ಈಶಾನ್ಯ ಗೆದ್ದುಕೊಟ್ಟ ಬಿಸ್ವಾಗೆ ಬಿಜೆಪಿಯಿಂದ ಸಿಕ್ತು ಬಹುದೊಡ್ಡ 'ಆಫರ್'!

Published : Mar 17, 2019, 01:14 PM IST
ಈಶಾನ್ಯ ಗೆದ್ದುಕೊಟ್ಟ ಬಿಸ್ವಾಗೆ ಬಿಜೆಪಿಯಿಂದ ಸಿಕ್ತು ಬಹುದೊಡ್ಡ 'ಆಫರ್'!

ಸಾರಾಂಶ

ಅಸ್ಸಾಂ ರಾಜ್ಯದಲ್ಲಿ ಬಿಜೆಪಿ ಸಾಮ್ರಾಜ್ಯ ಸ್ಥಾಪಿಸಿದ ಸಚಿವ ಹಿಮಂತಾ ಬಿಸ್ವಾ ಶರ್ಮಾ| ಲೋಕಸಭಾ ಚುನಾವಣೆಗೆ ಬಿಜೆಪಿ ಕೊಡ್ತು ಬಹುಮಾನ!

ಗುವಾಹಟಿ[ಮಾ.17]: ಈಶಾನ್ಯ ಭಾರತ ಹಾಗೂ ವಿಶೇಷವಾಗಿ ಅಸ್ಸಾಂ ರಾಜ್ಯದಲ್ಲಿ ಬಿಜೆಪಿ ಬೇರು ಬಿಡಲು ಕಾರಣೀಭೂತರಾದ ಅಸ್ಸಾಂ ಸಚಿವ ಹಿಮಂತಾ ಬಿಸ್ವಾ ಶರ್ಮಾ ಅವರಿಗೆ ತಮ್ಮಿಷ್ಟದ ದೇಶದ ಯಾವುದೇ ಕ್ಷೇತ್ರದಲ್ಲಿ ಚುನಾವಣಾ ಅಖಾಡಕ್ಕಿಳಿಯುವಂತೆ ಬಿಜೆಪಿ ಆಫರ್‌ ನೀಡಿದೆ.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ರಂಜೀತ್‌ ದಾಸ್‌ ಅವರು, ‘2019ರ ಲೋಕಸಭಾ ಚುನಾವಣೆಯಲ್ಲಿ ಸಚಿವ ಹಿಮಂತಾ ಬಿಸ್ವಾ ಶರ್ಮಾ ಅವರಿಗೆ ದೇಶದ ಯಾವುದೇ ಕ್ಷೇತ್ರದಿಂದಲೂ ಕಣಕ್ಕಿಳಿಯುವಂತೆ ಬಿಜೆಪಿ ಹೈಕಮಾಂಡ್‌ ನನಗೆ ಸೂಚಿಸಿದೆ. ಈ ಸಂದರ್ಭದಲ್ಲಿ ಇದೊಂದು ಒಳ್ಳೇಯ ನಿರ್ಧಾರ. ಆದರೆ, ಬಿಸ್ವಾ ಅವರಿಗೆ ಅಸ್ಸಾಂನಿಂದಲೇ ಟಿಕೆಟ್‌ ನೀಡುವಂತೆ ಕೇಳಿಕೊಂಡಿದ್ದೇನೆ,’ ಎಂದರು.

ಏತನ್ಮಧ್ಯೆ, ಬಿಸ್ವಾ ಅವರು ತೇಜ್‌ಪುರ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ. ಆದಾಗ್ಯೂ, ಬಿಜೆಪಿ ರಾಷ್ಟಾ್ರಧ್ಯಕ್ಷ ಅಮಿತ್‌ ಶಾ ಅವರಿಂದ ಘೋಷಣೆಯಾಗುವುದಷ್ಟೇ ಬಾಕಿಯಿದೆ ಎಂದು ಮೂಲಗಳು ತಿಳಿಸಿವೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!