Kamakhya Temple: ಬ್ರಹ್ಮಪುತ್ರ ನದಿ ಏಕೆ ಮೂರು ದಿನಗಳ ಕಾಲ ಕೆಂಪಾಗುತ್ತದೆ?

By Suvarna NewsFirst Published May 21, 2023, 11:58 AM IST
Highlights

ಬ್ರಹ್ಮಪುತ್ರ ನದಿಯನ್ನು ಭಾರತದ ಕೆಂಪು ನದಿ ಎಂದೇ ಕರೆಯಲಾಗುತ್ತದೆ. ಇದು ವರ್ಷದಲ್ಲಿ ಮೂರು ದಿನಗಳ ಕಾಲ ಬ್ರಹ್ಮಪುತ್ರ ನದಿಯ ನೀರಿನ ಬಣ್ಣ ರಕ್ತದ ಬಣ್ಣಕ್ಕೆ ತಿರುಗುತ್ತದೆ. ಇದರ ರಹಸ್ಯವು ಕಾಮಾಕ್ಯ ದೇವಿ ದೇವಸ್ಥಾನಕ್ಕೆ ಸಂಬಂಧಿಸಿದೆ. 

ಬೆಟ್ಟಗಳಲ್ಲಿ ನೆಲೆಗೊಂಡಿರುವ ಸುಂದರವಾದ ನಗರ ಅಸ್ಸಾಂ. ಹೇಳಲು ಒಂದು ಸಣ್ಣ ನಗರ. ಆದರೆ ಇಲ್ಲಿ ಯಾವಾಗಲೂ ಪ್ರವಾಸಿಗರ ದಂಡೇ ಇರುತ್ತದೆ. ಅಸ್ಸಾಂ ನಗರದ ಸೌಂದರ್ಯವನ್ನು ಹೆಚ್ಚಿಸಲು ಮತ್ತು ಪ್ರವಾಸಿಗರ ಆಕರ್ಷಣೆಯ ಪ್ರಮುಖ ಕೇಂದ್ರವಾಗಲು ಮುಖ್ಯ ಕಾರಣವೆಂದರೆ ಬ್ರಹ್ಮಪುತ್ರ ನದಿ.

ಬ್ರಹ್ಮಪುತ್ರ ನದಿಯ ದಡದಲ್ಲಿ ನೆಲೆಸಿರುವುದು ಅಸ್ಸಾಂ ನಗರದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದರೊಂದಿಗೆ, ಗುವಾಹಟಿಯಲ್ಲಿ ಬ್ರಹ್ಮಪುತ್ರ ನದಿಯ ದಡದಲ್ಲಿರುವ ಕಾಮಾಕ್ಯ ದೇವಿಯ ಪ್ರಸಿದ್ಧ ದೇವಾಲಯದಿಂದಾಗಿ ಧಾರ್ಮಿಕ ಚಟುವಟಿಕೆಗಳು  ಕೂಡಾ ಇಲ್ಲಿ ಜೋರಾಗಿರುತ್ತದೆ. 

ಕಾಮಾಕ್ಯ ದೇವಾಲಯ ಮತ್ತು ಬ್ರಹ್ಮಪುತ್ರ ನದಿ
ಕಾಮಾಕ್ಯ ದೇವಸ್ಥಾನ ಮತ್ತು ಬ್ರಹ್ಮಪುತ್ರ ನದಿ ಯಾವಾಗಲೂ ಜನರ ನಂಬಿಕೆ ಮತ್ತು ಆಕರ್ಷಣೆಯ ಕೇಂದ್ರವಾಗಿದೆ. ಆದರೆ ಅದೇ ಸಮಯದಲ್ಲಿ ಇದು ಪವಾಡಗಳು ಮತ್ತು ರಹಸ್ಯಗಳಿಂದ ಕೂಡಿದೆ. ದೇವಿಯ ಋತುಸ್ರಾವದ ಸಮಯದಲ್ಲಿ ಹರಿಯುವ ರಕ್ತದಿಂದಾಗಿ ಬ್ರಹ್ಮಪುತ್ರ ನದಿಯ ನೀರು ಕೂಡ ಕೆಂಪು ಬಣ್ಣಕ್ಕೆ ತಿರುಗುತ್ತದೆ ಎಂದು ನಂಬಲಾಗಿದೆ. ಇದನ್ನು ಕೇಳಲು ನಿಮಗೆ ವಿಚಿತ್ರ ಎನಿಸಬಹುದು. ಆದರೆ ವಿಶೇಷ ಧಾರ್ಮಿಕ ನಂಬಿಕೆಗಳನ್ನು ಅದಕ್ಕೆ ಲಗತ್ತಿಸಲಾಗಿದೆ.

ಮನೆಗೆ ಬೆಕ್ಕು ಬಂದು ಸೇರಿಕೊಂಡರೆ ಏನರ್ಥ? ಧರ್ಮಗ್ರಂಥಗಳು ಹೇಳುವುದೇನು?

ಯೋನಿ ಪೂಜೆ
ಕಾಮಾಕ್ಯ ದೇವಿಯ ದೇವಾಲಯವು ಭಾರತದಲ್ಲಿ ನೆಲೆಗೊಂಡಿರುವ 51 ಶಕ್ತಿಪೀಠಗಳಲ್ಲಿ ಒಂದಾಗಿದೆ. ನಂಬಿಕೆಯ ಪ್ರಕಾರ, ಸತಿ ದೇವಿಯ ಯೋನಿ ಭಾಗವು ಇಲ್ಲಿ ಬಿದ್ದಿದೆ. ಅದಕ್ಕಾಗಿಯೇ ಕಾಮಾಕ್ಯ ದೇವಾಲಯದಲ್ಲಿ ದೇವಿಯ ಯೋನಿ ಪೂಜೆಯನ್ನು ಮಾಡಲಾಗುತ್ತದೆ. ಇಲ್ಲಿ ದೇವಿಯ ವಿಗ್ರಹವಿಲ್ಲ. ಯೋನಿಯ ಭಾಗವಾಗಿರುವ ಕಾರಣ, ದೇವಿಯ ರಜಸ್ವಲಾ (ಮುಟ್ಟು) ಕೂಡ ಇಲ್ಲಿ ನಡೆಯುತ್ತದೆ. ಕಾಮಾಕ್ಯ ದೇವಿಯು ವರ್ಷಕ್ಕೊಮ್ಮೆ ಋತುಮತಿಯಾಗುವ ಏಕೈಕ ದೇವಾಲಯ ಇದಾಗಿದೆ. ದೇವಿಯು ಋತುಚಕ್ರದಲ್ಲಿದ್ದಾಗ, ದೇವಾಲಯವನ್ನು ಮೂರು ದಿನಗಳವರೆಗೆ ಸಂಪೂರ್ಣ ಮುಚ್ಚಲಾಗುತ್ತದೆ ಮತ್ತು ದೇವಿಯ ದರ್ಶನವನ್ನು ಸಹ ನಿಷೇಧಿಸಲಾಗಿದೆ.

ಇದರಿಂದ ಬ್ರಹ್ಮಪುತ್ರ ನದಿ ಕೆಂಪಾಗುತ್ತದೆ..
ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ಬ್ರಹ್ಮಪುತ್ರ ನದಿಯ ನೀರು ಮೂರು ದಿನಗಳ ಕಾಲ ರಕ್ತದಂತೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಈ ಅವಧಿಯಲ್ಲಿ, ಕಾಮಾಕ್ಯ ದೇವಿಯು ಮಾಸಿಕ ಚಕ್ರದಲ್ಲಿರುತ್ತಾಳೆ ಎಂದು ನಂಬಲಾಗಿದೆ. ರಸಜ್ವಾಲೆಯಾದ ಸಮಯದಲ್ಲಿ, ಇಡೀ ಬ್ರಹ್ಮಪುತ್ರ ನದಿಯು ಕಾಮಾಕ್ಯ ದೇವಿಯ ಹರಿಯುವ ರಕ್ತದಿಂದ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಬ್ರಹ್ಮಪುತ್ರ ನದಿಯನ್ನು ಭಾರತದ ಕೆಂಪು ನದಿ ಎಂದೇ ಕರೆಯಲಾಗುತ್ತದೆ.

ವಾರ ಭವಿಷ್ಯ: ಕಟಕಕ್ಕೆ ವೃತ್ತಿಪರವಾಗಿ ಕಹಿಯಾದ ವಾರ

ಕೆಂಪು ಬಟ್ಟೆಯೇ ಪ್ರಸಾದ
ಕಾಮಾಕ್ಯ ದೇವಿಯ ದೇವಸ್ಥಾನದಲ್ಲಿ ಪೂಜಾ ನಿಯಮಗಳು ಸೇರಿದಂತೆ ಸಂಪ್ರದಾಯಗಳು ಇತರ ದೇವಾಲಯಗಳಿಗಿಂತ ಭಿನ್ನವಾಗಿವೆ. ಇಲ್ಲಿ ಭಕ್ತರಿಗೆ ಪ್ರಸಾದವನ್ನು ವಿಭಿನ್ನ ರೀತಿಯಲ್ಲಿ ನೀಡಲಾಗುತ್ತದೆ. ಇಲ್ಲಿ ಭಕ್ತರಿಗೆ ಕೆಂಪು ಬಣ್ಣದ ಬಟ್ಟೆಯನ್ನು ಪ್ರಸಾದವಾಗಿ ನೀಡಲಾಗುತ್ತದೆ. ಈ ಕೆಂಪು ಬಟ್ಟೆಯ ಬಗ್ಗೆ ಹೇಳುವುದಾದರೆ, ದೇವಿಗೆ ಮೂರು ದಿನಗಳ ಋತು ಚಕ್ರ ಬಂದಾಗ, ದೇವಾಲಯದಲ್ಲಿ ಬಿಳಿ ಬಟ್ಟೆಗಳನ್ನು ಹರಡಲಾಗುತ್ತದೆ ಮತ್ತು ದೇವಾಲಯವನ್ನು ಮೂರು ದಿನಗಳವರೆಗೆ ಮುಚ್ಚಲಾಗುತ್ತದೆ. ಮೂರು ದಿನಗಳ ನಂತರ ದೇವಾಲಯದ ಬಾಗಿಲು ತೆರೆದಾಗ, ಬಿಳಿ ಬಟ್ಟೆಯು ದೇವಿಯ ರಕ್ತದಿಂದ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಈ ಬಟ್ಟೆಯನ್ನು ಅಂಬುವಾಚಿ ಬಟ್ಟೆ ಎಂದು ಕರೆಯಲಾಗುತ್ತದೆ ಮತ್ತು ಇದನ್ನೇ ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!