
ಬುಲಂದ್ಶಹರ್[ಏ.19]: ಮಾಯಾವತಿ ನೇತೃತ್ವದ ಬಿಎಸ್ಪಿ ಅಭ್ಯರ್ಥಿಗೆ ಮತ ಹಾಕುವ ಬದಲಿಗೆ ಅಚಾತುರ್ಯವಾಗಿ ಬಿಜೆಪಿಗೆ ಮತ ಹಾಕಿದ್ದಕ್ಕೆ ಬೇಸರಗೊಂಡ ದಲಿತ ಯುವಕನೋರ್ವ ತನ್ನ ಕೈ ಬೆರಳನ್ನೇ ಕತ್ತರಿಸಿಕೊಂಡ ದುರ್ಘಟನೆ ಬುಲಂದ್ಶಹರ್ನಲ್ಲಿ ನಡೆದಿದೆ.
ಬಿಜೆಪಿಯ ಹಾಲಿ ಸಂಸದ ಭೋಲಾ ಸಿಂಗ್ ಹಾಗೂ ಬಿಎಸ್ಪಿ-ಎಸ್ಪಿ-ಆರ್ ಎಲ್ಡಿ ಮೈತ್ರಿ ಅಭ್ಯರ್ಥಿ ಯೋಗೇಶ್ ವರ್ಮಾ ಅವರು ಕಣದಲ್ಲಿದ್ದಾರೆ. ಇಲ್ಲಿನ ಗ್ರಾಮದ ಬಿಎಸ್ಪಿಯ ಕಟ್ಟಾ ಬೆಂಬಲಿಗ ಪವನ್ ಕುಮಾರ್[25] ಎಂಬ ಯುವಕ ಬಿಎಸ್ಪಿಗೆ ಮತ ಹಾಕಲು ಹೋಗಿದ್ದ. ಆದರೆ, ಅಚಾತುರ್ಯವಾಗಿ ಬಿಜೆಪಿಗೆ ಮತ ಹಾಕಿದ್ದ. ಇದರಿಂದ ಬೇಸರಗೊಂಡ ಯುವಕ ತನ್ನ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ.
ಬಳಿಕ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾನೆ.