ಮೇಷ ಸಂಕ್ರಾಂತಿಯನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಸೂರ್ಯನ ಕ್ಯಾಲೆಂಡರ್ ಅನುಸರಿಸುವವರಿಗೆ ಈ ದಿನ ಹೊಸ ವರ್ಷಾರಂಭವಾಗಿದೆ. ಮೇಷ ಸಂಕ್ರಾಂತಿಯಂದು ಕೈಗೊಳ್ಳುವ ಕೆಲ ಕ್ರಮಗಳು ವ್ಯಕ್ತಿಗೆ ಹಾಗೂ ಆತನ ಕುಟುಂಬಕ್ಕೆ ಬಹಳ ಉತ್ತಮ ಫಲಿತಾಂಶ ತರುತ್ತವೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯನು ಒಂದು ರಾಶಿಯನ್ನು ಬಿಟ್ಟು ಇನ್ನೊಂದು ರಾಶಿಯನ್ನು ಪ್ರವೇಶಿಸಿದಾಗ ಅದನ್ನು 'ಸಂಕ್ರಾಂತಿ' ಎಂದು ಕರೆಯಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ, ಶುಕ್ರವಾರ, ಏಪ್ರಿಲ್ 14, 2023ರಂದು, ಸೂರ್ಯ ದೇವರು ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಇದು ಹಿಂದೂ ಹೊಸ ವರ್ಷದಲ್ಲಿ ಮೊದಲ ಬಾರಿಗೆ ಸೂರ್ಯ ಚಿಹ್ನೆ ಬದಲಾವಣೆಯಾಗಿದೆ.
ಮೇಷ ಸಂಕ್ರಾಂತಿಯನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಸೂರ್ಯನ ಕ್ಯಾಲೆಂಡರ್ ಅನುಸರಿಸುವವರಿಗೆ ಈ ದಿನ ಹೊಸ ವರ್ಷಾರಂಭವಾಗಿದೆ. ಈ ದಿನವನ್ನು ಹಲವು ಕಡೆ ಹಲವು ರೀತಿಯಲ್ಲಿ ಆಚರಿಸಲಾಗುತ್ತದೆ. ಕೇರಳದವರು ಇದನ್ನು ವಿಶು ಎಂದು ಆಚರಿಸಿದರೆ, ಒಡಿಶಾದಲ್ಲಿ ಪಾಣ ಸಂಕ್ರಾಂತಿ ಎನ್ನಲಾಗುತ್ತದೆ. ತಮಿಳುನಾಡಿನಲ್ಲಿ ಪೊತಾಂಡು ಎಂದು ಆಚರಿಸಿದರೆ, ಪಶ್ಚಿಮ ಬಂಗಾಳದಲ್ಲಿ ಬೈಸಾಕಿ ಎಂದು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅಸ್ಸಾಂನಲ್ಲಿ ಬಿಹು ಎಂದೂ, ಪಂಜಾಬ್ನಲ್ಲಿ ವೈಸಾಕಿ ಎಂದೂ ಆಚರಿಸಲಾಗುತ್ತದೆ.
ಮೇಷ ಸಂಕ್ರಾಂತಿಯ ದಿನದಂದು ಸೂರ್ಯ ದೇವರನ್ನು ಪೂಜಿಸುವುದರ ಜೊತೆಗೆ ಸ್ನಾನ ಮತ್ತು ದಾನ ಮತ್ತು ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ಸಾಧಕನಿಗೆ ವಿಶೇಷ ಲಾಭಗಳು ಸಿಗುತ್ತವೆ ಮತ್ತು ಜೀವನದಲ್ಲಿ ಬರುವ ಎಲ್ಲಾ ಅಡೆತಡೆಗಳು ದೂರವಾಗುತ್ತವೆ. ಮೇಷ ಸಂಕ್ರಾಂತಿಯ ದಿನದಂದು ಸೂರ್ಯದೇವನ ಆಶೀರ್ವಾದವನ್ನು ಪಡೆಯಲು ನೀವು ಮಾಡಬೇಕಾದುದೇನು ಎಂಬುದರ ವಿವರ ಇಲ್ಲಿದೆ..
Shani Chandra In Kumbh: 3 ರಾಶಿಗಳ ಮನಸ್ಸನ್ನು ಕೆಡಿಸಿ, ಜೀವನ ನರಕವಾಗಿಸೋ ವಿಷ ಯೋಗ
ಮೇಷ ಸಂಕ್ರಾಂತಿ 2023ರ ಪರಿಹಾರಗಳು
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.