ಟೀ, ಪಕೋಡಾ ಮಾರಲು ಹೇಳುವ ಸರ್ಕಾರ ದೇಶಕ್ಕೆ ಬೇಕಿಲ್ಲ: ಮಾಯಾವತಿ

By Web DeskFirst Published Apr 24, 2019, 8:41 AM IST
Highlights

ಟೀ, ಪಕೋಡಾ ಮಾರಲು ಹೇಳುವ ಸರ್ಕಾರ ದೇಶಕ್ಕೆ ಬೇಕಿಲ್ಲ| ಮೋದಿ ಸರ್ಕಾರದ ವಿರುದ್ಧ ಮಾಯಾವತಿ ಗರಂ

ಲಖನೌ[ಏ.24]: ಜನವಿರೋಧಿ ನೀತಿ ಹಾಗೂ ಟೀ-ಪಕೋಡಾ ಮಾರಲು ಹೇಳುವ ಸರ್ಕಾರವನ್ನು ಈ ದೇಶದ ಯುವಕರನ್ನೊಳಗೊಂಡ ಅಕ್ಷರಸ್ಥ ಜನತೆ ಬಯಸುತ್ತಿಲ್ಲ ಎಂದು ಹೇಳುವ ಮೂಲಕ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ಪ್ರಧಾನಿ ವಿರುದ್ಧ ಟ್ವಿಟರ್‌ನಲ್ಲಿ ವಾಗ್ದಾಳಿ ನಡೆಸಿರುವ ಮಾಯಾವತಿ, ‘ದೇಶದ 130 ಕೋಟಿ ಜನ, ಅದರಲ್ಲೂ ಯುವಕರು, ನಿರುದ್ಯೋಗಿಗಳು ಟೀ-ಪಕೋಡಾ ಮಾರುವ, ಜನವಿರೋಧಿ ನೀತಿಗಳನ್ನು ಅನುಸರಿಸುವ ಸರ್ಕಾರ ಬಯಸುತ್ತಿಲ್ಲ. ಇದನ್ನು ಮೋದಿ ಅರಿತುಕೊಳ್ಳಲಿ ಎಂದಿದ್ದಾರೆ.

देश की 130 करोड़ जनता व खासकर करोड़ों शिक्षित युवाओं व बेरोजगारों को ऐसी गलत सोच वाली बीजेपी सरकार कतई नहीं चाहिए जो उन्हें रोजगार देने के बजाए पकौड़े व चाय बेचने तथा चैकीदारी आदि करने के लिए मजबूर करती हो व वैसी ही घातक जनविरोधी नीति अपनाती हो।

— Mayawati (@Mayawati)

ಅಲ್ಲದೆ, ಮತದಾರರು ಇದನ್ನೆಲ್ಲ ಗಮನಿಸಿ ಹಕ್ಕು ಚಲಾಯಿಸಬೇಕು. ಎಂತಹ ಸರ್ಕಾರ ಬೇಕು ಎನ್ನುವುದನ್ನು ನಿರ್ಧರಿಸುವುದು ನಿಮ್ಮ ಹಕ್ಕು. ಯಾವ ಸರ್ಕಾರ ಇದ್ದರೆ ಉತ್ತಮ ಎನ್ನುವುದನ್ನು ಯೋಚಿಸಿ ಮತದಾನ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

click me!