Astrology Tips : ಪತಿ ಪತ್ನಿ ಮಧ್ಯೆ ನಡೆಯುವ ಜಗಳಕ್ಕೆ ಮೂಲ ಕಾರಣ ಇದು

By Suvarna NewsFirst Published May 12, 2023, 1:24 PM IST
Highlights

ದೀರ್ಘ ದಾಂಪತ್ಯ ಈಗ ಕಷ್ಟವಾಗಿದೆ. ಸಣ್ಣ ವಿಷ್ಯಕ್ಕೂ ದಂಪತಿ ಮಧ್ಯೆ ಗಲಾಟೆ ನಡೆದು ಬೇರೆಯಾಗ್ತಾರೆ.  ಇದಕ್ಕೆ ನಾನಾ ಕಾರಣವಿದೆ. ಅದಕ್ಕೆ ಪರಿಹಾರವೂ ನಮ್ಮಲ್ಲೇ ಇದೆ. ಸಂಗಾತಿ ಜೊತೆ ಜೀವನ ಪೂರ್ತಿ ಬದುಕಬೇಕೆಂದ್ರೆ ಏನು ಮಾಡ್ಬೇಕು ಎಂಬುದನ್ನು ನಾವು ಹೇಳ್ತೇವೆ. 
 

ಈಗಿನ ದಿನಗಳಲ್ಲಿ ದಾಂಪತ್ಯ ಬೇಗ ಅಂತ್ಯಕಾಣುತ್ತಿದೆ. ಮದುವೆಯಾಗಿ ನಾಲ್ಕೈದು ತಿಂಗಳಲ್ಲೇ ದಂಪತಿ ಬೇರೆಯಾಗ್ತಿದ್ದಾರೆ. ಇದಕ್ಕೆ ಅನೇಕ ಕಾರಣಗಳಿರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹ ದೋಷ ಹಾಗೂ ಜಾತಕ ದಾಂಪತ್ಯ ಜೀವನ ಮುರಿದು ಬೀಳಲು ಕಾರಣವಾಗುತ್ತದೆ. ಈ ಎರಡು ದೋಷಗಳು ನಿವಾರಣೆಯಾದರೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಸಂಗಾತಿ ಬೇರೆಯಾಗಲು ಯಾವೆಲ್ಲ ಗ್ರಹ ಹಾಗೂ ಜಾತಕದ ಯಾವ ದೋಷ ಕಾರಣವಾಗುತ್ತದೆ ಎಂಬುದನ್ನು ನಾವಿಂದು ಹೇಳ್ತೇವೆ.

ಜಾತಕ (Horoscope) ದಲ್ಲಿ ಹೊಂದಾಣಿಕೆ : ಹಿಂದಿನ ಕಾಲದಲ್ಲಿ ಜಾತಕ ಹೊಂದಿಸಿ ಮದುವೆ ಮಾಡ್ತಿದ್ದರು. ಆದ್ರೆ ಈಗಿನ ಜನರು ಜಾತಕಕ್ಕೆ ಯಾವುದೇ ಮಾನ್ಯತೆ ನೀಡೋದಿಲ್ಲ. ಇದು ನಿಮ್ಮ ಸಂಸಾರ ಹಾಳಾಗಲು ದಾರಿಯಾಗುತ್ತದೆ. ಮದುವೆಗೆ ಮೊದಲು ವಧು ಮತ್ತು ವರರ ಗುಣಗಳು ಮತ್ತು ಗಣಗಳನ್ನು ಹೊಂದಿಸಬೇಕು. ಜಾತಕದಲ್ಲಿ ಈವೆರಡೂ ಹೊಂದದೆ ಇದ್ರೆ ಮದುವೆಯ ವೈಫಲ್ಯದ ಸಾಧ್ಯತೆ ಹೆಚ್ಚಿಸುತ್ತದೆ. ಶಾಸ್ತ್ರದಲ್ಲಿ ಇದಕ್ಕೆ ಪರಿಹಾರವಿದೆ. ಕೆಲವೊಂದು ಉಪಾಯದ ಮೂಲಕ ನೀವು ದಾಂಪತ್ಯ (Marriage) ವನ್ನು ಗಟ್ಟಿಗೊಳಿಸಬಹುದು. 

Latest Videos

ಈ ವಾಸ್ತು ಟಿಪ್ಸ್ ಪಾಲಿಸಿದ್ರೆ, ನಿಮ್ಮ ತಿಜೋರಿ ಹಣದಿಂದ ತುಂಬಲಿದೆ!

ಗ್ರಹ (Planet) ದೋಷ : ಕೆಲವರ ಜಾತಕದಲ್ಲಿ ಮದುವೆಯ ಸ್ಥಳದಲ್ಲಿ ಅಶುಭ ಗ್ರಹಗಳು ಕುಳಿತುಕೊಳ್ಳುತ್ತವೆ. ಅವು ಮದುವೆ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ.  ಇದ್ರಿಂದ ವೈವಾಹಿಕ ಸಂಬಂಧ ಮುರಿಯುವ ಸಂಭವ ಹೆಚ್ಚಿರುತ್ತದೆ. ಗ್ರಹವನ್ನು ಬಲಪಡಿಸುವ ಕೆಲಸ ಮಾಡಿದ್ರೆ ಎಲ್ಲ ದಾಂಪತ್ಯ ಸಮಸ್ಯೆ ದೂರವಾಗುತ್ತದೆ. 

ಪಿತೃದೋಷ : ಹಿರಿಯರ ಅತೃಪ್ತಿ ಕೂಡ ಸಂಸಾರವನ್ನು ಹಾಳು ಮಾಡುತ್ತದೆ. ಪಿತೃದೋಷವಿರುವ ಮನೆಯಲ್ಲಿ ವಾಸಿಸುವ ಎಲ್ಲರಿಗೂ ಈ ದೋಷ ತಟ್ಟುತ್ತದೆ. ಮನೆಯಲ್ಲಿ ಅಸಮಾಧಾನ ನೆಲೆಗೊಳ್ಳುತ್ತದೆ. ಸಣ್ಣ ವಿಷ್ಯಕ್ಕೆ ಗಲಾಟೆ ಶುರುವಾಗುತ್ತದೆ. ವಿವಾಹ ಸಂಬಂಧಗಳು  ಆಹ್ಲಾದಕರವಾಗಿರುವುದಿಲ್ಲ. ಈ ಸಂದರ್ಭದಲ್ಲಿ ಪಿತೃ ದೋಷ ನಿವಾರಣೆಗೆ ಶ್ರಾದ್ಧ, ಪಿಂಡ ದಾನ, ತರ್ಪಣ ಮುಂತಾದವುಗಳನ್ನು ಮಾಡಬೇಕು. ಇದು ನಿಮ್ಮ ವೈವಾಹಿಕ ಜೀವನವನ್ನು ಬಲಗೊಳಿಸುತ್ತದೆ.

Astrology Tips : ಆರ್ಥಿಕ ಮುಗ್ಗಟ್ಟಿಗೆ ಗಣೇಶನಲ್ಲಿದೆ ಪರಿಹಾರ

ಪ್ರೇತ ದೋಷವೂ ಇದಕ್ಕೆ ಕಾರಣ : ದೆವ್ವ (Devil) , ಪಿಶಾಚಿಗಳಂತಹ ಕೆಲವು ರಾಕ್ಷಸ ಅಥವಾ ದುಷ್ಟ ಶಕ್ತಿಗಳು ಕುಟುಂಬದಲ್ಲಿ ಪ್ರಾಬಲ್ಯ ಸಾಧಿಸುತ್ತವೆ. ಈ ಶಕ್ತಿಗಳು ಮನೆಯಲ್ಲಿ ಅಪಶ್ರುತಿಯನ್ನು ಉಂಟುಮಾಡುತ್ತವೆ. ರಾಕ್ಷಸ ವಾಸದ ಜಾಗದಲ್ಲಿ ಕೆಟ್ಟ ಕಾರ್ಯ ನಡೆಯುತ್ತದೆ. ನೆಮ್ಮದಿ ಮಾಯವಾಗುತ್ತದೆ. ದಾಂಪತ್ಯ ಜೀವನ ದುಸ್ತರವಾಗುತ್ತದೆ. ಮನೆಯ ಮೇಲೆ ರಾಕ್ಷಸರ ಕಣ್ಣು ಬಿದ್ದಿದೆ ಎಂದಾದ್ರೆ  ಮನೆಯಲ್ಲಿ ರಾಮಾಯಣ, ಭಗವದ್ಗೀತೆ ಅಥವಾ ಶ್ರೀಮದ್ ಭಾಗವತವನ್ನು ಪಠಿಸಬೇಕು. ಅರ್ಹ ವಿದ್ವಾಂಸರಿಂದ ಈ ಸಮಸ್ಯೆಯನ್ನು ಸಹ ಪರಿಹರಿಸಬಹುದು.

ಪತಿ – ಪತ್ನಿ ಸಂಬಂಧ ಸುಧಾರಿಸಲು ಈ ಕೆಲಸ ಮಾಡಿ : 
ಶಿವ – ಪಾರ್ವತಿ ಫೋಟೋ : ಪತಿ – ಪತ್ನಿ ಮಧ್ಯೆ ಸಾಮರಸ್ಯವಿಲ್ಲ, ಸದಾ ಜಗಳವಾಗ್ತಿದೆ ಎಂದಾದ್ರೆ ಶಿವ – ಪಾರ್ವತಿ ಮೂರ್ತಿಯನ್ನು ಮನೆಯಲ್ಲಿ ಇಡಿ. ಪ್ರತಿ ದಿನ ಅದರ ಪೂಜೆಯನ್ನು ಮಾಡಿ. ಸುಖಿ ವೈವಾಹಿಕ ಜೀವನಕ್ಕಾಗಿ ಪ್ರಾರ್ಥನೆ ಮಾಡಿ. ಇದಲ್ಲದೆ ಮನೆಯ ಉತ್ತರ ದಿಕ್ಕಿಗೆ ವಿಷ್ಣು ಹಾಗೂ ಲಕ್ಷ್ಮಿಯ ಫೋಟೋ ಹಾಕಿ ಪೂಜೆ ಮಾಡಬೇಕು. 

ಜೋಡಿ ಗಿಳಿಯ ಫೋಟೋ : ಸಂಸಾರದಲ್ಲಿ ಸುಖ ಸಿಗ್ತಿಲ್ಲ, ನೆಮ್ಮದಿ ಇಲ್ಲ ಎನ್ನುವವರು ಮನೆಯ ಬೆಡ್ ರೂಮಿನಲ್ಲಿ ಜೋಡಿ ಗಿಳಿಯ ಫೋಟೋವನ್ನು ಹಾಕ್ಬೇಕು. ಇದ್ರಿಂದ ಪ್ರೀತಿ ಹೆಚ್ಚಾಗುತ್ತದೆ. 

ಕರ್ಪೂರದ ಉಪಾಯ ಮಾಡಿ : ಪತಿ – ಪತ್ನಿ ಮಧ್ಯೆ ಜಗಳವಾಗ್ತಿದ್ದರೆ ಕರ್ಪೂರದ ಸಹಾಯ ಪಡೆಯಬಹುದು. ಪತ್ನಿಯಾದವಳು ತನ್ನ ದಿಂಬಿನ ಕೆಳಗೆ ಕರ್ಪೂರ ಇಟ್ಟು ಮಲಗಿದ್ರೆ ಮನಸ್ತಾಪ ಕಡಿಮೆಯಾಗುತ್ತದೆ. ದಾಂಪತ್ಯ ಜೀವನದಲ್ಲಿ ಸಾಮರಸ್ಯವನ್ನು ಕಾಣಬಹುದು. 
 

click me!