Project Zimadari: ಕಣಿವೆ ರಾಜ್ಯದ ಶಿಕ್ಷಣದಲ್ಲಿ ಕ್ರಾಂತಿ ಸೃಷ್ಟಿಸಿದ ಜಿಮಾದಾರಿ ಕಾರ್ಯಕ್ರಮ!

Published : Nov 26, 2022, 12:09 PM ISTUpdated : Nov 26, 2022, 12:10 PM IST
Project Zimadari: ಕಣಿವೆ ರಾಜ್ಯದ ಶಿಕ್ಷಣದಲ್ಲಿ ಕ್ರಾಂತಿ ಸೃಷ್ಟಿಸಿದ ಜಿಮಾದಾರಿ ಕಾರ್ಯಕ್ರಮ!

ಸಾರಾಂಶ

ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಹೊಸಕ್ರಾಂತಿಯನ್ನು ಸೃಷ್ಟಿಸಿದ್ದಾರೆ ಜಿಲ್ಲಾಧಿಕಾರಿ,  ಶಾಲಾ ವ್ಯವಸ್ಥೆಯ ಒಟ್ಟಾರೆ ನೋಟವನ್ನು ಬದಲಾಯಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ,  ಶಾಲೆಗಳನ್ನು ವಿವಿಧ ಕೆಟಗರಿಗಳಲ್ಲಿ ವಿಂಗಡಿಸಿ ಅವುಗಳ ಪ್ರಗತಿಯನ್ನು ಪರಿಶೀಲನೆ ಮಾಡಲಾಗುತ್ತದೆ

ಜಮ್ಮು-ಕಾಶ್ಮೀರದ (Jammu and Kashmir) ಕುಪ್ವಾರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಶಿಕ್ಷಣ ವಲಯದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದ್ದಾರೆ. ಒಂದು ತಿಂಗಳ ಹಿಂದಷ್ಟೇ ಜಿಲ್ಲಾಧಿಕಾರಿ ಕುಪ್ವಾರಾ ಡೊಯ್ಫೊಡೆ ಸಾಗರ್ ದತ್ತಾತ್ರೇಯ್ (Doifode Sagar Dattatray) ಅವರು ಪ್ರಾರಂಭಿಸಿರುವ 'ಜಿಮಾದಾರಿ' (Zimadari) ಕಾರ್ಯಕ್ರಮವು ಬಹಳ ಜನಪ್ರಿಯವಾಗಿದೆ. ಜಿಲ್ಲೆಯ ಶಾಲಾ ಶಿಕ್ಷಣ ವ್ಯವಸ್ಥೆಯ ಒಟ್ಟಾರೆ ನೋಟದಲ್ಲಿ ಬದಲಾವಣೆ ತರಲು ವಿಶಿಷ್ಟವಾದ ಮತ್ತು ಇದೇ ರೀತಿಯ ಮೊದಲ ಜಿಮಾದಾರಿ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ಈ ಕಾರ್ಯಕ್ರಮ ಜಿಲ್ಲೆಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕ್ರಾಂತಿಯನ್ನುಂಟು ಮಾಡಿದ್ದು, ಭಾರೀ ಚರ್ಚೆಯಾಗ್ತಿದೆ. ಒಂದು ತಿಂಗಳ ಹಿಂದೆ ಡಿಸಿ ಡೊಯಿಫೋಡ್ ಸಾಗರ್ ದತ್ತಾತ್ರೇಯ್ ತಮ್ಮ ಕಚೇರಿ ಕುಪ್ವಾರದಲ್ಲಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳ ಸಭೆ ಕರೆದು, ಈ ಕಾರ್ಯಕ್ರಮದ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿದ್ರು. ತಮ್ಮ ವಿನೂತನ 'ಜಿಮಾದಾರಿ' ಕಾರ್ಯಕ್ರಮದ ಎಲ್ಲಾ ದೃಷ್ಟಿಕೋನಗಳು ಮತ್ತು ಸೂಚಕಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರು. ಇದರ ಬಗ್ಗೆ ಹೆಚ್ಚಿನ ಜ್ಞಾನವನ್ನು ಸಂಗ್ರಹಿಸಲು ಸೂಚನೆ ನೀಡಿದ್ರು. 

ಈ ಜಿಮಾದಾರಿ ಕಾರ್ಯಕ್ರಮವು ನೀತಿ ಆಯೋಗದ ವೈಜ್ಞಾನಿಕವಾಗಿ ರೂಪಿಸಿದ ಕಾರ್ಯಕ್ರಮವಾಗಿದೆ. ಇದು ಜಿಲ್ಲೆಯ ಶಾಲಾ ವ್ಯವಸ್ಥೆಯ ಒಟ್ಟಾರೆ ನೋಟವನ್ನು ಬದಲಾಯಿಸುವ ಉದ್ದೇಶ ಹೊಂದಿದ್ದು,  ಶಾಲಾ ಹಂತದಲ್ಲಿ ಆಡಳಿತ ಮತ್ತು ಅನುಷ್ಠಾನ ಪಡೆಗಳ ನಡುವೆ ಸೇತುವೆಯಾಗಿ ಕೆಲಸ ಮಾಡುವಂತೆ ಡಿಸಿ, ಅಧಿಕಾರಿಗಳಿಗೆ ಸೂಚಿಸಿದ್ರು. ಈ ಕಾರ್ಯಕ್ರಮವು ಜ್ಞಾನ ವರ್ಗಾವಣೆಯ ಯೋಜನೆಯಾಗಿದೆ. ಹಾಗಾಗಿ ಇದನ್ನು ಹೆಚ್ಚು ಅರ್ಥಮಾಡಿಕೊಂಡಷ್ಟೂ ಕ್ಷೇತ್ರದಲ್ಲಿ ಹೆಚ್ಚಿನದನ್ನು ನೀಡಬಹುದು ಅನ್ನೋದು ಡಿಸಿ ಅವರ ಅಭಿಪ್ರಾಯವಾಗಿತ್ತು. 

ಇದನ್ನೂ ಓದಿ: ತಮಿಳುನಾಡಿನಲ್ಲಿ ಅಧ್ಯಾಪಕರಿಗೂ ಡ್ರೆಸ್ ಕೋಡ್!

ಅಧಿಕಾರಿಗಳು ಮತ್ತು ಶಿಕ್ಷಕರು ಯಾವಾಗಲೂ ರಾಷ್ಟ್ರದ ಜ್ಯೋತಿ ವಾಹಕರಾಗಿ ಕಾರ್ಯನಿರ್ವಹಿಸುವುದರಿಂದ, ಈ ಯೋಜನೆಯನ್ನ ಸವಾಲಾಗಿ ತೆಗೆದುಕೊಂಡ್ರು. ಜಿಲ್ಲಾಧಿಕಾರಿಗಳ ನಿರ್ದೇಶನಗಳನ್ನು ಅನುಸರಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ರು. ಇದರ ಪರಿಣಾಮವಾಗಿ ಇದೀಗ, ಅಂದರೆ 30 ದಿನಗಳ ಅಂತರದಲ್ಲಿ ಶಿಕ್ಷಣ ಸಂಸ್ಥೆಗಳು ಜಿಲ್ಲೆಯಲ್ಲಿ ಹೊಸ ರೂಪ ನೀಡುತ್ತಿವೆ. ಶೈಕ್ಷಣಿಕ, ಮೂಲಭೂತ ಸೌಕರ್ಯ, ಪಠ್ಯೇತರ, ಸಹಪಠ್ಯ, ಸಾಮಾಜಿಕ ಭಾವನಾತ್ಮಕ ಕಲಿಕೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸೇರಿದಂತೆ ಯೋಜನೆಯ 6 ವಿಷಯಾಧಾರಿತ ಕ್ಷೇತ್ರಗಳನ್ನು ಒಳಗೊಂಡಿರುವ ಎಲ್ಲಾ 85 ಸೂಚಕಗಳನ್ನು ಸ್ಪರ್ಶಿಸಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು , ಶಿಕ್ಷಣ ಅಧಿಕಾರಿ, DCEO ಮತ್ತು ZEO ಗಳು, ಮುಖ್ಯಸ್ಥರು ಸೇರಿದಂತೆ ವಿವಿಧ ವರ್ಗದ ಅಧಿಕಾರಿಗಳ ನೇತೃತ್ವದ ತಪಾಸಣಾ ತಂಡಗಳು ತಿಳಿಸಿವೆ. 

ಹಸಿರು, ನೀಲಿ, ಕಿತ್ತಳೆ ಮತ್ತು ಕೆಂಪು ಮುಂತಾದ ಗುಂಪುಗಳಾಗಿ ವಿಂಗಡಿಸಲಾದ ಜಿಮಾದಾರಿ ಯೋಜನೆಯಡಿ ಶಾಲೆಗಳ ಪ್ರಗತಿಯನ್ನು ಶ್ರೇಣೀಕರಿಸಲಾಗುತ್ತದೆ. ರಚಿಸಲಾದ ಕಲಿಕೆ ಮತ್ತು ಇತರ ಅಂತರವನ್ನು ಗುರುತಿಸಲು ಮತ್ತು ಸೇತುವೆಗಾಗಿ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಈ ಜಿಮಾಧಾರಿ ಯೋಜನೆ ಮೂಲಕ ಇಡೀ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಶಿಕ್ಷಣ ಸಂಸ್ಥೆಗಳು ಹಲವು ಕ್ರಮಗಳನ್ನು ಕೈಗೊಂಡಿವೆ.  ಕೋವಿಡ್ -19 ಸಾಂಕ್ರಾಮಿಕ ಮತ್ತು ಇತರ ಅಂಶಗಳಿಂದ ಅನುಭವಿಸಿದ ನಷ್ಟವನ್ನು ತಗ್ಗಿಸಲು ಮತ್ತು ಶಾಲೆಗಳು, ಶಾಲೆಗಳು ಮತ್ತು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಶಿಕ್ಷಣ ವ್ಯವಸ್ಥೆಯನ್ನು ಹೆಚ್ಚು ಹೊಣೆಗಾರರನ್ನಾಗಿ ಮಾಡಲು ಈ ಯೋಜನೆ ಪ್ರಾರಂಭಿಸಲಾಗಿದೆ ಎಂದು ಪ್ರಾಂಶುಪಾಲ ಬಾಲಕರ ಹೈಯರ್ ಸೆಕೆಂಡರಿ ವಿಲ್ಲಾಗಂ ಮಂಜೂರ್ ಅಹ್ಮದ್ ವಾರ್ ಹೇಳಿದ್ದಾರೆ.

ಇದನ್ನೂ ಓದಿ: ಈ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸರ್ಕಾರದಿಂದಲೇ Football Training

ಈಗಾಗಲೇ ಜಮ್ಮು ಕಾಶ್ಮೀರದಾದ್ಯಂತ  ಹಳ್ಳಿಗಳಿಗೆ ಹಿಂದಿರುಗಿ ಯೋಜನೆ (ಬ್ಯಾಕ್ ಟು ವಿಲೇಜ್) ಯೋಜನೆ ಬಹಳಷ್ಟು ಜನಪ್ರಿಯವಾಗಿದೆ. ಈ ಯೋಜನೆ ಮೂಲಕ ಸುಮಾರು 14,000 ಮಕ್ಕಳು ಮರಳಿ ಶಾಲೆ ಸೇರಿದ್ದಾರೆ. ಬ್ಯಾಕ್-ಟು-ವಿಲೇಜ್ ಕಾರ್ಯಕ್ರಮದ ಮೂಲಕ ಶಾಲೆ ತೊರೆದಿದ್ದ ಸುಮಾರು 14,000 ಮಂದಿ ಮಕ್ಕಳು ಮತ್ತೆ ಶಾಲೆಗಳಿಗೆ ಮರು ಸೇರ್ಪಡೆಗೊಂಡಿದ್ದಾರೆ ಎಂದು ಇತ್ತೀಚೆಗಷ್ಟೇ ಅಲ್ಲಿನ ಸರ್ಕಾರ ಮಾಹಿತಿ‌ ನೀಡಿತ್ತು.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ