
ಬೆಂಗಳೂರು (ಅ. 04): ಪ್ರಯಾಣಿಕರ ಗಮನಕ್ಕೆ, ಮುಂದಿನ ಬದಲಾವಣೆ, ಒಂದು ಸಣ್ಣ ಬ್ರೇಕ್ನ ನಂತರ -ಹೀಗೆ ಉದ್ದ ಮತ್ತು ಯೂನಿಕ್ ಟೈಟಲ್ಗಳ ಜತೆಗೆ ‘ಸಾರ್ವಜನಿಕರಲ್ಲಿ ವಿನಂತಿ’ ಎನ್ನುವ ಹೆಸರು ಸೇರಿಕೊಳ್ಳುತ್ತಿದೆ.
ಈ ಹೆಸರಿನಲ್ಲೊಂದು ಸಿನಿಮಾ ತಯಾರಾಗಿದ್ದು, ಇದರ ಮೋಷನ್ ಪೋಸ್ಟರ್ ಅನ್ನು ನಿರ್ದೇಶಕ ಯೋಗರಾಜ್ ಭಟ್ ಬಿಡುಗಡೆ ಮಾಡಿದ್ದಾರೆ. ಚಿತ್ರದ ನಿರ್ದೇಶಕರು ಕೃಪಾ ಸಾಗರ್. ಚಿತ್ರದ ನಾಯಕನಾಗಿ ಮದನ್ರಾಜ್, ನಾಯಕಿಯಾಗಿ ಅಮೃತಾ ಕೆ ಹಾಗೂ ರಮೇಶ್ ಪಂಡಿತ್, ಮಂಡ್ಯ ರಮೇಶ್, ನಾಗೇಶ್ ಮಯ್ಯಾ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ ನಟಿಸಿದ್ದಾರೆ.
ಅಪರಾಧಕ್ಕೆ ಕಡಿವಾಣ ಹಾಕುವ ಕತೆಯಲ್ಲಿ ಕೊಲೆಗಡುಕರು, ಕಳ್ಳತನ ಮಾಡುವವರು ಮಾತ್ರ ಕ್ರಿಮಿನಲ್ಸ್ ಆಗಿರುವುದಿಲ್ಲ. ನಮ್ಮ ಎದುರು ವಿನಯದಿಂದ ವರ್ತಿಸುತ್ತಾ, ಬೆನ್ನ ಹಿಂದೆ ಮೋಸ ಮಾಡುವವರು ನಿಜವಾದ ಅಪರಾಧಿಗಳು ಆಗಿರುತ್ತಾರೆ. ಇಂತಹವರ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕೆಂದು ಸಂದೇಶ ಹೇಳುವ ಸಿನಿಮಾ ಇದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.