ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಲೋಕಸಭಾ ಅಖಾಡಕ್ಕಿಳಿದ ತಂದೆ

Published : Mar 24, 2019, 04:07 PM ISTUpdated : Mar 24, 2019, 04:10 PM IST
ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಲೋಕಸಭಾ ಅಖಾಡಕ್ಕಿಳಿದ ತಂದೆ

ಸಾರಾಂಶ

ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಶಾಮನೂರು ಶಿವಶಂಕರಪ್ಪ ಲೋಕಸಭಾ ಅಖಾಡಕ್ಕಿಳಿದಿದ್ದಾರೆ. ಅರೇ....ಅದು ಹೇಗಂತೀರಾ ಮುಂದೆ ಓದಿ..

ದಾವಣಗೆರೆ, (ಮಾ.24): ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಟಿಕೆಟ್ ನೀಡಿದೆ. ಈ ಮೂಲಕ ಶಾಮನೂರು ತಮ್ಮ ಪುತ್ರನಿಗೆ ಹೊಸ ರಾಜಕೀಯ ಭವಿಷ್ಯ ನೀಡಲು ಮುಂದಾಗಿದ್ದಾರೆ. 

ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ವಿರುದ್ಧ ಸತತ ಮೂರು ಬಾರಿ ಸೋಲು ಕಂಡಿದ್ದ ಎಸ್. ಎಸ್. ಮಲ್ಲಿಕಾರ್ಜುನ್ ಈ ಬಾರಿ ಲೋಕಸಭಾ ಚುನಾವಣಾ ಕಣದಿಂದ ದೂರ ಸರಿದಿದ್ದಾರೆ. 

ದಾವಣಗೆರೆ:  ಒಂದೇ ವೇದಿಕೆಯಲ್ಲಿ ಮಾವ ಅಳಿಯ ಜಟಾಪಟಿ

ಆದರೆ ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶ್ಯಾಮನೂರು ಶಿವಶಂಕರಪ್ಪ ಚುನಾವಣಾ ಅಖಾಡಕ್ಕೆ ಧುಮುಕಿದ್ದು, ಶತಾಯಗತಾಯಾಗಿ ಈ ಬಾರಿ ಸಿದ್ದೇಶ್ವರ್ ಅವರನ್ನು ಮಣಿಸಿ ದಕ್ಷಿಣ ಕ್ಷೇತ್ರವನ್ನು ಪುತ್ರನಿಗೆ ಬಿಟ್ಟುಕೊಡಲು ಶಾಮನೂರು ಪ್ಲಾನ್ ಆಗಿದೆ.

ಈ ಹಿಂದೆ ಮೂರು ಬಾರಿ ಸಿದ್ದೇಶ್ವರ್ ಎದುರು ಮಲ್ಲಿಕಾರ್ಜುನ್ ಸೋಲು ಕಂಡಿದ್ದು, ಈ ಬಾರಿ ನಾನೊಂದು ಕೈ ನೋಡಿಯೇ ಬಿಡ್ತೀನಿ ಅಂತ ಶಾಮನೂರು ಅಖಾಡಕ್ಕಿಳಿದಿದ್ದಾರೆ.

ಒಟ್ಟಿನಲ್ಲಿ  ಈ ಬಾರಿ ಅಳಿಯ ಜಿ.ಎಂ.ಸಿದ್ಧೇಶ್ವರ್ ಹಾಗೂ ಮಾವ  ಶಾಮನೂರು ಶಿವಶಂಕರಪ್ಪ ನಡುವಿನ ಜಿದ್ದಾಜಿದ್ದಿಗೆ ದಾವಣಗೆರೆ ಲೋಕಸಭಾ ಅಖಾಡ ಸಾಕ್ಷಿಯಾಗಲಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!