ದರ್ಶನ್ ನಂತರ ಕಿಚ್ಚನಿಂದ ಟ್ವಿಟ್'ಗಳ ಸುರಿಮಳೆ : ಏಕೆ ಗೊತ್ತಾ ?

Published : Mar 06, 2017, 03:37 PM ISTUpdated : Apr 11, 2018, 01:04 PM IST
ದರ್ಶನ್ ನಂತರ  ಕಿಚ್ಚನಿಂದ ಟ್ವಿಟ್'ಗಳ ಸುರಿಮಳೆ : ಏಕೆ ಗೊತ್ತಾ ?

ಸಾರಾಂಶ

ಈ ಬಗ್ಗೆ ಸುದೀಪ್'ರನ್ನು ಮಾಧ್ಯಮದವರು ಪ್ರಶ್ನಿಸಿದಾಗ 'ನೋ ಕಾಮೆಂಟ್ಸ್' ಎಂದು ಉತ್ತರಿಸಿದ್ದರು.ಆದರೆ ಟ್ವಿಟರ್'ನಲ್ಲಿ ಮಾತ್ರ ಕಿಚ್ಚ ಫುಲ್ ಬ್ಯುಸಿಯಾಗಿ ಟ್ವೀಟ್'ಗಳ ಸುರಿಮಳೆಯನ್ನೇ ಹರಿಸಿದ್ದಾರೆ.

ಬೆಂಗಳೂರು(ಮಾ.06): ಸಿನಿಮಾಗೆ ಅವಕಾಶ ನೀಡಿದ್ದು ನಾನು, ದರ್ಶನ್  ಕ್ಲಾಪ್ ಬಾಯ್ ಆಗಿದ್ದರು ಎಂಬ ಸುದೀಪ್ ಅವರ ಹಳೆಯ ಸಂದರ್ಶನದ ಮಾತಿಗೆ ಕೋಪಗೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್  'ನಮ್ಮಿಬ್ಬರ ಸ್ನೇಹ ಮುಗಿದ ಕಥೆ' ಎಂದು ಟ್ವೀಟ್ ಆರಂಭಿಸಿ ಸ್ನೇಹಕ್ಕೆ ಕಂಠಕವಾದ ದೃಶ್ಯಗಳನ್ನು ಟ್ವೀಟ್ ಮಾಡಿದ್ದರು.

ಈ ಬಗ್ಗೆ ಸುದೀಪ್'ರನ್ನು ಮಾಧ್ಯಮದವರು ಪ್ರಶ್ನಿಸಿದಾಗ 'ನೋ ಕಾಮೆಂಟ್ಸ್' ಎಂದು ಉತ್ತರಿಸಿದ್ದರು.ಆದರೆ ಟ್ವಿಟರ್'ನಲ್ಲಿ ಮಾತ್ರ ಕಿಚ್ಚ ಫುಲ್ ಬ್ಯುಸಿಯಾಗಿ ಟ್ವೀಟ್'ಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಇವ್ಯಾವು ದರ್ಶನ್'ಗೆ ಸಂಬಂಧಿಸಿದ ಮಾತುಗಳಲ್ಲ. ತನ್ನ ಇತ್ತೀಚಿನ ಸಿನಿಮಾ ಹೆಬ್ಬಲಿ ಹಾಗೂ ಅಭಿಮಾನಿಗಳಿಗೆ ಕುರಿತಾದ ವಿಷಯಗಳು.

ಸುದೀಪರ ಹೆಬ್ಬುಲಿ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ರಾಜ್ಯದಾದ್ಯಂತ ಅಬ್ಬರಿಸುತ್ತಿದೆ. ಅವರು ಕೂಡ ವಿವಿಧ ಜಿಲ್ಲೆಗಳಿಗೆ ಪ್ರವಾಸ ಮಾಡುತ್ತಿದ್ದಾರೆ. ಈಗಾಗಲೇ ದಾವಣಗೆರೆ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಚಿತ್ರಮಂದಿರಗಳಿಗೆ ಭೇಟಿ ನೀಡಿ ಅಲ್ಲಿ ಹೆಬ್ಬುಲಿ ಸಿನಿಮಾಗೆ ವ್ಯಕ್ತವಾದ ಯಶಸ್ಸನ್ನು ಹಾಗೂ ಅಭಿಮಾನಿಗಳು ತಮ್ಮ ಮೇಲೆ ತೋರಿಸಿದ ಪ್ರೀತಿಯನ್ನು ಚಿತ್ರಗಳ ಸಮೇತ ಟ್ವಿಟರ್'ನಲ್ಲಿ ಹಂಚಿಕೊಂಡಿದ್ದಾರೆ.

ದರ್ಶ'ನ್'ಗೆ ಸಂಬಂಧಿಸಿದ ಯಾವುದು ಒಂದು ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಕೊಂಡಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಮನೆಗೆ ಬಂದ್ರು ರಾಶಿಕಾ, ಸೂರಜ್ ಕುಟುಂಬಸ್ಥರು; ಇಲ್ಲಿಯೂ ಮುಂದುವರಿದ ಗಿಲ್ಲಿ ತರಲೆ!
ಕಿಚ್ಚನ ವೀರಾವೇಶ ದರ್ಶನ್ ವಿರುದ್ಧ ಅಲ್ಲ, ಪೈರಸಿ ಬಗ್ಗೆ!