ಮಿಥುನದವರು ಪಚ್ಚೆ ಧರಿಸಿದರೆ ಪಸಂದಾಗುವುದು ಭವಿಷ್ಯ!

By Suvarna NewsFirst Published Jun 9, 2022, 11:31 AM IST
Highlights

ಮಿಥುನ ರಾಶಿಯವರು ಬುದ್ಧಿವಂತ ಗ್ರಹವಾದ ಬುಧದಿಂದ ಆಳಲ್ಪಡುವುದರಿಂದ, ಅವರ ರತ್ನವಾದ ಪಚ್ಚೆಯು ನರ ಮತ್ತು ಬೌದ್ಧಿಕ ಸಾಮರ್ಥ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. 

ನಿಮ್ಮ ರಾಶಿಚಕ್ರ ಚಿಹ್ನೆ(Zodiac sign)ಯ ಪ್ರಕಾರ ರತ್ನದ ಕಲ್ಲುಗಳನ್ನು ಧರಿಸುವುದು ಅತ್ಯಂತ ಪ್ರಯೋಜನಕಾರಿಯಾಗಿದೆ. ಈ ಅಮೂಲ್ಯವಾದ ರತ್ನಗಳು ನಿಮ್ಮ ಆಳುವ ಗ್ರಹ(planet)ವನ್ನು ಬಲಪಡಿಸುತ್ತವೆ. ಆದರೆ ಸರಿಯಾದ ರೀತಿಯಲ್ಲಿ ಧರಿಸಿದರೆ ಅದೃಷ್ಟ(luck)ವನ್ನು ತಿರುಗಿಸುತ್ತದೆ. ಅಂತೆಯೇ, ಪಚ್ಚೆ(emarald) ಅಥವಾ ಪನ್ನವು ಮಿಥುನ ರಾಶಿಯವರಿಗೆ ಮಂಗಳಕರ ರತ್ನವಾಗಿದೆ. ಪ್ರೀತಿಯನ್ನು ಹುಟ್ಟುಹಾಕಲು ಮತ್ತು ಸಂಬಂಧಗಳಲ್ಲಿ ಸಕಾರಾತ್ಮಕತೆ, ದಯೆ ಮತ್ತು ತಾಜಾತನವನ್ನು ತರಲು ಪಚ್ಚೆ ಹೆಸರುವಾಸಿಯಾಗಿದೆ.

ಬುಧವು ಮಿಥುನ(Gemini) ರಾಶಿಯಲ್ಲಿ ಜನಿಸಿದವರನ್ನು ಆಳುತ್ತದೆ. ಪಚ್ಚೆಯು ಬುಧದ ರತ್ನವಾಗಿದೆ ಮತ್ತು ಈ ಅಮೂಲ್ಯವಾದ ರತ್ನವನ್ನು ಧರಿಸಿದವರಿಗೆ ಪ್ರಯೋಜನಕಾರಿಯಾಗಿದೆ. ಬುಧ ಗ್ರಹವು ಬುದ್ಧಿಶಕ್ತಿ, ಏಕಾಗ್ರತೆ, ಸಂವಹನ, ಸ್ಮರಣೆ, ​​ಮಾನಸಿಕ ಸಾಮರ್ಥ್ಯ, ಶಬ್ದಕೋಶ ಮತ್ತು ವ್ಯವಹಾರ ಇತ್ಯಾದಿಗಳ ಸೂಚಕವಾಗಿದೆ. ಇದು ಮಾನವನ ಜೀವನದಲ್ಲಿ ಮಹತ್ತರವಾದ ಪಾತ್ರವನ್ನು ಹೊಂದಿದೆ. ಜನ್ಮ ಕುಂಡಲಿಯಲ್ಲಿನ ಶಕ್ತಿಶಾಲಿ ಬುಧವು ಒಬ್ಬನನ್ನು ಅತ್ಯಂತ ಬುದ್ಧಿವಂತ, ತೀಕ್ಷ್ಣಗ್ರಾಹಿಯನ್ನಾಗಿ ಮಾಡುತ್ತದೆ. ಇದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಒಬ್ಬರನ್ನು ಹೆಚ್ಚು ಯಶಸ್ವಿಯಾಗುವಂತೆ ಮಾಡಬಹುದು. ಜನ್ಮ ಕುಂಡಲಿಯಲ್ಲಿನ ಶಕ್ತಿಶಾಲಿ ಬುಧವು ಒಬ್ಬನನ್ನು ದಕ್ಷ ವೈದ್ಯ, ಪ್ರವೀಣ ಇಂಜಿನಿಯರ್, ಅದ್ಭುತ ಗಣಿತಜ್ಞ ಮತ್ತು ವಿಜೇತ ಪದರವನ್ನಾಗಿ ಮಾಡಬಹುದು.

ದುರ್ಬಲ ಬುಧ
ಆದರೆ, ದುರ್ಬಲ ಮತ್ತು ಬಾಧಿತ ಬುಧವು ನೆನಪಿನ ಶಕ್ತಿಯಲ್ಲಿ ಬಹಳ ಆಲಸ್ಯ, ಮರೆವು ಮತ್ತು ಸಂವಹನದ ಕೊರತೆಯನ್ನು ಉಂಟುಮಾಡಬಹುದು. ದುರ್ಬಲಗೊಂಡ ಬುಧವು ಒಬ್ಬರ ಶೈಕ್ಷಣಿಕ ವೃತ್ತಿಯನ್ನು ಮಂಕಾಗಿಸಬಹುದು. ಹಾಗಾಗಿ, ಮಿಥುನ ರಾಶಿಯವರು ಈ ಸಮಸ್ಯೆ ಎದುರಿಸುತ್ತಿದ್ದರೆ ಅವರು ಪಚ್ಚೆಯ ಪ್ರಯೋಜನಗಳನ್ನು ಪಡೆಯಬಹುದು. 

ಸೂರ್ಯ ಗೋಚಾರ: ಈ 5 ರಾಶಿಯವರು ಎಚ್ಚರ, ಎಚ್ಚರ!

ಮಿಥುನ ರಾಶಿಯನ್ನು ಬುಧ(Mercury) ಆಳುವುದರಿಂದ ಇದು ಅವರ ಆಲೋಚನಾ ಕೌಶಲ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಏಕೆಂದರೆ ಅವರು ತಮ್ಮ ಬುದ್ಧಿಶಕ್ತಿಯನ್ನು ಹೆಚ್ಚು ಬಳಸುತ್ತಾರೆ. ಈ ರತ್ನವು ಅವರ ದೃಷ್ಟಿಯನ್ನು ತೀಕ್ಷ್ಣಗೊಳಿಸಲು, ಅವರ ಮೆದುಳಿನ ಚಟುವಟಿಕೆಗಳನ್ನು ಹೆಚ್ಚಿಸಲು ಮತ್ತು ಯಾವುದೇ ಅನುಮಾನಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ಅಲ್ಲದೆ, ತಮ್ಮ ಜನ್ಮ ಕುಂಡಲಿ(horoscope)ಯಲ್ಲಿ ದುರ್ಬಲ ಬುಧವನ್ನು ಹೊಂದಿರುವವರು ಈ ಸುಂದರವಾದ ರತ್ನವನ್ನು ಧರಿಸಬಹುದು. ನೀವು ಶಿಕ್ಷಕ, ನಾಯಕ, ಪ್ರೇರಕ ಭಾಷಣಕಾರ, ನಟ ಅಥವಾ ಮಾತನ್ನೇ ಮುಖ್ಯವಾಗಿ ಹೊಂದಿದ ವೃತ್ತಿಪರರಾಗಿದ್ದರೆ, ಈ ರತ್ನವು ನಿಮಗೆ ಪ್ರಯೋಜನಕಾರಿಯಾಗಿದೆ. 

ಮಾತನಾಡುವಾಗ ತೊದಲುವವರು ಸಹ ಪಚ್ಚೆಯನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಪನ್ನವನ್ನು ಧರಿಸುವುದರಿಂದ ಮಾತನಾಡುವ ಸಾಮರ್ಥ್ಯ ಚೆನ್ನಾಗಿ ಬರುತ್ತದೆ ಎಂದು ಹೇಳಲಾಗುತ್ತದೆ. 
ಇದು ಮಿಥುನ ರಾಶಿಯವರ ಯೋಗಕ್ಷೇಮದೊಂದಿಗೆ ವ್ಯವಹರಿಸುವ ಮೂಲಕ ಅವರ ಎಲ್ಲ ದೀರ್ಘಾವಧಿಯ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ ಮತ್ತು ದೈನಂದಿನ ಜೀವನದುದ್ದಕ್ಕೂ ಅರ್ಥಹೀನ ಒತ್ತಡಗಳು ಮತ್ತು ಹೆದರಿಕೆಯಿಂದ ಅವರನ್ನು ರಕ್ಷಿಸುತ್ತದೆ. ನೀವು ಮಿಥುನ ಮಹಿಳೆಯಾಗಿದ್ದರೆ ಕೆಲವು ಮಾನಸಿಕ ಸಮಸ್ಯೆಗಳು ಮತ್ತು ಆತಂಕವನ್ನು ಅನುಭವಿಸುತ್ತಿದ್ದರೆ, ಪಚ್ಚೆ ಧಾರಣೆಯಿಂದ ಸಮಾಧಾನ ಸಿಗುತ್ತದೆ. ಇದು ತೀವ್ರತರದ ಒತ್ತಡ ಕಡಿಮೆ ಮಾಡುತ್ತದೆ. 

Numerology Today: ಇವರಿಗೆ ಅತಿ ಭಾವುಕತೆಯಿಂದ ಸಮಸ್ಯೆ

ಪಚ್ಚೆಯನ್ನು ಹೇಗೆ ಧರಿಸಬೇಕು?
ಬುಧವಾರ(Wednesday)ದು ಮುಂಜಾನೆ ಹಸಿ ಹಾಲು ಮತ್ತು ಗಂಗಾಜಲದಿಂದ ತೊಳೆದ ನಂತರ ಪಚ್ಚೆಯನ್ನು ಮೊದಲ ಬಾರಿಗೆ ಧರಿಸಬೇಕು. ಇದನ್ನು ಬೆಳ್ಳಿಯ ಉಂಗುರದಲ್ಲಿ ಅಥವಾ ಬೆಳ್ಳಿ ಅಥವಾ ಹಸಿರು ದಾರದಿಂದ ಮಾಡಿದ ಹಾರದಲ್ಲಿ ಬಲಗೈಯ ಕಿರುಬೆರಳಿಗೆ ಧರಿಸಲಾಗುತ್ತದೆ. ಅಲ್ಲದೆ, ಮೊದಲ ಬಾರಿಗೆ ಪನ್ನವನ್ನು ಧರಿಸುವಾಗ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಬೇಕು, ಜೊತೆಗೆ "ಓಂ ಬುಮ್ ಬುಧಾಯ ನಮಃ" ಮಂತ್ರವನ್ನು ಮೂರು ಬಾರಿ ಪಠಿಸಬೇಕು.

click me!