಾನ ಮಾಡುವುದು ತುಂಬಾ ಮಂಗಳಕರ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ. 

3. ಉಪ್ಪನ್ನು ತ್ಯಜಿಸಿ: ಈ ದಿನ ಸೂರ್ಯಾಸ್ತದ ತನಕ ಉಪ್ಪನ್ನು ಸೇವಿಸಬಾರದು. ಈ ರೀತಿ ಮಾಡುವುದರಿಂದ ಎಲ್ಲ ರೀತಿಯ ತೊಂದರೆಗಳು ದೂರವಾಗುತ್ತವೆ ಮತ್ತು ಸೂರ್ಯ ದೇವರ ಅನುಗ್ರಹವು ದೊರೆಯುತ್ತದೆ ಮತ್ತು ವ್ಯಾಪಾರದಲ್ಲಿ ಲಾಭ ದೊರೆಯುತ್ತದೆ. ಸರ್ಕಾರಿ ನೌಕರಿ ಇದ್ದರೆ ಅದರಲ್ಲಿ ಧನಾತ್ಮಕ ಫಲಿತಾಂಶಗಳು ಕಂಡುಬರುತ್ತವೆ.

4. ಪಿತೃ ತರ್ಪಣ: ಈ ದಿನ ಗಂಗಾನದಿಯಲ್ಲಿ ಸ್ನಾನ ಮಾಡಿ, ನದಿಯ ದಡದಲ್ಲಿ ಪೂರ್ವಜರಿಗೆ ನೈವೇದ್ಯ ಮತ್ತು ದಾನ ಮಾಡಿದ ನಂತರ, ಪಿತೃದೇವನು ಸಂತುಷ್ಟನಾಗಿ ಅವರನ್ನು ಆಶೀರ್ವದಿಸಿ ಅವರ ಮೋಕ್ಷಕ್ಕೆ ದಾರಿಯನ್ನು ತೆರೆಯುತ್ತಾನೆ. ಇದರಿಂದ ಪಿತೃ ದೋಷವೂ ನಿವಾರಣೆಯಾಗುತ್ತದೆ.

ಈ ಮರಗಿಡಗಳಿಗೆ ರಕ್ಷಾಸೂತ್ರ ಕಟ್ಟಿದರೆ, ಅದೃಷ್ಟ ಬದಲಾಗೋದ್ರಲ್ಲಿ ಅನುಮಾನವೇ ಇಲ್ಲ!

5. ಗಂಗಾ ಸ್ನಾನ: ಈ ವಿಶೇಷ ದಿನದಂದು ಗಂಗಾ ನದಿಯಲ್ಲಿ ಸ್ನಾನ ಮಾಡುವವರಿಗೆ ಹಿಂದೆ ಮಾಡಿದ ಪಾಪಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ. ನಿಮಗೆ ಗಂಗಾ ಸ್ನಾನ ಮಾಡಲು ಸಾಧ್ಯವಾಗದಿದ್ದರೆ, ಮನೆಯಲ್ಲಿ ಶುದ್ಧ ನೀರಿನಲ್ಲಿ ಗಂಗಾ ಜಲವನ್ನು ಬೆರೆಸಿ ಸ್ನಾನ ಮಾಡಿ ನಂತರ ಸೂರ್ಯ ಚಾಲೀಸಾವನ್ನು ಪಠಿಸಿ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!