ಲಕ್ಷ್ಮಿ ದೇವಿ ನೆಲೆಸಲು ಮಲಗುವ ಮುನ್ನ ಹೀಗೆ ಮಾಡಿ

Published : Oct 03, 2023, 12:05 PM IST
ಲಕ್ಷ್ಮಿ ದೇವಿ ನೆಲೆಸಲು ಮಲಗುವ ಮುನ್ನ ಹೀಗೆ ಮಾಡಿ

ಸಾರಾಂಶ

ಹಿಂದೂ ಧರ್ಮದಲ್ಲಿ ಮನೆಯ ಮಹಿಳೆಯನ್ನು ಲಕ್ಷ್ಮಿ ದೇವಿಯ ಅವತಾರ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮಹಿಳೆ ಸಂತೋಷವಾಗಿರುವ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ ಮತ್ತು ಅವಳನ್ನು ಆಶೀರ್ವದಿಸುತ್ತಾಳೆ ಎಂದು ನಂಬಲಾಗಿದೆ. ಹಾಗೆಯೇ ಹೆಂಗಸರು ಸಂಕಟದಲ್ಲಿ ಬದುಕುವ ಮನೆಯಲ್ಲಿ ದುಃಸ್ಥಿತಿಯ ರಾಶಿಯೇ ಇರುತ್ತದೆ.

ಹಿಂದೂ ಧರ್ಮದಲ್ಲಿ ಮನೆಯ ಮಹಿಳೆಯನ್ನು ಲಕ್ಷ್ಮಿ ದೇವಿಯ ಅವತಾರ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮಹಿಳೆ ಸಂತೋಷವಾಗಿರುವ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ ಮತ್ತು ಅವಳನ್ನು ಆಶೀರ್ವದಿಸುತ್ತಾಳೆ ಎಂದು ನಂಬಲಾಗಿದೆ. ಹಾಗೆಯೇ ಹೆಂಗಸರು ಸಂಕಟದಲ್ಲಿ ಬದುಕುವ ಮನೆಯಲ್ಲಿ ದುಃಸ್ಥಿತಿಯ ರಾಶಿಯೇ ಇರುತ್ತದೆ.

ಮಹಿಳೆ ಮಾಡುವ ಕೆಲಸದಿಂದ ಕುಟುಂಬಕ್ಕೂ ತೊಂದರೆಯಾಗುತ್ತದೆ. ಮುಖ್ಯವಾಗಿ, ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರವು ಮನೆಯಲ್ಲಿನ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ, ಬಡತನವನ್ನು ನಾಶಮಾಡುವ, ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವ ಮತ್ತು ಲಕ್ಷ್ಮಿ ದೇವಿಯನ್ನು ಮೆಚ್ಚಿಸುವ ಕೆಲವು ಪರಿಹಾರಗಳನ್ನು ಉಲ್ಲೇಖಿಸಿದೆ. ಮಹಿಳೆ ಮಲಗುವ ಮೊದಲು ಈ ಪರಿಹಾರವನ್ನು ಮಾಡಿದರೆ, ಅದು ಪ್ರಯೋಜನಕಾರಿಯಾಗಿದೆ.

ರಾತ್ರಿ ಮಲಗುವ ಮುನ್ನ ಮಹಿಳೆ ಕರ್ಪೂರವನ್ನು ಉರಿಸಿ ವಾಸ್ತು ಶಾಸ್ತ್ರದ ಪ್ರಕಾರ ಇಡೀ ಮನೆಗೆ ತೋರಿಸಬೇಕು. ಈ ಪರಿಹಾರವನ್ನು ಮಾಡುವುದರಿಂದ ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ ಮತ್ತು ಧನಾತ್ಮಕ ಶಕ್ತಿಯ ಪ್ರಸರಣವನ್ನು ಹೆಚ್ಚಿಸುತ್ತದೆ. ನೀವು ಮಲಗುವ ಕೋಣೆಯಲ್ಲಾಗಬಹುದು ಅಥವಾ ಮನೆಯಲ್ಲಾಗಬಹುದು ಯಾವುದೇ ನಕಾರಾತ್ಮಕ ಶಕ್ತಿಗಳು ನೆಲೆಸುವುದಿಲ್ಲ. ಹಾಗೂ ಒಂದು ವೇಳೆ ನಕಾರಾತ್ಮಕ ಶಕ್ತಿಗಳು ನೆಲೆಸಿದ್ದರೆ ಅದು ಕರ್ಪೂರದ ಧೂಪದಿಂದ ನಾಶವಾಗುತ್ತದೆ. ದಾಂಪತ್ಯ ಜೀವನದಲ್ಲಿ ಏನಾದರೂ ಸಮಸ್ಯೆಗಳಿದ್ದರೂ ಅದು ದೂರಾಗುತ್ತದೆ

ಮಹಿಳೆಯು ರಾತ್ರಿ ಮಲಗುವ ಮುನ್ನ ಮನೆಯ ದ್ವಾರದಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಬೇಕು. ಮಹಿಳೆ ಈ ಪರಿಹಾರವನ್ನು ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.

ಈ ಬಿಳಿ ಹೂವಿನಿಂದ ಹೊಳೆಯುವುದು ಅದೃಷ್ಟ

ಮಹಿಳೆ ಮನೆಯಲ್ಲಿ ಮಲಗುವ ಮೊದಲು ಧೂಪವನ್ನು ಬೆಳಗಿಸಬೇಕು.

ರಾತ್ರಿ ಮಲಗುವ ಮುನ್ನ ನಿಮ್ಮ ಕೈಕಾಲುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ, ಕನಿಷ್ಠ 5 ನಿಮಿಷಗಳ ಕಾಲ ನಿಮ್ಮ ನೆಚ್ಚಿನ ದೇವರನ್ನು ಧ್ಯಾನಿಸಿ. ದೀಪವನ್ನು ಮಹಿಳೆಯು ರಾತ್ರಿಯ ವೇಳೆ ದೇವಾಲಯದಲ್ಲಿ ಅಥವಾ ಪೂಜಾ ಮನೆಯಲ್ಲಿ ಹಚ್ಚಬೇಕು. ಮನೆಯ ಬಳಿ ದೇವಾಲಯವಿದ್ದವರು ಆ ದೇವಾಲಯಕ್ಕೆ ಹೋಗಿ ದೀಪವನ್ನು ಹಚ್ಚಬಹುದು. ಇಲ್ಲವಾದರೆ ಮನೆಯ ದೇವರ ಕೋಣೆಯಲ್ಲೇ ದೀಪವನ್ನು ಹಚ್ಚಬೇಕು. ಇದರಿಂದ ನಿಮ್ಮ ಮನೆಯಲ್ಲಿ ಸದಾಕಾಲ ಮಾತೆ ಲಕ್ಷ್ಮಿಯು ನೆಲೆಸುತ್ತಾಳೆ.

ಜನರು ಸಾಮಾನ್ಯವಾಗಿ ಮಲಗುವ ಮುನ್ನ ಮನೆಯಲ್ಲಿ ಎಲ್ಲಾ ದೀಪಗಳನ್ನು ಆಫ್ ಮಾಡುತ್ತಾರೆ. ಮನೆಯ ನೈಋತ್ಯ ಮೂಲೆಯು ಕತ್ತಲೆಯಾಗಿರಬಾರದು ಎಂಬುದನ್ನು ನೆನಪಿಡಿ.ಹೀಗೆ ಮಾಡುವುದರಿಂದ ನಿಮ್ಮ ಪಿತೃಗಳಿಗೆ ರಾತ್ರಿ ಓಡಾಡಲು ದಾರಿ ಮಾಡಿಕೊಟ್ಟ ಹಾಗೆ. ಇದರಿಂದ ನಿಮ್ಮ ಪಿತೃಗಳು ಸಂತೋಷಗೊಂಡು ಸಂತೋಷ, ಸಮೃದ್ಧಿಯನ್ನು ಆಶೀರ್ವದಿಸುತ್ತಾರೆ. ರಾತ್ರಿ ಸಮಯದಲ್ಲಿ ನಿಮ್ಮ ಪೂರ್ವಜರಾಗಿರಬಹುದು ಅಥವಾ ಪಿತೃಗಳಾಗಿರಬಹುದು ಮನೆಯ ಸದಸ್ಯರನ್ನು ಆಶೀರ್ವದಿಸಲು ಬರುತ್ತಾರೆನ್ನುವ ನಂಬಿಕೆಯಿದೆ. 

ರಾತ್ರಿಯಲ್ಲಿ ನೀವು ಅಂದರೆ ಮನೆಯ ಮಹಿಳೆಯಾದ ನೀವು ಮಲಗುವ ಮುನ್ನ ನಿಮ್ಮ ಮನೆಯ ಹಿರಿಯರು ಮಲಗಿದ್ದಾರೆಯೇ ಎಂದು ನೋಡಬೇಕು. ಒಂದು ವೇಳೆ ಅವರು ಮಲಗಿಲ್ಲವಾದರೆ ಅಥವಾ ಅವರು ಮಲಗುವ ಮುನ್ನ ಅವರ ಬೇಕು, ಬೇಡಗಳನ್ನು ವಿಚಾರಿಸಿ ನಂತರ ನೀವು ಮಲಗಬೇಕು. ಅವರು ಮಲಗಿದ ನಂತರ ನೀವು ಮಲಗಬೇಕು

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ