ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಬುದ್ಧ ಹೇಳಿದ 6 ಹಂತಗಳು..

By Suvarna NewsFirst Published Mar 30, 2023, 5:14 PM IST
Highlights

ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಅಗತ್ಯ. ಏಕೆಂದರೆ ತೊಂದರೆಗೀಡಾದ ಮನಸ್ಸು ಸಾವಿರಾರು ಪ್ರಶ್ನೆಗಳಿಗೆ ನೆಲೆಯಾಗಿದೆ. ಮನಸ್ಸನ್ನು ಶಾಂತಗೊಳಿಸುವುದು ಹೇಗೆ ಎಂಬುದನ್ನು ಗೌತಮ ಬುದ್ಧನ ಈ ಕಥೆಯಿಂದ ತಿಳಿಯಿರಿ.

ಮನಸ್ಸು ತುಂಬಾ ಚಂಚಲವಾಗಿರುತ್ತದೆ. ಮನಸ್ಸಿನಲ್ಲಿ ಚಂಚಲತೆ ಇರುವವರೆಗೆ, ಮನುಷ್ಯನನ್ನು ಸಾವಿರಾರು ಪ್ರಶ್ನೆಗಳು ಸುತ್ತುವರೆದಿರುತ್ತವೆ. ಒಬ್ಬ ವ್ಯಕ್ತಿಯು ತನ್ನ ಮನಸ್ಸಿನಲ್ಲಿ ಓಡುತ್ತಿರುವ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯದ ತನಕ, ಅವನ ಮನಸ್ಸು ಚಂಚಲವಾಗಿರುತ್ತದೆ. ಆದರೆ ಮುಖ್ಯ ಪ್ರಶ್ನೆಯೆಂದರೆ ಮನಸ್ಸನ್ನು ಹೇಗೆ ನಿಯಂತ್ರಿಸುವುದು ಮತ್ತು ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?

ಗೌತಮ ಬುದ್ಧನು ಮನಸ್ಸನ್ನು ಅರಿಯುವ 6 ಹಂತಗಳ ಬಗ್ಗೆ ಹೇಳಿದ್ದಾನೆ. ಆರಂಭಿಕ 5 ಹಂತಗಳನ್ನು ತಿಳಿಯದೆ ನೀವು ಮನಸ್ಸನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಯಾವುವು ಈ ಹಂತಗಳು ನೋಡೋಣ.

ಮನಸ್ಸನ್ನು ತಿಳಿದುಕೊಳ್ಳುವುದಕ್ಕೆ ಸಂಬಂಧಿಸಿದ ಗೌತಮ ಬುದ್ಧನ ಕಥೆ
ಒಮ್ಮೆ ಒಬ್ಬ ವ್ಯಕ್ತಿ ಗೌತಮ ಬುದ್ಧನ ಬಳಿಗೆ ಹೋಗಿ, 'ಮನಸ್ಸನ್ನು ನಿಯಂತ್ರಿಸುವ ಮೊದಲ ಹೆಜ್ಜೆ ಯಾವುದು?' ಎಂದು ಕೇಳುತ್ತಾನೆ.
ಬುದ್ಧ ಹೇಳುತ್ತಾನೆ- 'ನಿಮ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಮೊದಲ ಹೆಜ್ಜೆ ಅದು ನೀಡುವ ದುರಾಸೆಯ ನಿರರ್ಥಕತೆಯನ್ನು ನೋಡುವುದು. ಏಕೆಂದರೆ ಮನಸ್ಸು ಪಕ್ಷಪಾತವಾದಾಗ ಅದು ಅನೇಕ ವಿಧವಾದ ಲೋಭವನ್ನು ನೀಡುತ್ತದೆ, ಮನಸ್ಸು ನೀಡಿದ ಈ ದುರಾಸೆಗಳನ್ನು ಗುರುತಿಸಿದವನು ಮನಸ್ಸನ್ನು ಅರ್ಥ ಮಾಡಿಕೊಂಡಿದ್ದಾನೆ ಎಂದರ್ಥ.'
ಆಗ ವ್ಯಕ್ತಿಯು ಬುದ್ಧನನ್ನು ಕೇಳುತ್ತಾನೆ, 'ಆದರೆ ನಮ್ಮ ಮನಸ್ಸು ನಮ್ಮನ್ನು ಪ್ರಚೋದಿಸುತ್ತಿದೆ ಮತ್ತು ದುರಾಸೆ ವ್ಯರ್ಥವಾಗಿದೆ ಎಂದು ನಮಗೆ ಹೇಗೆ ತಿಳಿಯುವುದು?'
ಇದಕ್ಕೆ ಉತ್ತರಿಸುತ್ತಾ ಬುದ್ಧ ಹೇಳುತ್ತಾನೆ- 'ಅನುಭವದಿಂದ.'

Ram Navami 2023: ರಾಮನ ಪರಿಪೂರ್ಣ ವ್ಯಕ್ತಿತ್ವದ 16 ಗುಣಗಳು ಯಾವೆಲ್ಲ ಯೋಚಿಸಿದ್ದೀರಾ?

ಮನುಷ್ಯನು ಮನಸ್ಸಿನ ದುರಾಸೆಯಿಂದ ಸಿಕ್ಕುವುದೆಲ್ಲವೂ ನಷ್ಟವೇ ಎಂಬುದನ್ನು ಅನುಭವದಿಂದಲೇ ಅರಿಯಬೇಕು. ಹಾಗೆ, ಅಮಲು ಕೇವಲ ದುಃಖ ಎಂದು ನಿಜವಾಗಿಯೂ ನೋಡಿದವನು, ಮಾದಕತೆಯಿಂದ ಮುಕ್ತನಾಗಲು ಪ್ರಾರಂಭಿಸುತ್ತಾನೆ. ಅಸೂಯೆ ತನ್ನನ್ನು ತಾನು ನಾಶಪಡಿಸುತ್ತದೆ ಎಂದು ಅರಿತುಕೊಂಡವನು ಅಸೂಯೆಯಿಂದ ಮುಕ್ತನಾಗುತ್ತಾನೆ. ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಇದು ಮೊದಲ ಹೆಜ್ಜೆ.

ಎರಡನೇ ಹಂತ
ವ್ಯಕ್ತಿಯು ಬುದ್ಧನನ್ನು ಕೇಳುತ್ತಾನೆ, 'ಮನಸ್ಸಿನ ಪ್ರಲೋಭನೆಗಳಿಂದ ಒಬ್ಬನು ಬಳಲುತ್ತಿದ್ದಾನೆ ಎಂದು ಮೊದಲ ಹಂತದಿಂದ ತಿಳಿದಿದ್ದರೆ, ಎರಡನೆಯ ಹಂತ ಯಾವುದು?'
ಬುದ್ಧ ಹೇಳುತ್ತಾನೆ- 'ಅನ್ವೇಷಣೆಗೆ ಹೋಗಬೇಕು'. 
'ಎರಡನೆ ಹೆಜ್ಜೆಗೆ, ತನ್ನ ಮನಸ್ಸನ್ನು ಅರಿತು ಈಗಾಗಲೇ ಅದರಿಂದ ಮುಕ್ತನಾದ ಅಂತಹ ವ್ಯಕ್ತಿಯನ್ನು ಹುಡುಕಿಕೊಂಡು ಹೋಗಬೇಕು. ಏಕೆಂದರೆ ಆತನು ಮಾತ್ರ ನಿಮಗೆ ಮಾರ್ಗದರ್ಶನ ನೀಡಬಲ್ಲನು.'

ಮೂರನೇ ಮಾರ್ಗ
ವ್ಯಕ್ತಿ ಹೇಳುತ್ತಾನೆ, 'ಆದರೆ ಅಂತಹ ವ್ಯಕ್ತಿಯನ್ನು ಹೇಗೆ ಗುರುತಿಸುವುದು?'
 ಬುದ್ಧ ಹೇಳುತ್ತಾನೆ - 'ಇದು ಮೂರನೇ ಹೆಜ್ಜೆ. ಯಾರದಾದರೂ ಮನಸ್ಸನ್ನು ಅರ್ಥ ಮಾಡಿಕೊಳ್ಳಲು 'ಆಲಿಸುವುದು' ಮೂರನೇ ಹಂತವಾಗಿದೆ. ಒಬ್ಬ ವ್ಯಕ್ತಿ ತುಂಬಾ ಶಾಂತವಾಗಿ ಮತ್ತು ನೋಡಲು ಸುಂದರವಾಗಿ ಕಾಣುತ್ತಾನೆ. ಆದರೆ ಅವನ ಮನಸ್ಸಿನೊಳಗೆ ಏನಿದೆಯೋ ಅದು ಅವನ ಮಾತಿನಿಂದ ಮಾತ್ರ ಗೊತ್ತಾಗುತ್ತದೆ. ಆದರೆ ನಿಮ್ಮ ಆತ್ಮಸಾಕ್ಷಿಯ ಪರೀಕ್ಷೆಯಲ್ಲಿ ತೇರ್ಗಡೆಯಾಗುವವರೆಗೂ ಯಾರ ಮಾತನ್ನೂ ನಂಬಬಾರದು.'

ನಾಲ್ಕನೆಯ ಹಂತ
ಬುದ್ಧ ಹೇಳುತ್ತಾನೆ, 'ಮನಸ್ಸನ್ನು ಅರ್ಥ ಮಾಡಿಕೊಳ್ಳುವ ನಾಲ್ಕನೇ ಹಂತವೇ 'ಕರ್ಮ'. ತನ್ನನ್ನು ತಾನು ತಿಳಿದುಕೊಳ್ಳಲು ಸರಿಯಾದ ದಿಕ್ಕಿನಲ್ಲಿ ಕೆಲಸ ಮಾಡುವುದು ಅವಶ್ಯಕ. ಆದರೆ ಪ್ರತಿ ಬಾರಿ ಒಬ್ಬ ವ್ಯಕ್ತಿಯು ತನ್ನ ಕೆಲಸವನ್ನು ಮಾಡುವಾಗ ಎರಡು ತಪ್ಪುಗಳನ್ನು ಮಾಡುತ್ತಾನೆ. ಮೊದಲ ತಪ್ಪು ಕೆಲಸವನ್ನು ಪ್ರಾರಂಭಿಸುವುದೇ ಇಲ್ಲ. ಪ್ರತಿ ಬಾರಿ ನಾಳೆ ಎಂಬ ನೆಪ ಹೇಳಿಕೊಳ್ಳುತ್ತಾನೆ ಮತ್ತು ಎರಡನೆಯ ತಪ್ಪು ಸರಿಯಾದ ರೀತಿಯಲ್ಲಿ ಹೋಗುವುದಿಲ್ಲ. ಈ ಎರಡೂ ತಪ್ಪುಗಳ ಹಿಂದೆ ನಮ್ಮ ‘ಮನಸ್ಸಿನ’ ಕುತಂತ್ರವಿದೆ. ಅದಕ್ಕಾಗಿಯೇ ಒಬ್ಬ ವ್ಯಕ್ತಿಯು ತನ್ನ ಕೆಲಸವನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಎಲ್ಲಕ್ಕೂ ನಾಳೆ ಎಂದು ನೆಪ ಹೇಳುವವನ ಮನಸ್ಸಿನಲ್ಲಿ ನಾನು ವಿಫಲನಾದರೆ ಎಂಬ ಭಯವಿರುತ್ತದೆ. ಇದಕ್ಕೆಮುಖ್ಯ ಕಾರಣ ಅರಿವಿನ ಕೊರತೆ. ಇದು ಇಲ್ಲದೆ, ವ್ಯಕ್ತಿಯು ಸರಿಯಾದ ದಿಕ್ಕಿನಲ್ಲಿ ನಡೆಯಲು ಮನಸ್ಸು ಅನುಮತಿಸುವುದಿಲ್ಲ.'

Thursday Special: ಈ ದಿನ ತಪ್ಪಿಯೂ ಈ ವಸ್ತುಗಳನ್ನು ದಾನ ಮಾಡಬೇಡಿ, ಬಡತನ ಬರಬಹುದು!

ಐದನೆಯ ಹಂತ
ಬುದ್ಧ ಹೇಳುತ್ತಾನೆ, 'ಮನಸ್ಸನ್ನು ತಿಳಿದುಕೊಳ್ಳುವ ಮತ್ತು ಅರ್ಥಮಾಡಿಕೊಳ್ಳುವ ಐದನೇ ಹಂತವೆಂದರೆ 'ಅರಿವು'. ಅದಕ್ಕಾಗಿಯೇ ಪ್ರತಿ ಕೆಲಸವನ್ನೂ ಜಾಗೃತಿಯಿಂದ ಮಾಡಿ. ಅರಿವಿಲ್ಲದೆ ಮಾಡಿದ ಕ್ರಿಯೆ ಸಾವಿನಂತೆ.'

ವ್ಯಕ್ತಿಯು ಬುದ್ಧನನ್ನು ಕೇಳುತ್ತಾನೆ - 'ಒಬ್ಬರ ಅರಿವಿನ ಮಟ್ಟವನ್ನು ಹೇಗೆ ಹೆಚ್ಚಿಸಬಹುದು?'

ಬುದ್ಧನು ಇದಕ್ಕೆ ‘ಧ್ಯಾನದಿಂದ’ ಎಂದುತ್ತರಿಸುತ್ತಾನೆ.

'ಮನಸ್ಸನ್ನು ತಿಳಿದುಕೊಳ್ಳಲು, ಅರ್ಥ ಮಾಡಿಕೊಳ್ಳಲು ಮತ್ತು ನಿಯಂತ್ರಿಸಲು ಧ್ಯಾನವು ಕೊನೆಯ ಹಂತವಾಗಿದೆ. ಮನಸ್ಸಿನ ನದಿಯನ್ನು ದಾಟಬಹುದಾದ ಏಕೈಕ ದೋಣಿ ಎಂದರೆ ಧ್ಯಾನ. ಈ ಆರಂಭಿಕ 5 ಹಂತಗಳ ಮೂಲಕ ಧ್ಯಾನವನ್ನು ತಿಳಿದುಕೊಂಡ ವ್ಯಕ್ತಿಯು ತನ್ನ ಸ್ವಂತ ಮನಸ್ಸನ್ನು ತಿಳಿದುಕೊಳ್ಳುತ್ತಾನೆ.'

click me!