ಸದಾ+ಆನಂದ=ಸದಾನಂದ: ಕನ್ನಡ ವ್ಯಾಕರಣ ಪಠಿಸಿದ ಸಿದ್ದರಾಮಯ್ಯ

Published : Apr 05, 2019, 03:31 PM IST
ಸದಾ+ಆನಂದ=ಸದಾನಂದ: ಕನ್ನಡ ವ್ಯಾಕರಣ ಪಠಿಸಿದ ಸಿದ್ದರಾಮಯ್ಯ

ಸಾರಾಂಶ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇವತ್ತು ಮತ್ತೊಮ್ಮೆ ಕನ್ನಡ ವ್ಯಾಕರಣ ಟೀಚರ್ ಆಗಿದ್ದಾರೆ. ಇತ್ತೀಚೆಗಷ್ಟೇ ಶ್ರೀರಾಮುಲುಗೆ ವ್ಯಾಕರಣ ಪಾಠ ಮಾಡಿದ್ದ ಸಿದ್ದು, ಈ ಸ್ಮೈಲ್ ಗೌಡ್ರನ್ನ ವ್ಯಾಕರಣ ಮೂಲಕ ವ್ಯಂಗ್ಯವಾಡಿದ್ದಾರೆ.

ಬೆಂಗಳೂರು, [ಏ.05]: ಸದಾ+ಆನಂದ=ಸದಾನಂದ. ಇದು ಸವರ್ಣದೀರ್ಘ ಸಂಧಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕನ್ನಡ ವ್ಯಾಕರಣವನ್ನು ಪಠಿಸಿದ್ದಾರೆ. 

 ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣಬೈರೇಗೌಡ ಪರ ಪ್ರಚಾರದ ವೇಳೆ , ಬಿಜೆಪಿ ಅಭ್ಯರ್ಥಿ ಸದಾನಂದ ಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಇಂದು [ಶುಕ್ರವಾರ] ಮಲ್ಲೇಶ್ವರಂನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಬಿಜೆಪಿ ನಾಯಕರು ಸದಾನಂದಗೌಡರಿಂದ ರೈಲ್ವೇ ಮಂತ್ರಿ ಸ್ಥಾನವನ್ನ ಇದ್ದಕ್ಕಿದ್ದಂತೆ ಕಿತ್ತುಕೊಂಡೊದ್ಯಾಕೆ..?  

ಈ ಬಗ್ಗೆ ಸದಾನಂದಗೌಡರನ್ನು ಕೇಳಿದರೆ ಅದಕ್ಕೂ ನಗುತ್ತಾರೆ. ಒಂದು ವೇಳೆ ಸದಾನಂದಗೌಡ ಸಮರ್ಥರಾಗಿದಿದ್ರೆ ಆ ಹುದ್ದೆಯನ್ನು ಕಿತ್ತುಕೊಳ್ಳುತ್ತಿದ್ರಾ..? ಎಂದು ಸದಾನಂದಗೌಡರ ವಿರುದ್ಧ ವ್ಯಂಗ್ಯವಾಡಿದರು.

 ಸದಾನಂದಗೌಡ ಪುತ್ತೂರು, ಸುಳ್ಯಾದವರು. ಅರೆಭಾಷೆ ಒಕ್ಕಲಿಗರು. ಅವರೊಬ್ಬ ಅಸಮರ್ಥ ವ್ಯಕ್ತಿ. ಆದ್ರೆ ಕೃಷ್ಣ ಬೈರೇಗೌಡ ಕ್ರಿಯಾಶೀಲ ವ್ಯಕ್ತಿ ಎಂದು ಕೃಷ್ಣ ಬೈರೇಗೌಡರನ್ನು ಹಾಡಿ ಹೊಗಳಿದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!