ಕಾಂಗ್ರೆಸ್‌ಗೆ ಕೈ ಕೊಟ್ಟ ಅಂಬೇಡ್ಕರ್ ಮೊಮ್ಮಗ!

Published : Mar 13, 2019, 09:20 AM IST
ಕಾಂಗ್ರೆಸ್‌ಗೆ ಕೈ ಕೊಟ್ಟ ಅಂಬೇಡ್ಕರ್ ಮೊಮ್ಮಗ!

ಸಾರಾಂಶ

ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್ ಒಂದರ ಮೇಲೊಂದು ಆಘಾತ| ಕಾಂಗ್ರೆಸ್ ಗೆ ಕೈಕೊಟ್ಟ ದಲಿತ ನಾಯಕ ಪ್ರಕಾಶ್ ಅಂಬೇಡ್ಕರ್

ಮುಂಬೈ[ಮಾ.13]: ಡಾ| ಬಿ.ಆರ್. ಅಂಬೇಡ್ಕರರ ಮೊಮ್ಮಗ, ದಲಿತ ನಾಯಕ ಪ್ರಕಾಶ್ ಅಂಬೇಡ್ಕರ್ ಅವರು ತಮ್ಮ ರಾಜಕೀಯ ರಂಗ ‘ವಂಚಿತ ಬಹುಜನ ಅಘಾಡಿ’ ಎಲ್ಲ 48 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತೀರ್ಮಾನಿಸಿದೆ. ಅಂಬೇಡ್ಕರ್ ಅವರ ಈ ತೀರ್ಮಾನದಿಂದ ಎನ್‌ಸಿಪಿ+ಕಾಂಗ್ರೆಸ್ ಮೈತ್ರಿಕೂಟಕ್ಕೆ ಹಿನ್ನಡೆ ಉಂಟು ಮಾಡಿದೆ.

ಅಕೋಲಾ ಜಿಲ್ಲೆಯಲ್ಲಿ ಈ ಘೋಷಣೆ ಮಾಡಿದ ಅಂಬೇಡ್ಕರ್, ‘ಕಾಂಗ್ರೆಸ್ ನೇತೃತ್ವದ ಬಿಜೆಪಿ ವಿರೋಧಿ ರಂಗ ಸೇರುವ ಬಗ್ಗೆ ಇನ್ನು ಯಾವುದೇ ಮಾತುಕತೆ ನಡೆಸುವುದಿಲ್ಲ. ಈ ಮುನ್ನ ನಡೆಸಿದ ಮಾತುಕತೆಗಳೆಲ್ಲ ವಿಫಲವಾಗಿವೆ’ ಎಂದರು.

‘ನಾವು ಈಗಾಗಲೇ 22 ಕ್ಷೇತ್ರಗಳ ಅಭ್ಯರ್ಥಿ ಘೋಷಿಸಿದ್ದೇವೆ. ಉಳಿದ ಹೆಸರುಗಳನ್ನು ಶೀಘ್ರ ಘೋಷಿಸಲಿದ್ದೇವೆ. ಎಲ್ಲ 48 ಕ್ಷೇತ್ರಗಳಿಗೆ ನಾವು ಸ್ಪರ್ಧಿಸುತ್ತೇವೆ’ ಎಂದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!