'ರೇವಣ್ಣ ಕೊಳೆತ ನಿಂಬೆ ಹಣ್ಣು'

Published : Apr 22, 2019, 10:11 AM ISTUpdated : Apr 22, 2019, 03:08 PM IST
'ರೇವಣ್ಣ ಕೊಳೆತ ನಿಂಬೆ ಹಣ್ಣು'

ಸಾರಾಂಶ

ರೇವಣ್ಣ ಕೊಳೆತ ನಿಂಬೆ ಹಣ್ಣು, ಅವರ ಬಗ್ಗೆ ಏನು ಅಂತ ಹೇಳಲಿ? ಬಿಜೆಪಿ ನಾಯಕನ

ದಾವ​ಣ​ಗೆರೆ[ಏ.22]: ಸಚಿವ ಎಚ್‌.ಡಿ. ರೇವಣ್ಣ ಕೊಳೆತ ನಿಂಬೆ​ ಹ​ಣ್ಣಿನಂತೆ. ಅವರ ಬಗ್ಗೆ ಏನಂತ ಹೇಳಲಿ ಎಂದು ಶಾಸಕ ಕೆ.ಎ​ಸ್‌.​ ಈ​ಶ್ವ​ರಪ್ಪ ವ್ಯಂಗ್ಯ​ವಾ​ಡಿ​ದರು.

ಶಿವ​ಮೊಗ್ಗ ಕ್ಷೇತ್ರದಲ್ಲಿ ಬಿ.ವೈ.​ರಾ​ಘ​ವೇಂದ್ರರನ್ನು ಈಶ್ವ​ರಪ್ಪ ಸೋಲಿ​ಸು​ತ್ತಾ​ರೆಂಬ ಸಚಿವ ಎಚ್‌.​ಡಿ.​ರೇ​ವಣ್ಣ ಹೇಳಿಕೆಗೆ ಪ್ರತಿ​ಕ್ರಿ​ಯಿ​ಸಿದ ಈಶ್ವ​ರಪ್ಪ, ಪಕ್ಷ​ವನ್ನು ತಾಯಿ ಅನ್ನು​ವ​ವರು ನಾವು. ತಾಯಿಗೆ ದ್ರೋಹ ಮಾಡುವ ಕೆಲಸವನ್ನು ನಾವು ಮಾಡು​ವ​ವ​ರಲ್ಲ. ಇನ್ನು ಪಕ್ಷವು ಸೋಲು​ತ್ತ​ದೆಂಬ ಚಿಂತನೆ ಮಾಡು​ವು​ದಕ್ಕೂ ಸಾಧ್ಯ​ವಿಲ್ಲ ಎಂದರು.

ಟಿಕೆಟ್‌ ಸಿಗದೆ ನಮ್ಮ ಜೊತೆ ಈಶ್ವರಪ್ಪ ಮಾತುಕತೆಗೆ ಬಂದಿದ್ದರು ಎಂಬ ರೇವಣ್ಣ ಹೇಳಿಕೆಗೆ ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಅವರು ಇನ್ನೊಮ್ಮೆ ಈ ರೀತಿ ಮಾತನಾಡಿದರೆ ನಾನು ಬೇರೆಯದೇ ಭಾಷೆ ಬಳಸಬೇಕಾಗುತ್ತದೆ ಎಂದರು. ಶಿವ​ಮೊ​ಗ್ಗ​ದಲ್ಲಿ ರಾಘ​ವೇಂದ್ರ ಗೆದ್ದ ನಂತರ ಇದೇ ನಿಂಬೆ​ಹ​ಣ್ಣಿನ ರೇವಣ್ಣ ಬಳಿ ಕರೆ​ದೊಯ್ದು ನಿಲ್ಲಿ​ಸು​ತ್ತೇವೆ. ಆಗ ರೇವಣ್ಣ ಮಾತ​ನಾ​ಡಲಿ ಎಂದರು.

ಟಿಕೆಟ್ ಗಾಗಿ ಈಶ್ವರಪ್ಪ ಸಂಪರ್ಕಿಸಿದ್ದರು, ಆದರೆ...!: ರೇವಣ್ಣ ಹೇಳಿದ ಸೀಕ್ರೆಟ್ ಏನು?

ಮೈತ್ರಿ ಧರ್ಮದ ಅರ್ಥವೇ ಗೊತ್ತಿ​ಲ್ಲದ ರೇವಣ್ಣನಿಗೆ ಪಕ್ಷದ ಬಗ್ಗೆ ಏನು ಗೊತ್ತು? ಮೈತ್ರಿ ಅಂತಾ ಹೆಸ​ರಿಗೆ ಅವ​ಮಾನಿಸುವಂತೆ ಕಾಂಗ್ರೆ​ಸ್‌-ಜೆಡಿ​ಎಸ್‌ ನಾಯ​ಕರ ವರ್ತನೆ ಇದೆ. ಆದರೆ, ಬಿಜೆಪಿಯನ್ನು ಗೆಲ್ಲಿ​ಸಲು ಪ್ರಾಮಾ​ಣಿ​ಕ​ವಾಗಿ ಶ್ರಮಿ​ಸು​ತ್ತಾ​ರೆ​ಯೇ ಹೊರತು ವ್ಯಕ್ತಿ​ಯನ್ನು ಗೆಲ್ಲಿ​ಸು​ವು​ದ​ಕ್ಕಲ್ಲ. ಈ ಹಿಂದೆ ಡಿ.ಕೆ. ಶಿವಕುಮಾರ್‌ ಅವರು ರೇವಣ್ಣ ಅವರನ್ನು ಸೋಲಿಸಿದರು. ಅದರ ಅನುಭವ ಅವರಿಗಿದೆ. ಈ ಅನುಭವವನ್ನು ನಮ್ಮ ಮೇಲೆ ಹೇರಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.

ಡಿಕೆಶಿ ಅಲ್ಲ, ಕೇಡಿ ಶಿವಕುಮಾರ್: ಈಶ್ವರಪ್ಪ ವ್ಯಂಗ್ಯ

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!