Transgender Community: ಮಂಗಳಮುಖಿಯರ ಆಶೀರ್ವಾದ ಪಡೆಯೋ ಆತುರದಲ್ಲಿ ಹೀಗೆ ಮಾಡ್ಬೇಡಿ

Published : Aug 07, 2025, 11:46 AM ISTUpdated : Aug 07, 2025, 11:50 AM IST
Transgender

ಸಾರಾಂಶ

Transgender: ಮಂಗಳಮುಖಿಯರ ಆಶೀರ್ವಾದ ಬಹಳ ಮುಖ್ಯ. ಅನೇಕ ಸಮಸ್ಯೆಗೆ ಪರಿಹಾರವಾಗಬಲ್ಲ ಈ ಮಂಗಳಮುಖಿಯರಿಗೆ ದಾನ ಮಾಡುವ ಮುನ್ನ ಕೆಲ ವಿಷ್ಯ ನೀವು ತಿಳಿದ್ಕೊಳ್ಳಿ. ಇಲ್ಲ ಅಂದ್ರೆ ಅದೃಷ್ಟ ದುರಾದೃಷ್ಟವಾಗ್ಬಹುದು. 

ಮಂಗಳಮುಖಿಯರು (transgender) ಅಪಾರ ಶಕ್ತಿಯನ್ನು ಹೊಂದಿರ್ತಾರೆ ಎನ್ನುವ ನಂಬಿಕೆ ನಮ್ಮಲ್ಲಿದೆ. ಬೇಡಿ ಬಂದಾಗ ಅವರನ್ನು ಬರಿಗೈನಲ್ಲಿ ಕಳಿಸೋದಿಲ್ಲ. ಶುಭ ಕಾರ್ಯಗಳ ಸಂದರ್ಭದಲ್ಲಿ ಅವರನ್ನು ಮನೆಗೆ ಕರೆಸಿ, ಅವರಿಗೆ ಹಣ, ಬಟ್ಟೆ ದಾನ ಮಾಡುವ ಜನರಿದ್ದಾರೆ. ಮಂಗಳಮುಖಿಯರು ಸಂತೋಷಗೊಂಡ್ರೆ ಅದೃಷ್ಟದ ಬಾಗಿಲು ತೆರೆದಂತೆ ಎಂಬ ನಂಬಿಕೆ ಇದೆ. ಮಾರ್ಕೆಟ್ ನಲ್ಲಿ, ಸಿಗ್ನಲ್ ನಲ್ಲಿ ಕೈ ಒಡ್ಡುವ ಮಂಗಳಮುಖಿಯರಿಗೆ ದಾನ ಮಾಡುವ ಮುನ್ನ ನೀವು ಕೆಲ ಸಂಗತಿ ತಿಳಿದಿರಬೇಕು. ತಪ್ಪಾಗಿ ಮಾಡುವ ಕೆಲ್ಸ ಅದೃಷ್ಟದ ಬದಲು ದುರಾದೃಷ್ಟ ತರ್ಬಹುದು.

ಮಂಗಳಮುಖಿಯರಿಗೆ ದಾನ ಮಾಡುವ ಮೊದಲು ಇದೆಲ್ಲ ತಿಳಿದಿರಲಿ :

ಮಂಗಳಮುಖಿ ನೀಡಿದ ಎಲ್ಲ ನಾಣ್ಯ ಅದೃಷ್ಟ (luck) ತರುವುದಿಲ್ಲ : ಸಾಮಾನ್ಯವಾಗಿ ಮಂಗಳಮುಖಿ ಹಣವನ್ನು ನಿಮಗೆ ನೀಡಿದ್ರೆ ನಿಮ್ಮ ಲಕ್ ಬದಲಾಗುತ್ತೆ ಅಂತಾರೆ. ಹಾಗಾಗಿ ಅನೇಕರು ಮಂಗಳಮುಖಿಗೆ ಹಣ ನೀಡಿ ನಂತ್ರ ಅವರಿಂದ ನಾಣ್ಯವನ್ನು ಪಡೀತಾರೆ. ನೀವು ಒತ್ತಾಯದಿಂದ ಪಡೆದ ಹಣ ನಿಮ್ಮ ಅದೃಷ್ಟ ಬದಲಿಸೋದಿಲ್ಲ. ಮಂಗಳಮುಖಿ ತನ್ನ ಮನಸ್ಸಿನಿಂದ ನಿಮಗೆ ಹಣ ನೀಡಿದ್ರೆ ಮಾತ್ರ ನಿಜವಾದ ಆಶೀರ್ವಾದ ನಿಮಗೆ ಸಿಕ್ಕಂತೆ. ನೀವು ಈ ನಾಣ್ಯವನ್ನು ಸಂಪತ್ತಿಡುವ ಜಾಗದಲ್ಲಿ ಇಟ್ರೆ ಹಣದ ಕೊರತೆ ನಿಮಗೆ ಎಂದಿಗೂ ಕಾಡುವುದಿಲ್ಲ.

ಬುಧ ಗ್ರಹ ದೋಷ ಪರಿಹಾರಕ್ಕೆ ಈ ಕೆಲ್ಸ ಮಾಡಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಬುಧ ಗ್ರಹ ದುರ್ಬಲವಾಗಿದ್ದರೆ ವೃತ್ತಿ, ವ್ಯವಹಾರ ಇತ್ಯಾದಿಗಳಿಗೆ ತೊಂದರೆಯಾಗುತ್ತದೆ. ಅಂಥವರು ಬುಧವಾರದಂದು ಮಂಗಳಮುಖಿಗೆ ಹಸಿರು ಬಟ್ಟೆ, ಹಸಿರು ಹಣ್ಣು, ಹಸಿರು ಬಳೆಗಳು ಮತ್ತು ಹಣ ಇತ್ಯಾದಿಗಳನ್ನು ದಾನ ನೀಡಬೇಕು. ಬುಧವಾರದಂದು ಮಂಗಳಮುಖಿಯರಿಗೆ ದಾನ ಮಾಡಿದ್ರೆ ಬುಧಕ್ಕೆ ಸಂಬಂಧಿಸಿದ ದೋಷ ಪರಿಹಾರವಾಗಿ, ಶುಭ ಪ್ರಾಪ್ತಿಯಾಗುತ್ತದೆ.

ಸೂಸೂತ್ರವಾಗಿ ನಡೆಯುತ್ತೆ ಎಲ್ಲ ಕೆಲ್ಸ : ಮನೆಯಲ್ಲಿ ಮಾಡ್ಬೇಕು ಅಂದ್ಕೊಂಡಿರುವ ಶುಭ ಕೆಲಸಕ್ಕೆ ಪದೇ ಪದೇ ಅಡ್ಡಿಯಾಗ್ತಿದ್ದರೆ ನೀವು ಮಂಗಳಮುಖಿಯರ ಡೋಲನ್ನು ಪೂಜೆ ಮಾಡ್ಬೇಕು. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಉಡುಗೊರೆ ನೀಡಿ. ಮಂಗಳಮುಖಿಯರ ಆಶೀರ್ವಾದದಿಂದ ಕೆಲಸಕ್ಕೆ ಬಂದ ಅಡೆತಡೆ ನಿವಾರಣೆಯಾಗುತ್ತದೆ.

ಈ ವಸ್ತುವನ್ನು ಎಂದೂ ಮಂಗಳಮುಖಿಯರಿಗೆ ದಾನ ಮಾಡ್ಬೇಡಿ : ಹಣ, ಬಟ್ಟೆ, ಆಹಾರವನ್ನು ನೀವು ಮಂಗಳಮುಖಿಯರಿಗೆ ದಾನ ಮಾಡಿದ್ರೆ ಅವರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ. ಆದ್ರೆ ಕೆಲ ವಸ್ತುಗಳನ್ನು ಮಂಗಳಮುಖಿಯರಿಗೆ ದಾನದ ರೂಪದಲ್ಲಿ ನೀಡ್ಬಾರದು. ಹಿಂದೂ ನಂಬಿಕೆ ಪ್ರಕಾರ, ನೀವು ಧರಿಸಿದ ಬಟ್ಟೆ ಅಥವಬಾ ಬಳಸಿದ ಮೇಕಪ್ ವಸ್ತುಗಳನ್ನು ಮಂಗಳಮುಖಿಯರಿಗೆ ನೀಡಬೇಡಿ. ಹಾಗೆಯೇ ಸತ್ತ ವ್ಯಕ್ತಿಯ ಬಟ್ಟೆಯನ್ನು ಕೂಡ ಅವರಿಗೆ ದಾನವಾಗಿ ನೀಡಬಾರದು. ಪ್ಲಾಸ್ಟಿಕ್ ಪಾತ್ರೆ, ಪೊರಕೆ, ಎಣ್ಣೆ ಇತ್ಯಾದಿಗಳನ್ನು ನಪುಂಸಕರಿಗೆ ದಾನ ಮಾಡುವುದನ್ನು ನಿಷೇಧಿಸಲಾಗಿದೆ. ಹಾಗೆಯೇ ಹಳಸಿದ ಅಥವಾ ಹಿಂದಿನ ದಿನದ ಆಹಾರವನ್ನು ಅವರಿಗೆ ನೀಡಬೇಡಿ.

ಹೀಗೆ ಮಾಡಿದ್ರೆ ದಾನದ ಫಲ ಲಭಿಸದು : ಮನೆಯ ಮುಂದೆ ಬರುವ ಮಂಗಳಮುಖಿಯನ್ನು ಹಾಗೆ ಕಳುಹಿಸಬೇಡಿ. ರಸ್ತೆ ಅಥವಾ ಸಿಗ್ನಲ್ ನಲ್ಲಿ ಸಿಗುವ ಮಂಗಳಮುಖಿಯರಿಗೆ ಹಣ ನೀಡಿದ ಮೇಲೆ ಅವರಿಗೆ ಅವಮಾನ ಮಾಡಬೇಡಿ. ಅವರನ್ನು ಗೇಲಿ ಮಾಡಿದ್ರೆ ಅಥವಾ ಅವರನ್ನು ನೋಡಿ ನಕ್ಕರೆ ದಾನದ ಫಲ ಲಭಿಸುವುದಿಲ್ಲ. ಅವರಿಗೆ ಎಲ್ಲರಂತೆ ಸಮನಾದ ಗೌರವ ನೀಡಿದಾಗ ಮಾತ್ರ ಅವರ ಆಶೀರ್ವಾದ ನಿಮಗೆ ಸಿಗುತ್ತದೆ.

PREV
Read more Articles on
click me!

Recommended Stories

3 ರಾಶಿಗೆ ವಿಪರೀತ ರಾಜಯೋಗದಿಂದ ಲಾಭ, ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ
2026 ರ ಮೊದಲು ಸಮಸಪ್ತಕ ರಾಜಯೋಗ, 3 ರಾಶಿಗೆ ಅದೃಷ್ಟ, ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ