
ಸಿನಿಮಾ ನಟರಿಗೆ ಯಾವ ಯಾವ ರೀತಿ ಅಭಿಮಾನಿಗಳು ಇರುತ್ತಾರೆ ಅನ್ನೊದಕ್ಕೆ ಯಮಲೂರು ವಿಷ್ಣು ಸೇನಾ ಅಧ್ಯಕ್ಷ ರಮೇಶ್ ಸಾಕ್ಷಿಯಾಗಿದ್ದಾರೆ.
ವಿಷ್ಣು ಸೇನಾ ಸಮಿತಿ ಅಧ್ಯಕ್ಷರಾಗಿದ್ದ ರಮೇಶ್ ನಿಧನರಾಗಿ ಒಂದು ವರ್ಷ ಕಳೆದಿದೆ. ಅವರ ಸಮಾಧಿ ಮೇಲೆ ಅವರ ಭಾವಚಿತ್ರದ ಜೊತೆ ವಿಷ್ಣು ದಾದನ ಭಾವಚಿತ್ರವನ್ನೂ ಹಾಕಲಾಗಿದೆ. ಕುಟುಂಬಸ್ತರು ಹೇಳುವ ಪ್ರಕಾರ ಇದು ಅವರ ಕೊನೆಯ ಆಸೆ ಆಗಿತ್ತಂತೆ.
ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ಗಳ ಹುಟ್ಟು ಹಬ್ಬದಂದು ಕೇಕ್, ಹೂ ಮಾಲೆ ತರವ ಮೂಲಕ ಪ್ರೀತಿ ತೋರಿಸುತ್ತಾರೆ. ಆದರೆ ಇಂತಹ ಅಭಿಮಾನಿಗಳು ಕೋಟಿಗೊಬ್ಬರು.
ರಮೇಶ್ ತಮ್ಮ ಕುಟುಂಬಸ್ತರ ಜೊತೆ ‘ತಾನು ಸತ್ತ ಬಳಿಕ ಸಮಾಧಿ ಮೇಲೆ ನೆಡುವ ಗುರುತಿನ ಮೇಲೆ ವಿಷ್ಣು ಅವರ ಫೋಟೋ ಇರಬೇಕು’ ಎಂದು ಹೇಳಿಕೊಂಡಿದ್ದರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.