ದೇವೇಗೌಡರ ವಂಶಕ್ಕೂ ಮಹಾಭಾರತದ ಕುಟುಂಬಕ್ಕೂ ರಾಮುಲು ನಂಟು!

By Web DeskFirst Published Apr 5, 2019, 6:05 PM IST
Highlights

ದೇವೇಗೌಡರ  ಕುಟುಂಬದ ಮೇಲೆ ಬಿಜೆಪಿ ನಾಐಕ ಬಿ. ಶ್ರೀರಾಮುಲು ವಾಗ್ದಾಳಿ ಮಾಡಿದ್ದಾರೆ. ಈ ನಡುವೆ ಮಹಾಭಾರತವನ್ನು ಎಳೆದು ತಂದಿದ್ದಾರೆ.

ಚಿತ್ರದುರ್ಗ[ಏ.05] ಜೆಡಿಎಸ್ ಕುಟುಂಬ ಧೃತರಾಷ್ಟ್ರ ವಂಶಕ್ಕಿಂತ ಹೆಚ್ಚು. ಮಹಾಭಾರತದ ಧೃತರಾಷ್ಟ್ರಕುಟುಂಬಕ್ಕಿಂತ  ಏನೂ ಕಡಿಮೆ ಇಲ್ಲ. ಒಂಬತ್ತು ಜನರನ್ನು ಸೇರಿಸಿಕೊಂಡು ಸಮಿತಿ ಮಾಡುವಂತೆ ಹತ್ತು ಜನರ ಸಂಘ ಕಟ್ಟಲಾಗಿದೆ. ಕುಟುಂಬಸ್ಥರನ್ನೇ ಸ್ಟಾರ್ ಕ್ಯಾಂಪೇನರ್ ಮಾಡ್ಕೊಂಡು ಚುನಾವಣೆ ಮಾಡ್ತಿದ್ದಾರೆ ಎಂದು ಬಿಜೆಪಿ ನಾಯಕ ಬಿ.ಶ್ರೀರಾಮುಲು ದೇವೇಗೌಡರ ಕುಟುಂಬವನ್ನು  ಕಟು ಶಬ್ದಗಳಿಂದ ಟೀಕಿಸಿದರು.

ಮೊಳಕಾಲ್ಮೂರಿನಲ್ಲಿ ಮಾತನಾಡಿ,  ಗುತ್ತಿಗೆದಾರರು ಬಿಲ್ ಗಾಗಿ ಓಡಾಡಿ ಚಪ್ಪಲಿ ಸವೆದಿವೆ. ಕಾಮಗಾರಿ ನಡೆಯುವ ಮುನ್ನವೇ ಕಮಿಷನ್ ಅಡ್ವಾನ್ ಪಡೆದಿದ್ದಾರೆ.  ಹೀಗಾಗಿ ಐಟಿ ದಾಳಿ ನಡೆಯುತ್ತಿದೆ ಎಂದು ಹೇಳಿದರು.

ಸುಮಲತಾ ಅಂಬರೀಶ್ ವಿರುದ್ಧ ಚುನಾವಣಾ ಆಯೋಗಕ್ಕೆ ಜೆಡಿಎಸ್ ​ ದೂರು​..!

ರಾಹುಲ್ ಗಾಂಧಿ ವಯನಾಡ್ ನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಅಮೇಥಿಯಲ್ಲಿ ಸೋಲಿನ ಭಯದ ಭೀತಿಯಿಂದ ವಯನಾಡ್ ನಲ್ಲಿ ನಾಮಪತ್ರ ಸಲ್ಲಿಕೆ. ಮುಸ್ಲಿಮರು ಜಾಸ್ತಿ ಇರುವ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಕೈ ಪ್ರಣಾಳಿಕೆ ಯಲ್ಲಿ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವ ಕೆಲಸ ಮಾಡಿದ್ದಾರೆ. ರಾಹುಲ್ ಎರಡು ಕ್ಷೇತ್ರಗಳಲ್ಲಿಯೂ ಸೋಲುತ್ತಾರೆ ಎಂದು ಭವಿಷ್ಯ ಹೇಳಿದರು.

ಮುಸ್ಲಿಮರು ಭಾರತೀಯರಲ್ಲ ಅಂತ ಬಿಜೆಪಿ ಭಾವಿಸಿದೆ ಎಂಬರ್ಥದಲ್ಲಿ ಸಿದ್ದರಾಮಯ್ಯ ಮಾತನಾಡಿದ್ದರು. ಬಿಜೆಪಿ ಹಿಂದೂ ಆಧಾರದ ಮೇಲೆ ನಡೆದುಕೊಂಡು ಬಂದಿದ್ದೇವೆ. ಭಾರತ ಹಿಂದೂಸ್ಥಾನ ಮಾಡಲು ಹೊರಟಿದೆ ಎಂದು ದೇವೆಗೌಡರು ಹೇಳಿದ್ದಾರೆ. ಗಾಳಿ ನೀರು ತೆಗೆದುಕೊಳ್ಳುವ ಎಲ್ಲರೂ ಭಾರತೀಯರು. ಅಂಬೇಡ್ಕರ್, ಗಾಂಧಿ ಹೇಳಿದ್ದು ಇದನ್ನೇ. ಭಾರತ್ ಮಾತಾಕಿ ಜೈ ಅನ್ನಲೇಬೇಕು. ರಾಜ್ಯದಲ್ಲಿ 24 ಹೆಚ್ಚು ಸ್ಥಾನಗಳನ್ನ ಗೆಲ್ಲುತ್ತೇವೆ ಎಂದು  ವಿಶ್ವಾಸ ವ್ಯಕ್ತಪಡಿಸಿದರು.

ಸಿಎಂ ಹಾಸನ ಮಂಡ್ಯ ಬಿಟ್ಟು ಬರುತ್ತಿದ್ದಾರೆಯೆ? ಸಿದ್ದರಾಮಯ್ಯರನ್ನ ಮೂಲೆಗುಂಪು ಮಾಡಿದ್ದಾರೆ. ಡಿಕೆಶಿ, ಕುಮಾರಸ್ವಾಮಿ ಕಳ್ಳೆತ್ತು ಗಳು. ಜೋಡೆತ್ತುಗಳು ಸರ್ಕಾರದ ಅಸ್ತಿತ್ವ ಉಳಿಸಿಕೊಳ್ಳಲು ಬಡಿದಾಡ್ತಿವೆ ಎಂದು ವ್ಯಂಗ್ಯವಾಡಿದರು.

ಮೋದಿ ಜೀ ಅಲೆ ಮುಂದೆ ಯಾರು ಸರಿ ಸಾಟಿ ಇಲ್ಲ. ಭಾರತ ಗೆದ್ದರೆ ವಿಶ್ವದ ಎಲ್ಲಾ ದೇಶಗಳು ಸಂತೋಷ ಪಡುತ್ತವೆ. ಮೋದಿ ಸೋತರೆ ಪಾಕ್ ಮಾತ್ರ ನಗುತ್ತದೆ ಎಂದು ಪಾಕಿಸ್ತಾನದ ಮೇಲೆ ಆಕ್ರೋಶ ಹೊರ ಹಾಕಿದರು.

click me!