Guruwar Importance: ನವಗ್ರಹಗಳಲ್ಲಿ ಶ್ರೇಷ್ಠ ಗುರು, ಆತನಿಲ್ಲದೆ ಶುಭಕಾರ್ಯವಿಲ್ಲ!

By Suvarna NewsFirst Published May 25, 2023, 10:31 AM IST
Highlights

ಹಿಂದೂ ಧರ್ಮದಲ್ಲಿ ಗುರುವಾರಕ್ಕೆ ವಿಶೇಷ ಮಹತ್ವವಿದೆ. ಗುರುವಾರ ಶಾಸ್ತ್ರ, ಗ್ರಹಗಳು, ಪೂಜೆ, ಉಪವಾಸ, ಶುಭ ಕಾರ್ಯ, ಜಾತಕ, ಅದೃಷ್ಟ, ದಿಕ್ಕು, ಸಮಯ ಇತ್ಯಾದಿಗಳಿಗೆ ಸಂಬಂಧಿಸಿದೆ. ಗುರುವಾರದ ಪ್ರಾಮುಖ್ಯತೆ ತಿಳಿಯೋಣ.

ಹಿಂದೂ ಧರ್ಮದಲ್ಲಿ ಯಾವುದೇ ಕೆಲಸವನ್ನು ಮಾಡಲು ಮಂಗಳಕರ ಸಮಯ, ತಿಥಿ, ಯೋಗ ಮತ್ತು ನಕ್ಷತ್ರ ಇತ್ಯಾದಿಗಳನ್ನು ನೋಡಲಾಗುತ್ತದೆ. ಅದೇ ರೀತಿ ಶುಭ ಕಾರ್ಯಗಳಿಗೆ ಶುಭ ದಿನವೂ ಮುಖ್ಯ. ಶುಭ ಮುಹೂರ್ತದಲ್ಲಿ ಮಾಡುವ ಕೆಲಸವು ಯಶಸ್ವಿಯಾಗುತ್ತದೆ.

ಗುರುವಾರದ ಬಗ್ಗೆ ಹೇಳುವುದಾದರೆ, ಈ ದಿನವನ್ನು ಧಾರ್ಮಿಕ ದೃಷ್ಟಿಕೋನದಿಂದ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನವನ್ನು ಭಗವಾನ್ ವಿಷ್ಣುವಿನ ಪೂಜೆಗಾಗಿ ಸಮರ್ಪಿಸಲಾಗಿದೆ. ಇದರೊಂದಿಗೆ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಸಹ ಈ ದಿನವು ಪ್ರಯೋಜನಕಾರಿಯಾಗಿದೆ. ಇಷ್ಟೇ ಅಲ್ಲ, ಇದರೊಂದಿಗೆ, ಕೆಲವು ಪ್ರಮುಖ ವಿಷಯಗಳು ಗುರುವಾರದೊಂದಿಗೆ ಸಂಬಂಧ ಹೊಂದಿವೆ. 

ಗುರುವಿಗೆ ಸಂಬಂಧಿಸಿದ ಆಸಕ್ತಿದಾಯಕ ವಿಷಯಗಳು
ಗುರು ಮತ್ತು ವಿಜ್ಞಾನ: ಗುರುವಾರ ಗುರು ಗ್ರಹದೊಂದಿಗೆ ಸಂಬಂಧಿಸಿದೆ. ಸೌರವ್ಯೂಹದಲ್ಲಿ ದೊಡ್ಡ ಗ್ರಹವಿದ್ದರೆ ಅದು ಗುರು. ವಿಜ್ಞಾನದ ಪ್ರಕಾರ ಗುರು ಗ್ರಹದ ವ್ಯಾಸ ಸುಮಾರು ಒಂದೂವರೆ ಲಕ್ಷ ಕಿ.ಮೀ. ಅದೇ ಸಮಯದಲ್ಲಿ, ಸೂರ್ಯನಿಂದ ಅದರ ದೂರ ಸುಮಾರು 77 ಕೋಟಿ 80 ಲಕ್ಷ ಕಿಲೋಮೀಟರ್. ಗುರು ಗ್ರಹವು ಎಷ್ಟು ದೊಡ್ಡದಾಗಿದೆ ಎಂದರೆ ಒಂದಲ್ಲ ಎರಡಲ್ಲ, ಸುಮಾರು 1300 ಭೂಮಿಗಳನ್ನು ಅದರಲ್ಲಿ ಇರಿಸಬಹುದು.
ನವಗ್ರಹಗಳಲ್ಲಿ ಗುರುವೇ ಶ್ರೇಷ್ಠ: ಜ್ಯೋತಿಷ್ಯ ಶಾಸ್ತ್ರದಲ್ಲಿ ನವಗ್ರಹಗಳಲ್ಲಿ ಗುರುವನ್ನು ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಆದುದರಿಂದಲೇ ಅದಕ್ಕೆ ಗುರು ಎಂಬ ಬಿರುದು ಬಂದಿದೆ. ಇದು ಧನು ರಾಶಿ ಮತ್ತು ಮೀನ ರಾಶಿಯ ಅಧಿಪತಿ ಮತ್ತು ಸೂರ್ಯ, ಮಂಗಳ ಮತ್ತು ಚಂದ್ರನ ಸ್ನೇಹಿತ. ಶುಕ್ರ ಮತ್ತು ಬುಧ ಶತ್ರು ಗ್ರಹಗಳಾಗಿದ್ದರೆ, ಶನಿ ಮತ್ತು ರಾಹು ಸಮಾನ ಗ್ರಹಗಳು. ಜಾತಕದಲ್ಲಿ ಗುರುವು ಚಂದ್ರನೊಂದಿಗೆ ಸೇರಿದಾಗ, ಅದರ ಶಕ್ತಿಯು ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಗುರುವು ಮಂಗಳನೊಂದಿಗೆ ಸೇರಿದರೆ, ಅದರ ಶಕ್ತಿ ದ್ವಿಗುಣಗೊಳ್ಳುತ್ತದೆ. ಗುರುವು ಸೂರ್ಯನನ್ನು ಭೇಟಿಯಾದಾಗ ಗೌರವ  ಹೆಚ್ಚಾಗುತ್ತದೆ.

Budh Gochar 2023: ಈ ರಾಶಿಗಳ ಕೆಲಸಕ್ಕೆ ಕುತ್ತು ತರಲಿರುವ ಬುಧನ ವೃಷಭ ಗೋಚಾರ

ಗುರು ಅಸ್ತಮಿಸಿದಾಗ ಶುಭ ಕಾರ್ಯಗಳು ನಡೆಯುವುದಿಲ್ಲ: ಶುಭ ಕಾರ್ಯಗಳಿಗೂ ಗುರುವಿನ ಸಂಬಂಧವಿದೆ. ಆದ್ದರಿಂದಲೇ ಗುರುಗ್ರಹ ಅಸ್ತವಾದ ನಂತರ ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯಗಳಿಲ್ಲ. ಏಕೆಂದರೆ ಶುಭವು ಗುರುವಿನಿಂದ ಮಾತ್ರ. ಗುರು ಉದಯಿಸಿದ ನಂತರ ಮತ್ತೆ ಶುಭ ಕಾರ್ಯಗಳು ಆರಂಭವಾಗುತ್ತವೆ.
ಗುರುವಿನ ಚಿಹ್ನೆಗಳು: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಿನ್ನ, ಅರಿಶಿನ, ಹಳದಿ, ಶ್ರೀಗಂಧ, ಅಶ್ವತ್ಥ, ಹಳದಿ ಬಣ್ಣ, ಹೆಸರುಬೇಳೆ, ಹಳದಿ ಹೂವುಗಳು, ಕುಂಕುಮ, ಗುರು, ತಂದೆ, ಅರ್ಚಕ, ವಿದ್ಯೆ ಮತ್ತು ಪೂಜೆ ಇತ್ಯಾದಿಗಳನ್ನು ಗುರುವಾರ ಅಂದರೆ ಗುರುವಿನ ಸಂಕೇತವೆಂದು ಪರಿಗಣಿಸಲಾಗಿದೆ.

'ಗುರುವಾರ' ಅದೃಷ್ಟವನ್ನು ಜಾಗೃತಗೊಳಿಸುವ ದಿನ
ಗುರುವಾರ ಅದೃಷ್ಟವನ್ನು ತರುತ್ತದೆ ಎಂದು ಪರಿಗಣಿಸಲಾಗುತ್ತದೆ. ಈ ದಿನದ ಪ್ರಭಾವದಿಂದಾಗಿ ಅದೃಷ್ಟದ ಮುಚ್ಚಿದ ಬಾಗಿಲುಗಳೂ ತೆರೆದುಕೊಳ್ಳುತ್ತವೆ. ಅದಕ್ಕಾಗಿಯೇ ಜಾತಕದಲ್ಲಿ ಗುರು ಗ್ರಹವು ಬಲವಾಗಿರುವುದು ಅವಶ್ಯಕ. ಜಾತಕದಲ್ಲಿ ಗುರು ಬಲಹೀನನಾಗಿದ್ದರೆ ಅಥವಾ ಶುಕ್ರ, ಬುಧ ಅಥವಾ ರಾಹುವಿನೊಡನೆ ಇದ್ದರೆ, ಗುರುವಾರದಂದು ಉಪವಾಸವನ್ನು ಆಚರಿಸಬೇಕು ಮತ್ತು ಗುರುವನ್ನು ಪೂಜಿಸಬೇಕು. ಗುರುವಾರದಂದು ಉಪವಾಸವನ್ನು ಆಚರಿಸುವುದರಿಂದ ವೈವಾಹಿಕ ಜೀವನ ಸುಖಮಯವಾಗುತ್ತದೆ, ವಿವಾಹದ ಸಾಧ್ಯತೆಗಳು, ದೀರ್ಘಾಯುಷ್ಯ ಮತ್ತು ಅದೃಷ್ಟವು ಸೃಷ್ಟಿಯಾಗುತ್ತದೆ.

ದೇಗುಲ ಧ್ವಂಸ ಮಾಡಲು ಬಂದು ತಾಯಿಯ ಶಕ್ತಿಗೆ ಸೋಲೊಪ್ಪಿ ಶಿರ ಬಾಗಿದ ಔರಂಗಜೇಬ್!

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!