ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ಈ ಪವರ್ ಸ್ಟಾರ್

Published : Nov 21, 2018, 01:07 PM ISTUpdated : Nov 21, 2018, 01:08 PM IST
ಚಿತ್ರರಂಗಕ್ಕೆ  ಗುಡ್  ಬೈ ಹೇಳಿದ ಈ ಪವರ್ ಸ್ಟಾರ್

ಸಾರಾಂಶ

ಚಿತ್ರರಂಗಕ್ಕೆ ಗುಡ್ ಬೈ ಹೇಳಲು ಬಿಗ್ ಸ್ಟಾರ್ ಓರ್ವರು ತಮ್ಮ ನಿರ್ಧಾರವನ್ನು ಪ್ರಕಟ ಮಾಡಿದ್ದಾರೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ಚಿತ್ರರಂಗ ತೊರೆದು ಸಾರ್ವಜನಿಕ ಸೇವೆಗೆ ಇಳಿಯುವ ನಿರ್ಧಾರ ಮಾಡಿದ್ದಾರೆ. 

ಹೈದ್ರಾಬಾದ್ : ನಟ ಪವನ್ ಕಲ್ಯಾಣ್ ಇದೀಗ ಬಹುದೊಡ್ಡ ನಿರ್ಧಾರವೊಂದನ್ನು  ಕೈಗೊಂಡಿದ್ದಾರೆ. ತಮಿಳು ನಟ ರಜನಿಕಾಂತ್ , ಕಮಲ್ ಹಾಸನ್ ಅವರು ನಟನೆಯೊಂದಿಗೆ ರಾಜಕೀಯವಾಗಿಯೂ ಕೂಡ ಸಕ್ರೀಯವಾಗಿರುವ ಬೆನ್ನಲ್ಲೇ ಪವನ್ ಕಲ್ಯಾಣ್ ಸಂಪೂರ್ಣ ರಾಜಕೀಯ ಕ್ಷೇತ್ರಕ್ಕೆ ಕಾಲಿರಿಸುವ ತೀರ್ಮಾನ ಮಾಡಿದ್ದಾರೆ. 

ತೆಲುವು ಚಿತ್ರರಂಗದ ಪವರ್ ಸ್ಟಾರ್ ಎಂದೇ ಖ್ಯಾತರಾಗಿರುವ ಪವನ್ ಕಲ್ಯಾಣ್ ಚಿತ್ರರಂಗದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದು, ಇನ್ನು ಮುಂದೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಸಮಯವಿದು ಎಂದು ಟ್ವೀಟ್ ಮಾಡಿದ್ದಾರೆ. 

ಇನ್ನುಮುಂದೆ ಯಾವುದೇ ಚಿತ್ರಕ್ಕೆ ಸಹಿ ಮಾಡುವುದಿಲ್ಲ.  ಯಾವುದೇ ಚಿತ್ರದ ಭಾಗವಾಗುವುದಿಲ್ಲ. ಇದಕ್ಕೆ ನನಗೆ ಸಮಯವೂ ಕೂಡ ಇಲ್ಲ ಎಂದಿದ್ದಾರೆ. 

ನನ್ನ ಅಭಿಮಾನಿಗಳು ಹಾಗೂ ಜನ ಸೈನಿಕರೊಂದಿಗೆ ಇದೀಗ ಸಾರ್ವಜನಿಕ ಸೇವೆಗ ಇಳಿಯುತ್ತೇನೆ.  ನನ್ನ ಮುಂದಿನ ಪ್ರತಿಯೊಂದು ಯೋಚನೆಯೂ ಕೂಡ ಸಾರ್ವಜನಿಕ ಸೇವೆಯ ಬಗೆಯಾಗಿರುತ್ತದೆ ಎಂದು ಹೇಳಿದ್ದಾರೆ. 

ಕಳೆದ 2014ರಲ್ಲಿ ಪವನ್ ಕಲ್ಯಾಣ್ ಜನಸೇನಾ ಪಕ್ಷವನ್ನು ಸ್ಥಾಪಿಸುವ ಮೂಲಕ ನಟರಾಗಿದ್ದವರು, ರಾಜಕಾರಣಿಯೂ ಆದರು. ಅವರ ಈ ನಿರ್ಧಾರದ ಪ್ರಕಾರ ಪವನ್ ನಟಿಸಿದ ಅಜ್ಞಾತವಾಸಿ ಅವರ ಕೊನೆಯ ಚಿತ್ರವಾಗಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

25 ವರ್ಷಗಳಿಂದ ಹೊರಗಡೆ ಊಟವನ್ನೇ ಮಾಡಿಲ್ಲ... ಸಲ್ಮಾನ್ ಮಾತು ಕೇಳಿ ಬೆಚ್ಚಿಬಿದ್ದ ಬಾಲಿವುಡ್!
ತಲೈವಾ 75ನೇ ಹುಟ್ಟುಹಬ್ಬಕ್ಕೆ ಪಡೆಯಪ್ಪ ರೀ-ರಿಲೀಸ್; ಸೀಕ್ವೆಲ್ ಕಥೆಯೂ ರೆಡಿಯಾಗ್ತಿದೆ..!