
ತಮಿಳು ಚಿತ್ರರಂಗದಲ್ಲಿ ಕೆಲವು ಹಾಡುಗಳು ಕೇವಲ ಸಂಗೀತವಲ್ಲ, ಅವು ಕೇಳುಗರ ಭಾವನೆಗಳೊಂದಿಗೆ ಬೆರೆತು ಹೋಗುತ್ತವೆ. ಅಂತಹ ಒಂದು ಹಾಡು ಹುಟ್ಟಿದ ಕಥೆ ಇದು. ಅಂದು ಇಳಯರಾಜಾ ಸ್ಟುಡಿಯೋದಲ್ಲಿ ಎಲ್ಲವೂ ಸಿದ್ಧವಾಗಿತ್ತು. ಸಂಗೀತಗಾರರು ತಮ್ಮ ತಮ್ಮ ಜಾಗದಲ್ಲಿ ಕುಳಿತಿದ್ದರು. ಆದರೆ ಅವರೆಲ್ಲರೂ ಕಾಯುತ್ತಿದ್ದುದು ಮಾತ್ರ ಒಬ್ಬ ಗಾಯಕನಿಗಾಗಿ. ಆ ಗಾಯಕ ಬೇರಾರೂ ಅಲ್ಲ, ಕೆ.ಜೆ. ಯೇಸುದಾಸ್. ಆದರೆ ಸಮಯ ಕಳೆದರೂ ಯೇಸುದಾಸ್ ಬರಲೇ ಇಲ್ಲ.
'ಸಮಯ ವ್ಯರ್ಥವಾಗುತ್ತಿದೆ, ಒಂದು ಟ್ರಯಲ್ ನೋಡೋಣ' ಎಂದು ನಿರ್ಧರಿಸಿದ ಇಳಯರಾಜಾ, ತಾವೇ ಆ ಹಾಡನ್ನು ಹಾಡಿ ರೆಕಾರ್ಡ್ ಮಾಡಿದರು. ನಂತರ ಯೇಸುದಾಸ್ ಅವರಿಂದ ಫೋನ್ ಕರೆ ಬಂತು. ವೈಯಕ್ತಿಕ ಕಾರಣಗಳಿಂದ ಬರಲು ಸಾಧ್ಯವಾಗದ್ದಕ್ಕೆ ಅವರು ವಿಷಾದ ವ್ಯಕ್ತಪಡಿಸಿದರು. ಮರುದಿನ ಸ್ಟುಡಿಯೋಗೆ ಬಂದ ಯೇಸುದಾಸ್ಗೆ, ಇಳಯರಾಜಾ ಹಿಂದಿನ ದಿನ ತಾನು ಹಾಡಿದ್ದ ಟ್ರಯಲ್ ರೆಕಾರ್ಡಿಂಗ್ ಅನ್ನು ಕೊಟ್ಟರು. 'ಒಮ್ಮೆ ಕೇಳಿ ಸಿದ್ಧರಾಗಿ' ಎಂದು ಹೇಳಿ ಹೋದರು.
ಹಾಡನ್ನು ಸಂಪೂರ್ಣವಾಗಿ ಕೇಳಿದ ಯೇಸುದಾಸ್ ಅವರ ಕಣ್ಣುಗಳು ತುಂಬಿ ಬಂದವು. ಅವರು ನೇರವಾಗಿ ಇಳಯರಾಜಾ ಬಳಿ ಹೋಗಿ, 'ಈ ಹಾಡನ್ನು ಹಾಡಲು ನನಗೆ ಮನಸ್ಸು ಬರುತ್ತಿಲ್ಲ. ಈ ಭಾವನೆ, ಈ ಆಳವನ್ನು ನನ್ನಿಂದ ಕೊಡಲು ಸಾಧ್ಯವೇ ಎಂದು ಗೊತ್ತಿಲ್ಲ. ಈ ಹಾಡು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಬೇಕೆಂದರೆ, ಅದು ನಿಮ್ಮ ಧ್ವನಿಯಲ್ಲಿ ಮಾತ್ರ ಸಾಧ್ಯ' ಎಂದು ಹೇಳಿದರು. ಆದರೆ ಇಳಯರಾಜಾ ಎಷ್ಟೇ ಒತ್ತಾಯಿಸಿದರೂ ಯೇಸುದಾಸ್ ಹಾಡಲು ಒಪ್ಪಲೇ ಇಲ್ಲ.
ಇಂತಹ ಶ್ರೇಷ್ಠ ಗಾಯಕರಾಗಿದ್ದರೂ, ಒಂದು ಹಾಡು ಸರಿಯಾದ ಧ್ವನಿಯಲ್ಲಿ ಜೀವಂತವಾಗಿರಬೇಕು ಎಂಬ ಕಾರಣಕ್ಕೆ ಯೇಸುದಾಸ್ ತಮಗೆ ಬಂದ ಅವಕಾಶವನ್ನು ಇಳಯರಾಜಾಗೆ ಬಿಟ್ಟುಕೊಟ್ಟರು. ಅಂದು ಇಳಯರಾಜಾ ಅವರ ಧ್ವನಿಯಲ್ಲಿ ಜಗತ್ತಿಗೆ ಪರಿಚಯವಾದ ಆ ಹಾಡೇ 'ಜನನಿ ಜನನಿ ಜಗಂ ನೀ, ಅಗಂ ನೀ'. ಈ ಹಾಡು 1982ರಲ್ಲಿ ತೆರೆಕಂಡ 'ತಾಯ್ ಮೂಕಾಂಬಿಗೈ' ಚಿತ್ರದಲ್ಲಿತ್ತು. ಇಂದಿಗೂ ಈ ಹಾಡನ್ನು ಕಣ್ಮುಚ್ಚಿ ಕೇಳಿದರೆ ಕಣ್ಣೀರು ಬರುತ್ತದೆ. ಅಷ್ಟೊಂದು ಆತ್ಮೀಯವಾಗಿ ಇಳಯರಾಜಾ ಈ ಹಾಡನ್ನು ಹಾಡಿದ್ದಾರೆ. ಅದಕ್ಕಾಗಿಯೇ ಇದು ಮಾಸ್ಟರ್ಪೀಸ್ ಎನಿಸಿಕೊಂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.