ಲೋಕಸಭಾ ಚುನಾವಣೆಗೆ ಅಖಿಲ ಭಾರತ ಕಾಂಗ್ರೆಸ್ ತನ್ನಅಭ್ಯರ್ಥಿಗಳ 8ನೇ ಪಟ್ಟಿ ರಿಲೀಸ್ | ಇದರಲ್ಲಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಕಾಂಗ್ರೆಸ್.
ನವದೆಹಲಿ/ಬೆಂಗಳೂರು, (ಮಾ.23): 17ನೇ ಲೋಕಸಭಾ ಚುನಾವಣೆಗೆ ಅಖಿಲ ಭಾರತ ಕಾಂಗ್ರೆಸ್ ತನ್ನಅಭ್ಯರ್ಥಿಗಳ 8ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕರ್ನಾಟಕದ 28 ಕ್ಷೇತ್ರಗಳಿಗೆ ಸಂಬಂಧಿಸಿದಂತೆ 8 ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದು, ತನ್ನ ಪಾಲಿನ 20 ಕ್ಷೇತ್ರಗಳ ಪೈಕಿ ಒಟ್ಟು 18 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದೆ.
ಕರ್ನಾಟಕ ಬಿಜೆಪಿಯ 2ನೇ ಪಟ್ಟಿ ರಿಲೀಸ್, ಮಂಡ್ಯದಲ್ಲಿ ಸುಮಲತಾಗೆ ಬೆಂಬಲ
AICC President has approved the list of the following candidates from to contest for
Wishing all the candidates best wishes. pic.twitter.com/vM2mtcwbGe
ಬೆಂಗಳೂರು ದಕ್ಷಿಣ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಯ ಹೆಸರನ್ನು ಕಾಂಗ್ರೆಸ್ ಘೋಷಿಸಿಲ್ಲ. ಇನ್ನು ಘೋಷಿತ ಅಭ್ಯರ್ಥಿಗಳ ವಿವರ ಈ ಕೆಳಗಿನಂತಿದೆ.
1.ಚಿಕ್ಕೋಡಿ- ಪ್ರಕಾಶ್ ಹುಕ್ಕೇರಿ
2.ಬೆಳಗಾವಿ-ವಿರೂಪಾಕ್ಷಿ ಎಸ್. ಸಧುಣ್ಣನವರ್.
3. ಬಾಗಲಕೋಟೆ-ವೀಣಾ ಕಾಶೆಪ್ಪನವರ್.
4. ಕಲಬುರಗಿ- ಮಲ್ಲಿಕಾರ್ಜುನ ಖರ್ಗೆ.
5.ರಾಯಚೂರು-ಬಿ.ವಿ.ನಾಯಕ್.
6.ಬೀದರ್-ಈಶ್ವರ್ ಖಂಡ್ರೆ.
7.ಕೊಪ್ಪಳ-ರಾಜಶೇಖರ್ ಹಿಟ್ನಾಳ್
8. ಬಳ್ಳಾರಿ-ವಿ.ಎಸ್.ಉಗ್ರಪ್ಪ
9.ಹಾವೇರಿ- ಡಿ.ಆರ್.ಪಾಟೀಲ್.
10.ದಾವಣಗೆರೆ-ಶಾಮನೂರು ಶಿವಶಂಕ್ರಪ್ಪ.
11.ದಕ್ಷಿಣ ಕನ್ನಡ- ಮಿಥುನ್ ರೈ.
12.ಚಿತ್ರದುರ್ಗ-ಬಿ.ಎನ್.ಚಂದ್ರಪ್ಪ
13.ಮೈಸೂರು-ವಿಜಯ್ ಶಂಕರ್
14.ಚಾಮರಾಜನಗರ-ಧೃವನಾರಾಯಣ
15. ಬೆಂಗಳೂರು ಗ್ರಾಮಾಂತರ-ಡಿ.ಕೆ.ಸುರೇಶ್
16.ಬೆಂಗಳೂರು ಕೇಂದ್ರ- ರಿಜ್ವಾನ್ ಹರ್ಷದ್.
17. ಚಿಕ್ಕಬಳ್ಳಾಪುರ-ಎಂ.ವೀರಪ್ಪಮೋಯಿಲಿ.
18. ಕೋಲಾರ-ಕೆ.ಎಚ್.ಮುನಿಯಪ್ಪ
ಜೆಡಿಎಸ್ ಪಾಲಿನ 8 ಕ್ಷೇತ್ರಗಳನ್ನು ನೋಡುವುದಾದರೆ
1.ಹಾಸನ- ಪ್ರಜ್ವಲ್ ರೇವಣ್ಣ
2. ಮಂಡ್ಯ-ನಿಖಿಲ್ ಕುಮಾರಸ್ವಾಮಿ
3.ತುಮಕೂರು-ಎಚ್.ಡಿ.ದೇವೇಗೌಡ.
4.ಬೆಂಗಳೂರು ಉತ್ತರ- ಅಭ್ಯರ್ಥಿ ಹೆಸರು ಪ್ರಕಟವಾಗಿಲ್ಲ
5. ಉಡುಪಿ-ಚಿಕ್ಕಮಗಳೂರು-ಕಾಂಗ್ರೆಸ್ ನ ಪ್ರಮೋದ್ ಮಧ್ವರಾಜ್ ಜೆಡಿಎಸ್ ನಿಂದ ಸ್ಪರ್ಧೆ
6.ವಿಜಯಪುರ-ಪ್ರಕಟವಾಗಿಲ್ಲ
8.ಉತ್ತರ ಕನ್ನಡ- ಪ್ರಕಟವಾಗಿಲ್ಲ.