Astrology Tips: ಒಂದು ರೂಪಾಯಿ ನಾಣ್ಯದಲ್ಲಿದೆ ಅದೃಷ್ಟ ಬದಲಿಸುವ ಶಕ್ತಿ

By Suvarna NewsFirst Published Jul 6, 2022, 5:25 PM IST
Highlights

ಕೈನಲ್ಲಿರೋದು ಬರೀ ಒಂದು ರೂಪಾಯಿ ನಾಣ್ಯ ಎನ್ನುತ್ತಿರುತ್ತೇವೆ. ಆದ್ರೆ ಈ ಒಂದು ರೂಪಾಯಿ ನಾಣ್ಯದಲ್ಲಿ ದೊಡ್ಡ ಶಕ್ತಿಯಿದೆ. ಕೆಲ ಉಪಾಯಗಳನ್ನು ನೀವು ಪಾಲನೆ ಮಾಡಿದ್ರೆ ನಿಮ್ಮ ಈ ನಾಣ್ಯ ನಿಮ್ಮನ್ನು ಉಪ್ಪರಿಗೆ ಮೇಲೆ ಏರಿಸುತ್ತದೆ.
 

ಪ್ರತಿಯೊಬ್ಬ ವ್ಯಕ್ತಿಯು ತನ್ನ ಕುಟುಂಬ (Family) ದಲ್ಲಿ ಸದಾ ಸಂತೋಷ (Happiness) ಮತ್ತು ಸಮೃದ್ಧಿಯಿರಲಿ ಎಂದು ಬಯಸ್ತಾನೆ. ಸಂತೋಷ ಹಾಗೂ ಸಂಪತ್ತ (Wealth) ನ್ನು ಕಾಪಾಡಿಕೊಳ್ಳಲು ಮತ್ತು ತನ್ನ ಕೆಲಸದಲ್ಲಿ ಪ್ರಗತಿಯನ್ನು ಸಾಧಿಸಲು ಶ್ರಮಿಸುತ್ತಾನೆ. ಆದರೆ ಹಲವು ಬಾರಿ ಜೀವನ (Life) ದಲ್ಲಿ ನೆಗೆಟಿವಿಟಿ ಹೆಚ್ಚಿ ಅದೃಷ್ಟ (Good Luck) ದ ಆಸರೆ ಸಿಗದೇ ಇರುವುದರಿಂದ ಮಾಡಿದ ಕೆಲಸವೂ ಕೆಡಲಾರಂಭಿಸುತ್ತದೆ. ಅಲ್ಲದೆ  ವ್ಯಕ್ತಿಯು ಹಣಕಾಸಿ (finance)ನ ಸಮಸ್ಯೆಗಳಿಂದ ಬಳಲುತ್ತಾನೆ. ಹಣದ ನಿರಂತರ ಕೊರತೆಯಿಂದಾಗಿ  ವ್ಯಕ್ತಿಗೆ ತನ್ನ ಮತ್ತು ತನ್ನ ಕುಟುಂಬದ ಅಗತ್ಯತೆಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಸಾಲ ಮಾಡುವುದು ಅನಿವಾರ್ಯವಾಗುತ್ತದೆ. ಸಾಲದ ಹೊರೆ ಹೆಚ್ಚಾದಂತೆ ಮತ್ತಷ್ಟು ಸಮಸ್ಯೆ ಹೆಚ್ಚಾಗುತ್ತದೆ. ಮನಸ್ಸಿನ ಶಾಂತಿ ಕದಡುತ್ತದೆ. ಜ್ಯೋತಿಷ್ಯ (Astrology ) ಶಾಸ್ತ್ರದಲ್ಲಿ ದುರಾದೃಷ್ಟವನ್ನು ಅದೃಷ್ಟವಾಗಿ ಪರಿವರ್ತಿಸಿಕೊಳ್ಳಲು ಉಪಾಯಗಳನ್ನು ಹೇಳಲಾಗಿದೆ. ಗ್ರಹಗಳ ಸ್ಥಾನವನ್ನು ಬಲಪಡಿಸುವ ಮೂಲಕ ಆರ್ಥಿಕ ಸಮಸ್ಯೆಗಳಿಂದ ಮುಕ್ತರಾಗುವುದು ಹೇಗೆ ಎಂಬುದನ್ನು ಹೇಳಲಾಗಿದೆ. ಕೇವಲ ಒಂದೇ ಒಂದು ರೂಪಾಯಿ ನಾಣ್ಯದಲ್ಲಿ ನಿಮ್ಮ ಜೀವನ ಅಡಗಿದೆ ಅಂದ್ರೆ ನೀವು ನಂಬ್ಲೇಬೇಕು. ಒಂದು ರೂಪಾಯಿ ನಾಣ್ಯದಿಂದ ಹೇಗೆ ಲಾಭ ಪಡೆಯಬಹುದು ಎಂಬುದನ್ನು ನಾವಿಂದು ಹೇಳ್ತೇವೆ. 

ಒಂದು ರೂಪಾಯಿಯಲ್ಲಿದೆ ಐಶ್ವರ್ಯದ ಗುಟ್ಟು :    

ಲಾಭಗಳಿಸಲು ಹೀಗೆ ಮಾಡಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೀವು ವ್ಯಾಪಾರದಲ್ಲಿ ನಿರಂತರ ನಷ್ಟವನ್ನು ಎದುರಿಸುತ್ತಿದ್ದರೆ ಮತ್ತು ಆರ್ಥಿಕ ಸಮಸ್ಯೆಗಳು ನಿಮ್ಮಿಂದ ದೂರವಾಗ್ತಿಲ್ಲ ಎನ್ನುವುದಾದ್ರೆ ಒಂದು ರೂಪಾಯಿ  ನಾಣ್ಯದ ಉಪಯೋಗ ಮಾಡಿ ಸಮಸ್ಯೆಯಿಂದ ಹೊರಬರಬಹುದು. ಒಂದು ರೂಪಾಯಿ ನಾಣ್ಯವನ್ನು ತೆಗೆದುಕೊಳ್ಳಬೇಕು. ಅದಕ್ಕೆ ಒಂದು ಹಿಡಿ ಅಕ್ಕಿಯನ್ನು ಹಾಕಿ, ಅದನ್ನು ದೇವಸ್ಥಾನದಲ್ಲಿ ದೇವರ ಮುಂದೆ ಇಡಬೇಕು. ಪೂಜೆಯ ನಂತರ  ಈ ಅಕ್ಕಿ ಮತ್ತು ಒಂದು ರೂಪಾಯಿ ನಾಣ್ಯವನ್ನು ಅಗತ್ಯವಿರುವವರಿಗೆ, ನಿರ್ಗತಿಕರಿಗೆ ದಾನ ಮಾಡಬೇಕು. ಇದ್ರಿಂದ ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುತ್ತದೆ. ನಿರಂತರ ಲಾಭ ಸಿಗುತ್ತದೆ.

ಇದನ್ನೂ ಓದಿ: ASTRO TIPS: ಈ ಜನ್ಮರಾಶಿಯವರನ್ನು ಅಪ್ಪಿತಪ್ಪಿಯೂ ವೈರಿಗಳಾಗಿ ಮಾಡಿಕೊಳ್ಳಬೇಡಿ!

ಯಶಸ್ಸಿಗೆ ಒಂದು ರೂಪಾಯಿ ಮೆಟ್ಟಿಲು : ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ನೀವು ಮತ್ತೆ ಮತ್ತೆ ಪ್ರಯತ್ನಿಸುತ್ತಿದ್ದರೂ ಯಶಸ್ಸು ಸಿಗಲು ಕಷ್ಟವಾಗ್ತಿದೆ ಎಂದಾದ್ರೆ  ಒಂದು ರೂಪಾಯಿ ಪ್ರಯೋಗ ಮಾಡಿ ನೋಡಿ. ನಿಮ್ಮ ಜೇಬಿನಲ್ಲಿ ಅಥವಾ ಪರ್ಸ್‌ನಲ್ಲಿ ನವಿಲು ಗರಿಯನ್ನು ಒಂದು ರೂಪಾಯಿಯ ನಾಣ್ಯದೊಂದಿಗೆ ಇಟ್ಟುಕೊಳ್ಳಿ. ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಪರಿಹಾರದಿಂದ ನಿಮ್ಮ ವೃತ್ತಿ ಜೀವನದಲ್ಲಿ ಬರುವ ಅಡೆತಡೆಗಳನ್ನು ತೆಗೆದುಹಾಕುವುದರ ಜೊತೆಗೆ ಪ್ರಗತಿ ನಿಮ್ಮದಾಗುತ್ತದೆ.

ಬಡತನ ದೂರ ಮಾಡುತ್ತೆ ಒಂದು ರೂಪಾಯಿ ನಾಣ್ಯ : ನೀವು ಹಣಕಾಸಿನ ತೊಂದರೆಯಿಂದ ಬಳಲುತ್ತಿದ್ದರೆ  ಪ್ರತಿದಿನ ಸಂಜೆ ನಿಮ್ಮ ಮನೆಯ ಮುಖ್ಯ ಬಾಗಿಲಲ್ಲಿ ನಾಲ್ಕು ಮುಖದ ತುಪ್ಪದ ದೀಪವನ್ನು ಬೆಳಗಿಸಬೇಕು. ಅಲ್ಲದೆ  ಈ ದೀಪಕ್ಕೆ  ಒಂದು ರೂಪಾಯಿಯ ನಾಣ್ಯವನ್ನು ಹಾಕಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಪರಿಹಾರವನ್ನು ನಿಯಮಿತವಾಗಿ ಮಾಡುವುದರಿಂದ, ಲಕ್ಷ್ಮಿ ದೇವಿಯು ಮನೆಯಲ್ಲಿ ನೆಲೆಸುತ್ತಾಳೆ ಮತ್ತು ಸಂತೋಷ ಮತ್ತು ಸಮೃದ್ಧಿ ಸದಾ ನಿಮ್ಮ ಮನೆಯಲ್ಲಿ ಉಳಿಯುತ್ತದೆ.

ಇದನ್ನೂ ಓದಿ: ಚಾಣಕ್ಯ ನೀತಿ: ಯಶಸ್ಸು ಬೇಕಂದ್ರೆ ಈ ಮಾತುಗಳನ್ನು ಮರೆಯಬೇಡಿ!

ಹಣಕಾಸಿನ ಬಿಕ್ಕಟ್ಟು ದೂರವಾಗ್ಬೇಕು ಅಂದ್ರೆ ಶುಕ್ರವಾರದಂದು ನೀವು ಕಲಶ ಪೂಜೆ ಮಾಡುವ ಮೂಲಕ ಅದೃಷ್ಟ ಪಡೆಯಬಹುದು. ಶುಕ್ರವಾರದಂದು ದೇವರ ಮನೆಯಲ್ಲಿ ನೀರು ತುಂಬಿದ ಕಲಶವನ್ನು ಇಡಬೇಕು. ನಂತರ ಕಲಶದ ಮೇಲೆ ಕುಂಕುಮದಿಂದ ಸ್ವಸ್ತಿಕ್ ಚಿತ್ರ ಬಿಡಿಸಬೇಕು.  ಕಲಶದ ನೀರಿಗೆ 1 ರೂಪಾಯಿಯ ನಾಣ್ಯವನ್ನು ಹಾಕಿ, ಕಲಶವನ್ನು ಪೂಜಿಸಬೇಕು. ಇದ್ರಿಂದ ಎಲ್ಲ ರೀತಿಯ ಸಮಸ್ಯೆ ದೂರವಾಗುತ್ತದೆ. ತಾಯಿ ಲಕ್ಷ್ಮಿ ನಿಮಗೆ ಕೃಪೆ ತೋರುತ್ತಾಳೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. 

click me!