
ಅಹಮದಾಬಾದ್(ಏ.23): ನನಗೆ ಕಾವಲುಗಾರ ಬಾಕಾದರೆ ನೇಪಾಳಕ್ಕೆ ಹೋಗುತ್ತೇನೆ ಹೊರತು ಭಾರತದ ಪ್ರಧಾನಿ ಬಳಿ ಅಲ್ಲ ಎಂದು ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಹಾರ್ದಿಕ್ ಪಟೇಲ್, ಮೋದಿ ಕಾವಲುಗಾರರಾಗಲು ಬಯಿಸಿದರೆ ಬೇಕಾದರೆ ನೇಪಾಳಕ್ಕೆ ಹೋಗಲಿ ಎಂದು ವ್ಯಂಗ್ಯವಾಡಿದ್ದಾರೆ.
ಈ ಹಿಂದೆ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಕೂಡ ಇಂತದ್ದೇ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.