ವಿಶ್ವಶಾಂತಿಗಾಗಿ ಸ್ವಯಂ ಶಿಕ್ಷೆ ! 50 ವರ್ಷದ ಹಿಂದೆ ಎತ್ತಿದ್ದ ಕೈ ಕೆಳಗೆ ಬಿಟ್ಟಿಲ್ಲ ಈ ಸಾಧು

Published : Aug 04, 2025, 01:45 PM ISTUpdated : Aug 04, 2025, 02:20 PM IST
Amar Bharati

ಸಾರಾಂಶ

Indian ascetic holding arm: ಐದು ನಿಮಿಷ ಕೈ ಎತ್ತಿ ನಿಲ್ಲೋದೇ ಕಷ್ಟ. ಹಾಗಿರುವಾಗ ಭಾರತೀಯ ಸಾಧು ಒಬ್ಬರು ಕಳೆದ 50 ವರ್ಷಗಳ ಹಿಂದೆ ಎತ್ತಿರುವ ಕೈ ಕೆಳಗೆ ಬಿಟ್ಟಿಲ್ಲ. ಅದಕ್ಕೆ ಕಾರಣ ಇಲ್ಲಿದೆ. 

ಹಿಮಾಲಯ (Himalaya)ದ ತಪ್ಪಲಿನಲ್ಲಿ ಕಠಿಣ ತಪಸ್ಸು ಮಾಡುವ ಅದೆಷ್ಟೋ ಸನ್ಯಾಸಿಗಳು ನಮಗೆ ಸಿಗ್ತಾರೆ. ಭಾರತ ಆಧ್ಯಾತ್ಮಿಕತೆಗೆ ಹೆಸರುವಾಸಿ. ಇಲ್ಲಿ ಮುಕ್ತಿಗೆ ಮೊದಲ ಸ್ಥಾನ. ಭೌತಿಕ ಸುಖ – ಸಂತೋಷವನ್ನು ತೊರೆದು ಸನ್ಯಾಸಿ (monk) ದೀಕ್ಷೆ ಪಡೆಯುವ ಜನರು ಕಠಿಣ ಧ್ಯಾನ, ತಪಸ್ಸಿನ ಮೂಲಕ ದೇವರನ್ನು ಒಲಿಸಿಕೊಳ್ತಾರೆ. ಮೋಕ್ಷಕ್ಕೆ ಹತ್ತಿರವಾಗ್ತಾರೆ. ಆತ್ಮ ಸಂತೋಷವನ್ನು ಪಡೆಯುತ್ತಾರೆ. ಕುಂಭ ಮೇಳದ ಸಂದರ್ಭದಲ್ಲಿ ಇಂಥ ಅನೇಕ ಸಾಧು – ಸಂತರು ನಮ್ಮ ಕಣ್ಣಿಗೆ ಬಿದ್ದಿದ್ದಿದೆ. ಅದ್ರಲ್ಲಿ ಅಮರ್ ಭಾರತಿ (Amar Bharati) ಕೂಡ ಒಬ್ಬರು. ಇವರು ವಿಶ್ವ ಶಾಂತಿ (world peace)ಗಾಗಿ ತಮ್ಮನ್ನು ತಾವು ದಣಿಸಿಕೊಳ್ತಿದ್ದಾರೆ. ಸುಮಾರು ಐವತ್ತು ವರ್ಷಗಳಿಂದ ತಮ್ಮ ಬಲಗೈ ಮೇಲೆತ್ತಿಕೊಂಡಿದ್ದಾರೆ.

ಸನ್ಯಾಸಿ ಭಾರತೀಯವರ ಹಿನ್ನೆಲೆ : ಅಮರ್ ಭಾರತಿ 1970 ರವರೆಗೂ ಸಾಮಾನ್ಯರಂತೆ ಜೀವನ ನಡೆಸಿದವರು. ಅವರು ನವದೆಹಲಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ವಿವಾಹಿತ ಭಾರತಿಗೆ ಮೂರು ಮಕ್ಕಳು. ಅಮರ್ ಭಾರತಿ ಮನಸ್ಸು ಆಧ್ಯಾತ್ಮದ ಕಡೆ ಸೆಳೆದಿತ್ತು. ಮಹತ್ವದ ನಿರ್ಧಾರ ತೆಗೆದುಕೊಂಡ ಅವರು ತಮ್ಮ ಕೆಲ್ಸ ಬಿಟ್ಟರು. ಕುಟುಂಬ – ಸ್ನೇಹಿತರನ್ನು ತೊರೆದ್ರು. ಶಿವನಿಗೆ ತಮ್ಮ ಜೀವನವನ್ನು ಸಂಪೂರ್ಣವಾಗಿ ಅರ್ಪಿಸಿ, ಆದಿ ಯೋಗಿಯಾದ್ರು. ಅವರು 1973 ರಲ್ಲಿ ತಮ್ಮ ಭಕ್ತಿಯ ಸಂಕೇತವಾಗಿ ಮತ್ತು ಯುದ್ಧಗಳ ವಿರುದ್ಧ ಹೋರಾಡಲು ಮತ್ತು ವಿಶ್ವ ಶಾಂತಿಯನ್ನು ಬೆಂಬಲಿಸಲು ಮಹತ್ವದ ಪ್ರತಿಜ್ಞೆ ಮಾಡಿದ್ರು. ತಮ್ಮ ಕೈಯನ್ನು ಎತ್ತಿ ಹಿಡಿಯುವ ನಿರ್ಧಾರಕ್ಕೆ ಬಂದ್ರು.

ಎರಡು ವರ್ಷ ನೋವು ತಿಂದ ಭಾರತಿ : ಐದು ನಿಮಿಷ ಕೈ ಮೇಲೆತ್ತಿ ನಿಲ್ಲೋದು ನಮ್ಮಿಂದ ಸಾಧ್ಯವಿಲ್ಲ. ಹಾಗಿರುವಾಗ ನಿರಂತರ ಕೈ ಎತ್ತಿ ನಿಲ್ಲೋದು ಆರಂಭದಲ್ಲಿ ಅಮರ್ ಭಾರತಿಗೆ ಸುಲಭ ಆಗಿರಲಿಲ್ಲ. ಎರಡು ವರ್ಷಗಳ ಕಾಲ ಅಸಹನೀಯ ನೋವನ್ನು ಸಹಿಸಿಕೊಂಡರು. ಶಿವನ ಪ್ರಾರ್ಥನೆಯಲ್ಲಿ ತಲ್ಲೀನರಾದ್ರು. ಅಂತಿಮವಾಗಿ ಅವರು ಕೈ ಸಂವೇದನೆ ಕಳೆದುಕೊಂಡಿದ್ದಾರೆ. ಅವರ ಸ್ನಾಯುಗಳು ದುರ್ಬಲಗೊಂಡಿವೆ. ಅಮರ್ ಭಾರತಿ ಇನ್ನು ಮುಂದೆ ತಮ್ಮ ಕೈ ಕೆಳಗಿಳಿಸಲು ಸಾಧ್ಯವಿಲ್ಲ. ಅವರ ಕೈ ಅಸ್ಥಿಪಂಜರವಾಗಿದೆ. ರಕ್ತ ಹೆಪ್ಪುಗಟ್ಟಿದೆ. ಉಗುರುಗಳು ಬಾಗಿವೆ. ಒಂದ್ವೇಳೆ ಅವರು ಕೈ ಕೆಳಗಿಳಿಸಿದ್ರೆ ಅದು ಮುರಿಯುವ ಅಪಾಯವಿದೆ ಎಂದು ವೈದ್ಯರು ಹೇಳಿದ್ದಾರೆ. ಒಂದ್ವೇಳೆ ಅವರು ಕೈ ಕೆಳಗಿಳಿಸಿದ್ರೆ ಅದು ದೈಹಿಕ ನೋವು ಮಾತ್ರವಲ್ಲ ಮಾನಸಿಕ ನೋವನ್ನು ಅವರಿಗೆ ನೀಡುತ್ತದೆ.

ಅಮರ್ ಭಾರತಿ, ಕಳೆದ 50 ವರ್ಷಗಳಿಂದ ತೋಳಿಲ್ಲದವರಂತೆ ಬದುಕುತ್ತಿದ್ದಾರೆ. ತಿನ್ನುವುದು, ಬಟ್ಟೆ ಧರಿಸುವುದು, ಸ್ನಾನ ಸೇರಿದಂತೆ ಎಲ್ಲ ಕೆಲಸಕ್ಕೂ ಅವರು ಒಂದು ಕೈ ಮಾತ್ರ ಬಳಸ್ತಿದ್ದಾರೆ. ಇದು ಸುಲಭವಲ್ಲದಿದ್ದರೂ, ಈ ಜೀವನಶೈಲಿ ಅವರನ್ನು ಶಿವನ ಹತ್ತಿರಕ್ಕೆ ಕರೆದೊಯ್ಯುತ್ತಿದೆ, ಜೀವನಕ್ಕೆ ಶಾಂತಿ ನೀಡ್ತಿದೆ ಎಂದು ಅಮರ್ ಭಾರತಿ ನಂಬಿದ್ದಾರೆ.

ನಾವು ನಮ್ಮ ಮಕ್ಕಳನ್ನು ಪರಸ್ಪರ ಜಗಳ ಆಡಲು ಪ್ರೇರೇಪಿಸುತ್ತಿದ್ದೇವೆ. ನಮ್ಮ ನಡುವೆ ಇಷ್ಟೊಂದು ದ್ವೇಷ ಏಕೆ, ಎಲ್ಲಾ ಭಾರತೀಯರು ಮತ್ತು ಇಡೀ ಪ್ರಪಂಚವು ಪರಸ್ಪರ ಶಾಂತಿಯಿಂದ ಬದುಕಬೇಕೆಂದು ನಾನು ಬಯಸುತ್ತೇನೆ ಎಂದು ಸಾಧು ಅಮರ್ ಭಾರತಿ ಅಭಿಪ್ರಾಯವಾಗಿದೆ. ಅದಕ್ಕಾಗಿಯೇ ಅವರು ಒಂದು ಕೈ ಮೇಲೆತ್ತಿ ಬದುಕುತ್ತಿದ್ದಾರೆ.

ಭಾರತೀಯ ಸಾಧುಗಳಿಗೆ, ವಿಮೋಚನೆ ಮತ್ತು ಜ್ಞಾನೋದಯವನ್ನು ಸಾಧಿಸಲು ತೀವ್ರ ಸ್ವ-ಶಿಸ್ತಿನ ಅಗತ್ಯವಿರುತ್ತದೆ. ಸನ್ಯಾಸಿಗಳು ಎಷ್ಟೇ ಕಷ್ಟ ಬಂದ್ರೂ ಇದನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗ್ತಾರೆ. ಅಮರ್ ಭಾರತಿಯಂತೆ ಭಾರತದಲ್ಲಿ ಅನೇಕ ಸಾಧುಗಳು ತಮ್ಮದೇ ರೀತಿಯಲ್ಲಿ ಮೋಕ್ಷ ಪಡೆಯುವ ಪ್ರಯತ್ನ ನಡೆಸ್ತಿದ್ದಾರೆ.

PREV
Read more Articles on
click me!

Recommended Stories

Vastu for Wealth: ಈ 5 ವಸ್ತು ನಿಮ್ಮ ಮನೆಯಲ್ಲಿದ್ದರೆ ಸದಾ ತಿಜೋರಿ ತುಂಬಿರುತ್ತೆ
Financial success by date of birth: ನಿಮ್ಮ ಜನ್ಮಸಂಖ್ಯೆ ನಿಮ್ಮ ಸಂಪತ್ತಿನ ರಹಸ್ಯವೇ?