'ಸದಾನಂದಗೌಡ್ರು ಮತ್ತೆ ಗೆಲ್ತಾರೆ, ಅದೇ ರೈಲ್ವೆ ಮಿನಿಸ್ಟ್ರು ಆಗ್ತಾರೆ': ಖ್ಯಾತ ಜ್ಯೋತಿಷಿ ಭವಿಷ್ಯ

By Web DeskFirst Published Apr 5, 2019, 6:21 PM IST
Highlights

ಒಂದ್ಕಡೆ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಅಭ್ಯರ್ಥಿಗಳು ದೇವರ ಮೊರೆ ಹೋಗುತ್ತಿದ್ದಾರೆ. ಅಷ್ಟೇ ಅಲ್ಲದೇ ಸೋಲು ಗೆಲುವನ್ನು ತಿಳಿಯಲು ಜ್ಯೋತಿಷಿಗಳ ಮೊರೆ ಹೋಗುತ್ತಿದ್ದಾರೆ. ಇದಕ್ಕೆ ಸದಾನಂದಗೌಡ ಹೊರತಾಗಿಲ್ಲ. ಹಾಗಾದ್ರೆ ಸ್ಮೖಲ್ ಗೌಡ್ರ ಭವಿಷ್ಯ ಹೇಗಿದೆ ನೋಡಿ..

ಬೆಂಗಳೂರು, [ಏ.05]:  ರಾಜ್ಯದಲ್ಲಿ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅದರಲ್ಲೂ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಹಾಲಿ ಸಂಸದ ಸದಾನಂದಗೌಡ ಹಾಗೂ ಮೈತ್ರಿ ಅಭ್ಯರ್ಥಿ ಕೃಷ್ಣಬೈರೇಗೌಡ ನಡುವೆ ತೀವ್ರ ಪೈಪೋಟಿ ನಡೆದಿದೆ.

 ಈ ನಡುವೆ ಸ್ಮೈಲ್ ಗೌಡ್ರು ಖ್ಯಾತ ಜೋತಿಷ್ಯ ದ್ವಾರಕನಾಥ ಗುರೂಜಿ ಮೊರೆ ಹೋಗಿದ್ದಾರೆ. ಈ ವೇಳೆ ದ್ವಾರಕನಾಥ ಗುರೂಜಿ ಅವರು ಸದಾನಂದಗೌಡರ ಭವಿಷ್ಯ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ : ಪ್ರಖ್ಯಾತ ಜ್ಯೋತಿಷಿ

'ಮತ್ತೆ ಸದಾನಂದ ಗೌಡರು ಗೆಲುವು ಸಾಧಿಸುತ್ತಾರೆ. ಪುನಃ ರೈಲ್ವೆ ಖಾತೆಯನ್ನು ವಹಿಸಿಕೊಂಡು ಕೇಂದ್ರ ಮಂತ್ರಿಗಳಾಗ್ತಾರೆ. ಇದೇ ಖಾತೆ ಅವರಿಗೆ ಸಿಗಲಿದೆ' ಎಂದು ದ್ವಾರಕನಾಥ ಗುರೂಜಿ ಭವಿಷ್ಯ ನುಡಿದಿದ್ದಾರೆ. ಇದ್ರಿಂದ ಗೌಡ್ರಿಗೆ ಮತ್ತಷ್ಟು ಖುಷಿ ತಂದಿದೆ.

2013 ರಲ್ಲೇ ಈ ಮಾತನ್ನು ಹೇಳಿದ್ದೇನೆ. ಬಿಜೆಪಿಯನ್ನು ನೋಡಿ ಜನರು ಮತ ಹಾಕುತ್ತಿಲ್ಲ. ಮೋದಿ ವರ್ಚಸ್ಸಿನ ಹಿನ್ನಲೆ ಜನರು ಮತ ಹಾಕ್ತಿದ್ದಾರೆ. ನರೇಂದ್ರ ಎಂದರೆ ಇಂದ್ರ, ದೈವಾನುಗ್ರಹದಿಂದ ಮೋದಿ ಪ್ರಧಾನಿಗಳಾಗಿದ್ದಾರೆ ಎಂದು ಭವಿಷ್ಯ ಹೇಳಿದರು.

click me!