ಒವೈಸಿ ವೋಟ್ ಕಟ್ ಮಾಡ್ತಾರೆ: ಮುಸ್ಲಿಮರನ್ನು ಎಚ್ಚರಿಸಿದ ಸಿಧು!

By Web DeskFirst Published Apr 16, 2019, 6:24 PM IST
Highlights

ಬಿಜೆಪಿಗೆ ಅನುಕೂಲ ಮಾಡಿಕೊಡಲೆಂದೇ ಬಿಹಾರದಲ್ಲಿ ಒವೈಸಿ ಪಕ್ಷ ಸ್ಪರ್ಧೆ'| ಎಐಎಂಐಎಂ ಪಕ್ಷದ ವಿರುದ್ಧ ನವಜೋತ್ ಸಿಧು ಗಂಭೀರ ಆರೋಪ| ಮುಸ್ಲಿಮರು ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕೆಂದ ಸಿಧು| ಕಾಂಗ್ರೆಸ್ ನಾಯಕನ ಹೇಳಿಕೆಗೆ ಅಸದುದ್ದೀನ್ ಒವೈಸಿ ಟಾಂಗ್| ಮತ ವಿಭಜನೆ ಕುರಿತು ಸಿಧು ಅವರಿಂದ ಪಾಠ ಕಲಿಯಬೇಕಿಲ್ಲ ಎಂದ ಒವೈಸಿ|

ಕಟಿಹಾರ್(ಏ.16): ಬಿಹಾರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಸಂಸದ ಅಸದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಪಕ್ಷವನ್ನು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಟಿಹಾರ್ ನಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಸಿಧು, ಮುಸ್ಲಿಂ ಮತ ವಿಭಜನೆ ಮಾಡಿ ಬಿಜೆಪಿಗೆ ಅನುಕೂಲ ಮಾಡಿಕೊಡಲೆಂದೇ ಒವೈಸಿ ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ ಎಂದು ಆರೋಪಿಸಿದರು.

Bihar:N Sidhu says in Katihar 'Main aapko chetavni dene aya hun Muslim bhaiyon,ye baant rahe hain apko,ye yahan Owaisi jaise logon ko la ke,ek nai party khadi kar aap logon ka vote baant ke jitna chahte hain.Agar tum log ikathe hue,ekjut hoke vote dala to Modi sulat jaega' pic.twitter.com/PQlIjm4oW2

— ANI (@ANI)

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಸೋಲಿಸಬೇಕು ಎಂದಾದರೆ ಮುಸ್ಲಿಮರು ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಸಿಧು ಮುಸ್ಲಿಂ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಇನ್ನು ಸಿಧು ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ, ಇಷ್ಟು ದಿನ ಬಿಜೆಪಿ ಪಕ್ಷದಲ್ಲಿದ್ದವರಿಂದ ಮತ ವಿಭಜನೆ ಕುರಿತು ನಾವು ಪಾಠ ಕಲಿಯಬೇಕಿಲ್ಲ ಎಂದು ಹರಿಹಾಯ್ದಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

click me!