
ಕೆಲ ಕಾಲದಿಂದ ಸಿನಿಮಾ ಮಂದಿಯ ಜಾತಕ ಹೇಳುವುದನ್ನು ನಿಲ್ಲಿಸಿದ್ದ ಜ್ಯೋತಿಷಿ ವೇಣು ಸ್ವಾಮಿ ಮತ್ತೆ ಸುದ್ದಿಯಲ್ಲಿದ್ದಾರೆ. ಪವನ್ ಕಲ್ಯಾಣ್ ಮತ್ತು ಜೂ.ಎನ್ಟಿಆರ್ ಅಭಿಮಾನಿಗಳ ನಡುವೆ ತಮ್ಮ ಹೊಸ ಭವಿಷ್ಯದ ಮೂಲಕ ಕಿಚ್ಚು ಹಚ್ಚಿದ್ದಾರೆ. ತೆಲುಗು ರಾಜ್ಯಗಳಲ್ಲಿ ರಾಜಕೀಯ ಮತ್ತು ಸಿನಿಮಾ ವಿಚಾರಗಳಿಗೆ ಎಷ್ಟು ಕ್ರೇಜ್ ಇದೆಯೋ, ಅಷ್ಟೇ ಕ್ರೇಜ್ ಸೆಲೆಬ್ರಿಟಿಗಳ ಜಾತಕದ ಬಗ್ಗೆ ಬರುವ ಸುದ್ದಿಗಳಿಗೂ ಇದೆ. ಅದರಲ್ಲೂ ಜ್ಯೋತಿಷಿ ವೇಣು ಸ್ವಾಮಿ ಹೇಳುವ ಭವಿಷ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಸದಾ ಹಾಟ್ ಟಾಪಿಕ್.
ಈ ಹಿಂದೆ ಅವರು ಹೇಳಿದ ಕೆಲವು ವಿಚಾರಗಳು ನಿಜವಾದ ಕಾರಣ, ಅವರ ಮಾತುಗಳಿಗೆ ಎಲ್ಲರಲ್ಲೂ ಒಂದು ಕುತೂಹಲ ಇದ್ದೇ ಇರುತ್ತದೆ. ಇದೀಗ ವೇಣು ಸ್ವಾಮಿ ಆಂಧ್ರ ರಾಜಕೀಯದ ಬಗ್ಗೆ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ. ಆಂಧ್ರಪ್ರದೇಶ ರಾಜಕೀಯದಲ್ಲಿ ಸದ್ಯ ಉಪಮುಖ್ಯಮಂತ್ರಿಯಾಗಿರುವ ಪವನ್ ಕಲ್ಯಾಣ್ ಅವರಿಗೆ ಭಾರೀ ಕ್ರೇಜ್ ಇದೆ. ಮುಂದಿನ ದಿನಗಳಲ್ಲಿ ಅವರೇ ಮುಖ್ಯಮಂತ್ರಿ ಆಗ್ತಾರೆ ಅಂತ ಜನಸೈನಿಕರು ಮತ್ತು ಅಭಿಮಾನಿಗಳು ನಂಬಿದ್ದಾರೆ.
ಆದರೆ, ವೇಣು ಸ್ವಾಮಿ ಇದಕ್ಕೆ ತದ್ವಿರುದ್ಧವಾದ ಭವಿಷ್ಯ ನುಡಿದಿದ್ದಾರೆ. 'ಆಂಧ್ರದ ಮುಂದಿನ ಸಿಎಂ ಪವನ್ ಕಲ್ಯಾಣ್ ಅಲ್ಲ, ಭವಿಷ್ಯದಲ್ಲಿ ಜೂ.ಎನ್ಟಿಆರ್ ಆ ಪಟ್ಟಕ್ಕೇರಲಿದ್ದಾರೆ' ಎಂದು ವೇಣು ಸ್ವಾಮಿ ಹೇಳಿದ್ದಾರೆ. ಗ್ರಹಗಳ ಅನುಕೂಲತೆ ಮತ್ತು ಜಾತಕ ಚಕ್ರದ ಪ್ರಕಾರ, ಪವನ್ ಕಲ್ಯಾಣ್ಗಿಂತ ಜೂನಿಯರ್ ಎನ್ಟಿಆರ್ಗೆ ರಾಜಕೀಯವಾಗಿ ಉನ್ನತ ಪದವಿ ಹಿಡಿಯುವ ಯೋಗ ಹೆಚ್ಚಿದೆ ಎಂದು ವೇಣು ಸ್ವಾಮಿ ವಿಶ್ಲೇಷಿಸಿದ್ದಾರೆ. ಎನ್ಟಿಆರ್ ಜಾತಕದಲ್ಲಿ ರಾಜಯೋಗ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.
ವೇಣು ಸ್ವಾಮಿ ಅವರ ಈ ಹೇಳಿಕೆ ಸಿನಿಮಾ ಮತ್ತು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪವನ್ ಕಲ್ಯಾಣ್ ಅಭಿಮಾನಿಗಳು ಈ ಭವಿಷ್ಯವನ್ನು ತಳ್ಳಿಹಾಕುತ್ತಿದ್ದರೆ, ಜೂನಿಯರ್ ಎನ್ಟಿಆರ್ ಅಭಿಮಾನಿಗಳು ಈ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಮಾಡುತ್ತಿದ್ದಾರೆ. ಕೆಲವು ಕಡೆ ಇಬ್ಬರೂ ಹೀರೋಗಳ ಫ್ಯಾನ್ಸ್ ನಡುವೆ ಮಾತಿನ ಚಕಮಕಿ ಕೂಡ ನಡೆಯುತ್ತಿದೆ. ಎನ್ಟಿಆರ್ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ, ಭವಿಷ್ಯದಲ್ಲಿ ರಾಜಕೀಯಕ್ಕೆ ಬರುವುದು ಖಚಿತ, ತಾತನಿಗೆ ತಕ್ಕ ಮೊಮ್ಮಗನಾಗಿ ಸಿಎಂ ಕುರ್ಚಿ ಏರುತ್ತಾರೆ ಎಂದು ನಂದಮೂರಿ ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಜ್ಯೋತಿಷ್ಯ ಅನ್ನೋದು ನಂಬಿಕೆ ಮೇಲೆ ನಿಂತಿದೆ. ಹಿಂದೆ ವೇಣು ಸ್ವಾಮಿ ಹೇಳಿದ ಕೆಲವು ಭವಿಷ್ಯಗಳು ತಪ್ಪಾದ ಉದಾಹರಣೆಗಳೂ ಇವೆ. ಹಾಗಾಗಿ, ಈ ಭವಿಷ್ಯ ಎಷ್ಟರಮಟ್ಟಿಗೆ ನಿಜವಾಗುತ್ತೆ, ಜೂನಿಯರ್ ಎನ್ಟಿಆರ್ ರಾಜಕೀಯಕ್ಕೆ ಬಂದು ಆ ಮಟ್ಟಕ್ಕೆ ಏರುತ್ತಾರಾ ಅನ್ನೋದನ್ನು ಕಾದು ನೋಡಬೇಕು. ಈ ಮಾತನ್ನು ಪವನ್ ಕಲ್ಯಾಣ್ ಅಭಿಮಾನಿಗಳು ಖಂಡಿಸುತ್ತಿದ್ದಾರೆ. ಮತ್ತೆ ವಿವಾದ ಸೃಷ್ಟಿಸಿರುವ ವೇಣು ಸ್ವಾಮಿ ಮೇಲೆ ಏನಾದರೂ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬುದನ್ನು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.