
ಜಾತಕದಿಂದ ಭವಿಷ್ಯದ ಹಲವು ವಿಷಯಗಳನ್ನು ಮೊದಲೇ ತಿಳಿದುಕೊಳ್ಳಬಹುದು. ಹುಟ್ಟಿದ ದಿನ, ಸಮಯ, ಸ್ಥಳ ಗಮನಿಸಿ ಜಾತಕವನ್ನು ಬರೆಯಲಾಗುತ್ತದೆ. ಜಾತಕದಲ್ಲಿ ಗ್ರಹಗಳ ಸ್ಥಾನ, ಮತ್ತಿತರ ವಿಚಾರಗಳನ್ನು ಪರಿಶೀಲಿಸಿ ಭವಿಷ್ಯದಲ್ಲಿ ಜೀವನ ಹೇಗಿರುತ್ತದೆ? ಅದೃಷ್ಟ ಕೈ ಹಿಡಿಯುತ್ತದೆಯೇ? ವಿದ್ಯಾಭ್ಯಾಸ, ವಿವಾಹ ಹೀಗೆ ಎಲ್ಲವನ್ನೂ ಅರಿಯಬಹುದು.
ಜ್ಯೋತಿಷ್ಯ ಶಾಸ್ತ್ರದಲ್ಲಿ ಭವಿಷ್ಯದ ವಿಚಾರಗಳನ್ನು, ವ್ಯಕ್ತಿಯ ಸ್ವಭಾವಗಳನ್ನು ಜಾತಕದಿಂದ ಮಾತ್ರವಲ್ಲದೇ ಕೆಲವು ವಿಚಾರಗಳನ್ನು ಹಸ್ತ ಸಾಮುದ್ರಿಕಾ ಶಾಸ್ತ್ರವೂ ಹೇಳುತ್ತದೆ. ಶರೀರದ ಮೇಲಿನ ಚಿಹ್ನೆ, ಮಚ್ಚೆ, ಹಸ್ತ ರೇಖೆ ಮುಂತಾದವುಗಳಿಂದ ವ್ಯಕ್ತಿಯ ಹಲವು ವಿಚಾರಗಳನ್ನು ಅರ್ಥ ಮಾಡಿಕೊಳ್ಳಬಹುದು.
ಹಸ್ತಸಾಮುದ್ರಿಕಾ ಶಾಸ್ತ್ರ ಹುಟ್ಟಿದ್ದು ಹೇಗೆ?
ಇದಕ್ಕೊಂದು ಧಾರ್ಮಿಕ ಕಥೆಯಿದೆ. ಶಿವ-ಪಾರ್ವತಿಯರ ಮಗನಾದ ಕಾರ್ತೀಕೇಯನು ಹಸ್ತಸಾಮುದ್ರಿಕಾ ಶಾಸ್ತ್ರ ರಚಿಸುತ್ತಾನೆ. ರಚಿಸಿದ ಬಳಿಕ ಅದನ್ನು ಸಮುದ್ರದಲ್ಲಿ ಎಸೆಯುತ್ತಾನೆ. ನಂತರ ಸಮುದ್ರದಲ್ಲಿ ಈ ಶಾಸ್ತ್ರ ಸಿಕ್ಕ ಕಾರಣ ಇದಕ್ಕೆ ಹಸ್ತಸಾಮುದ್ರಿಕಾ ಎಂಬ ಹೆಸರು ಬಂತೆಂದು ಹೇಳಲಾಗುತ್ತದೆ. ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ವ್ಯಕ್ತಿಯ ಶರೀರದ ಮೇಲಿನ ಚಿಹ್ನೆ, ಮಚ್ಚೆ, ರೇಖೆಗಳ ಮೂಲಕ ಭವಿಷ್ಯ ಹೇಗಿದೆ ಎಂದು ಹೇಳಲಾಗುತ್ತದೆ. ಹಲ್ಲಿನ ಮಧ್ಯೆ ಒಂಚೂರು ಜಾಗ ಬಿಟ್ಟಿದ್ದರೆ, ಅದಕ್ಕೂ ಒಂದರ್ಥವಿದೆ, ಹಲ್ಲಿನ ಮಧ್ಯೆ ಜಾಗ ಬಿಟ್ಟಿದ್ದರೆ ಲಕ್ ಎಂದು ಹೇಳಲಾಗುತ್ತದೆ. ಈಗ ಅಂತಹವರ ಗುಣ, ಸ್ವಭಾವದ ಬಗ್ಗೆ ತಿಳಿಯೋಣ.
ಕೌಶಲ್ಯವಂತರು
ಹಲ್ಲಿನ ಮಧ್ಯೆ ಜಾಗವಿದ್ದರೆ ಅಂಥವರು ಕೌಶಲ್ಯವಂತರಾಗಿರುತ್ತಾರೆ. ಕಲಾವಿದರಾಗಿರುತ್ತಾರೆ. ಅಷ್ಟೇ ಅಲ್ಲದೇ ಉತ್ತಮ ಕಲಾ ಪ್ರದರ್ಶಕರೂ ಆಗಿರುತ್ತಾರೆ. ಇವರ ಈ ಕಲೆಯಿಂದಾನೇ ಅವರು ಜೀವನದಲ್ಲಿ ಹೆಸರು ಮಾಡುತ್ತಾರೆ.
ಪರಿಶ್ರಮದಿಂದ ಯಶಸ್ಸು
ಇಂಥವರು ಲಕ್ಕಿಗಳಾಗಿರುತ್ತಾರೆ. ಯಾರೇ ಆದರೂ ಪರಿಶ್ರಮದಿಂದಲೇ ಫಲಪ್ರಾಪ್ತಿ, ಹಾಗಾಗಿ ಇವರು ಸಹ ಸ್ವಂತ ಶಕ್ತಿಯಿಂದ ಕೆಲಸ ಮಾಡಿದಲ್ಲಿ ಗುರಿಯನ್ನು ಮುಟ್ಟಲು ಯಾರಿಂದಲೂ ತಡೆಯಲಾಗುವುದಿಲ್ಲ. ಇವರ ಪರಿಶ್ರಮಕ್ಕೆ ಅದೃಷ್ಟವೂ ಜೊತೆಗೂಡುತ್ತದೆ.
ಕಾರ್ಯಕ್ಷೇತ್ರದಲ್ಲಿ ಯಶಸ್ಸು
ಎರಡು ಹಲ್ಲಿನ ನಡುವೆ ಒಂದು ಅಕ್ಕಿ ಕಾಳಿನಷ್ಟು ಜಾಗ ಬಿಟ್ಟಿದ್ದರೆ ಅದೃಷ್ಟವೆಂದು ಸಾಮುದ್ರಿಕಾ ಶಾಸ್ತ್ರವೂ ಹೇಳುತ್ತದೆ. ಅಂಥವರು ತಮ್ಮ ಕಾರ್ಯಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಗಳಿಸುತ್ತಾರಂತೆ. ಅಷ್ಟೇ ಅಲ್ಲದೇ ದಾಳಿಂಬೆ ಕಾಳಿನಂಥ ದಂತ ಪಂಕ್ತಿಗಳ ನಡುವೆ ಚೂರು ಜಾಗ ಬಿಟ್ಟಿದ್ದರೆ, ಅವರ ಭವಿಷ್ಯವೂ ಉಜ್ವಲವಾಗಲಿದೆ ಎಂಬ ಸೂಚನೆಯನ್ನೂ ಇದು ನೀಡುತ್ತದೆ.
ಯೋಗ್ಯತೆಯಿಂದಲೇ ಗುರುತಿಸಿಕೊಳ್ಳುತ್ತಾರೆ
ಇಂಥವರು ನೋಡಲು ಸಾಮಾನ್ಯರಂತೆ ಕಂಡರೂ ಅತ್ಯಂತ ಪ್ರತಿಭಾ ಶಾಲಿಗಳು. ಇವರ ಕೆಲಸ ಮತ್ತು ಪ್ರತಿಭೆ ಇವರನ್ನು ಎಲ್ಲರಿಂದಲೂ ಗುರುತಿಸುವಂತೆ ಮಾಡುತ್ತದೆ. ಶ್ರದ್ಧೆ ಮತ್ತು ಪರಿಶ್ರಮದಿಂದ ಕೆಲಸ ಮಾಡುತ್ತಾರೆ. ಇದರಿಂದ ಇವರ ಖ್ಯಾತಿ ಎಲ್ಲೆಡೆ ಪಸರಿಸುವಂತಾಗುತ್ತದೆ.
ಅದೃಷ್ಟ ಜೊತೆಗಿರುತ್ತದೆ
ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಹಲ್ಲುಗಳ ಮಧ್ಯೆ ಗ್ಯಾಪ್ ಇದ್ದವರು ಉತ್ತಮ ವಾಗ್ಮೀಗಳೂ ಹೌದು. ಹಾಗಾಗಿ ಎಲ್ಲಿ, ಹೇಗೆ ಯಾವ ರೀತಿ ಮಾತನಾಡಿದರೆ ಒಳ್ಳೇದು ಎಂಬುದನ್ನು ಸ್ಪಷ್ಟವಾಗಿ ಅರಿತಿರುತ್ತಾರೆ. ಈ ಗುಣದಿಂದಲೇ ಇವರು ವೃತ್ತಿ ಕ್ಷೇತ್ರದಲ್ಲಿ ಎತ್ತರಎತ್ತರಕ್ಕೇರಲು ಸಹಕಾರಿಯಾಗುತ್ತದೆ. ಹಾಗಾಗಿ ಇವರ ತೀಕ್ಷ್ಣ ಬುದ್ಧಿಗೆ ಅದೃಷ್ಟವೂ ಸಾಥ್ ನೀಡುತ್ತದೆ.
ವಿಚಾರವಾದಿ ಮತ್ತು ವಿಶಾಲ ಹೃದಯಿ
ಉತ್ತಮ ವಿಚಾರಗಳನ್ನು ಮಾಡುವುದಲ್ಲದೇ, ಯಾವುದೇ ಚೌಕಟ್ಟಿಗೆ ಒಳಪಡದೇ ಹೊಸದನ್ನು ಯೋಚಿಸುವ, ಪ್ರಯತ್ನಿಸುವ ಮನಃಸ್ಥಿತಿಯನ್ನು ಹೊಂದಿರುತ್ತಾರೆ. ತಮ್ಮ ವಿಚಾರವನ್ನು ಇನ್ನೊಬ್ಬರು ಒಪ್ಪುವಂತೆ ಅವರಿಗೆ ವಿಷಯವನ್ನು ಮನದಟ್ಟು ಮಾಡಿಸುವ ಚಾಕಚಕ್ಯತೆಯೂ ಇವರಿಗಿರುತ್ತದೆ.
ಫುಡ್ಡೀಸ್
ವಿವಿಧ ರೀತಿಯ ಪದಾರ್ಥಗಳನ್ನು ಸವಿಯುವುದು ಇವರಿಗೆ ಅತ್ಯಂತ ಪ್ರಿಯವಾದ ವಿಷಯ. ಅಷ್ಟೇ ಅಲ್ಲದೇ ತಿನ್ನವುದು ಎಷ್ಟು ಇಷ್ಟವೋ, ಅಡುಗೆ ತಯಾರಿಸುವುದೂ ಇವರಿಗೆ ಅಚ್ಚುಮೆಚ್ಚು. ಹಾಗೆಯೇ ಫಿಟ್ನೆಸ್ ಬಗ್ಗೆಯೂ ವಿಶೇಷ ಕಾಳಜಿ ವಹಿಸುತ್ತಾರೆ.
ಲಕ್ಷ್ಮೀ ಕೃಪೆ ಸದಾ ಇವರ ಮೇಲಿರುತ್ತದೆ
ಹಲ್ಲಿನ ಮಧ್ಯೆ ಜಾಗ ಬಿಟ್ಟಿದ್ದಕೆ ಅದೃಷ್ಟವೆಂದು ಹೇಳಲು ಮತ್ತೊಂದು ಕಾರಣವಿದೆ. ಇವರ ಮೇಲೆ ಲಕ್ಷ್ಮೀ ದೇವಿಯೂ ಕೃಪೆ ತೋರುತ್ತಾಳೆ. ಧನ-ಧಾನ್ಯ ಸಂಪತ್ತು ಮತ್ತು ಸಮೃದ್ಧಿ ಇವರಿಗಿರುತ್ತದೆ. ಇಂಥ ಹುಡುಗಿಯರು ಗಂಡನ ಮನೆಗೂ ಅದೃಷ್ಟ ತರುತ್ತಾರೆ.