ನನಗೆ ಹೈ ಕಮಾಂಡ್ ಸರ್ಪ್ರೈಸ್ ಕೊಟ್ಟಿದೆ : ಶಾಮನೂರು

By Web DeskFirst Published Mar 25, 2019, 9:33 AM IST
Highlights

ಕಾಂಗ್ರೆಸ್ ಹೈ ಕಮಾಂಡ್ ನನಗೆ ಸರ್ಪ್ರೈಸ್ ನೀಡಿದೆ ಎಂದು ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. 

ದಾವಣಗೆರೆ: ನನಗೆ ವಯಸ್ಸಾಗಿದೆ ಅಂತ ಹೇಳುತ್ತಲೇ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಘೋಷಿಸಿರುವ ಹೈಕಮಾಂಡ್ ಸರ್ಪ್ರೈಸ್ ಕೊಟ್ಟಿದೆ. 

ಕ್ಷೇತ್ರದಲ್ಲಿ ಬಿಜೆಪಿಯ ಜಿ.ಎಂ.ಸಿದ್ದೇಶ್ವರ ಅವರ ಠೇವಣಿ ಕಳೆಯುತ್ತೇನೆ ಎಂದು ಮಾಜಿ ಸಚಿವ, ದಾವಣಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಮಾಹಿತಿ ಇಲ್ಲದೆ ನನ್ನ ಹೆಸರು ಘೋಷಣೆ ಯಾಗಿದೆ. ಹಿಂದೆ ವಿಧಾನಸಭೆಗೆ ಟಿಕೆಟ್‌ಗೇ ನನಗೆ ವಯಸ್ಸಾಗಿದೆಯನ್ನುತ್ತಿದ್ದರು. ಈಗ ಅದೇ ನಾಯಕರು ಟಿಕೆಟ್ ಘೋಷಿಸಿದ್ದಾರೆ ಎಂದರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

click me!