ಉ​ಕ್ರೇನ್‌ ವೈದ್ಯ​ ವಿದ್ಯಾ​ರ್ಥಿ​ಗಳ ಶಿಕ್ಷಣಕ್ಕೆ ಶೀಘ್ರ ಪರಿಹಾರ: ಕೇಂದ್ರ ಸಚಿವ ಜೈಶಂಕರ್‌

Published : Aug 14, 2022, 02:22 PM IST
ಉ​ಕ್ರೇನ್‌ ವೈದ್ಯ​ ವಿದ್ಯಾ​ರ್ಥಿ​ಗಳ ಶಿಕ್ಷಣಕ್ಕೆ ಶೀಘ್ರ ಪರಿಹಾರ: ಕೇಂದ್ರ ಸಚಿವ ಜೈಶಂಕರ್‌

ಸಾರಾಂಶ

ನಾವು ಉಕ್ರೇನ್‌ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಅಲ್ಲಿನ ವಿದೇಶಾಂಗ ಸಚಿವರೊಡನೆ ಮಾತುಕತೆ ನಡೆಸಿ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ಗಮನ ಸೆಳೆದಿದ್ದೇನೆ ಎಂದ ಜೈಶಂಕರ್‌

ರಾಮನಗರ(ಆ.14):  ಉಕ್ರೇನ್‌ ವೈದ್ಯ​ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರುವುದನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಈಗ ಅವರ ವ್ಯಾಸಂಗ ಕುರಿತು ಭಾರತೀಯ ಮೆಡಿಕಲ್‌ ಕೌನ್ಸಿಲ್‌, ಕೇಂದ್ರ ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಗಳು ಗಮನ ಹರಿ​ಸು​ತ್ತಿವೆ ಎಂದು ವಿದೇ​ಶಾಂಗ ವ್ಯವ​ಹಾ​ರ​ಗಳ ಸಚಿವ ಜೈಶಂಕರ್‌ ತಿಳಿ​ಸಿ​ದರು. ಸುದ್ದಿ​ಗೋ​ಷ್ಠಿ​ ನಡೆ​ಸಿದ ಅವರು, ಉಕ್ರೇನ್‌ ನಿಂದ ಮರ​ಳಿ​ರುವ ವಿದ್ಯಾ​ರ್ಥಿ​ಗಳ ಶಿಕ್ಷ​ಣದ ಸವಾಲು ಎದು​ರಾ​ಗಿದೆ. ವೈದ್ಯಕೀಯ ಶಿಕ್ಷಣದಲ್ಲಿ ಅಂತಿಮ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್‌ ತರಬೇತಿ ಬೇಕಾಗಿದೆ. ನಾವು ಉಕ್ರೇನ್‌ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಅಲ್ಲಿನ ವಿದೇಶಾಂಗ ಸಚಿವರೊಡನೆ ಮಾತುಕತೆ ನಡೆಸಿ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ಗಮನ ಸೆಳೆದಿದ್ದೇನೆ ಎಂದ​ರು.

ಈ ವಿದ್ಯಾರ್ಥಿಗಳ ವ್ಯಾಸಂಗದ ಬಗ್ಗೆ ಪರ್ಯಾಯ ಮಾರ್ಗಗಳ ಬಗ್ಗೆಯೂ ಅವಲೋಕನ ನಡೆಯುತ್ತಿದೆ. ಆದರೆ, ಅದು ಸುಲಭವಲ್ಲ. ಹಲವಾರು ನಿಯಮಗಳನ್ನು ಗಮನಿಸಬೇಕಾಗಿದೆ. ಕೆಲವು ವಿದ್ಯಾರ್ಥಿಗಳು ಸುಪ್ರೀಂ ಕೋರ್ಟಿನ ಮೊರೆ ಹೋಗಿರುವ ಬಗ್ಗೆ ತಮ್ಮ ಗಮನಕ್ಕಿದೆ ಎಂದರು.

Russia-Ukraine War: ಅತಂತ್ರರಾದ ವಿದ್ಯಾರ್ಥಿಗಳ ನೆರವಿಗೆ ಬಂದ ಸಿದ್ಧಗಂಗಾ ಮಠ

ಭಾರತದಲ್ಲಿ ಆ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಮುಂದುವರೆಸಲು ಅವಕಾಶ ಸಿಗಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ​ಚಿ​ವರು, ಭಾರತೀಯ ಮೆಡಿಕಲ್‌ ಕೌನ್ಸಿಲ್‌, ಆರೋಗ್ಯ ಮತ್ತು ಶಿಕ್ಷಣ ಸಚಿವಾಲಯಗಳು ಈ ವಿಚಾರದಲ್ಲಿ ಚಿಂತನೆಗಳನ್ನು ನಡೆಸುತ್ತಿವೆ. ಕೇಂದ್ರ ಸರ್ಕಾರವೂ ಈ ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳ ನಿವಾರಣೆಗೆ ಗಮನ ಕೇಂದ್ರೀಕರಿಸಿದೆ.

ಎಲ್ಲ ಆಯಾ​ಮ​ಗ​ಳ​ಲ್ಲಿಯೂ ವಿದ್ಯಾ​ರ್ಥಿ​ಗಳ ಬಗ್ಗೆ ಚಿಂತನೆ ನಡೆ​ಯು​ತ್ತಿದೆ. ಶೀಘ್ರ​ದಲ್ಲಿ ಎಲ್ಲ​ ಸ​ಮ​ಸ್ಯೆ​ಗ​ಳನ್ನು ಪರಿ​ಹ​ರಿ​ಸು​ತ್ತೇವೆ. ನಮ್ಮ ದೇಶದಲ್ಲಿಯೇ ಓದುವ ಅವಕಾಶ ನೀಡುವ ಬಗ್ಗೆಯೂ ಕಾನೂನಿನ ಅಧ್ಯಯನ ನಡೆಯುತ್ತಿದೆ. ಎಲ್ಲರೂ ಸರ್ಕಾರದ ನೀತಿಗಳ ಬಗ್ಗೆಯೂ ತಿಳಿದುಕೊಳ್ಳಬೇಕಾಗಿದೆ. ಸುಪ್ರಿಂ ಕೋರ್ಟ್‌ ಏನು ಹೇಳುತ್ತದೆ ಎಂಬ ಬಗ್ಗೆಯೂ ಕಾದು ನೋಡಬೇಕಾಗಿದೆ ಎಂದು ಹೇಳಿ​ದರು.

ಉಕ್ರೇನ್- ರಷ್ಯಾ ಯುದ್ಧ: ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಸುತ್ತೂರು ಮಠ ಆಸರೆ

ಪ್ರತಿ ನೂರು ಕಿಮೀಗೆ ಒಂದು ವಿಮಾನ ನಿಲ್ದಾಣ ಇರಬೇಕು ಎಂಬುದು ಪ್ರಧಾನಿ ಮೋದಿ ಆಶಯ, ಈ ಬಗ್ಗೆ ಸಂಬಂಧಿ​ಸಿದ ಸಚಿ​ವಾ​ಲಯ ಕಾರ್ಯೋ​ನ್ಮು​ಖ​ವಾ​ಗಿ​ರು​ತ್ತದೆ. ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರು ವಿಮಾನ ನಿಲ್ದಾಣಗಳಲ್ಲಿನ ಒತ್ತಡ ಕಡಿಮೆ ಮಾಡುವ ವಿಚಾರದ ಬಗ್ಗೆ ಗಮನ ಹರಿಸಿರುತ್ತಾರೆ ಎಂಬ ವಿಶ್ವಾಸವಿದೆ. ತಾವು ದೆಹಲಿಗೆ ಹಿಂದಿರುಗಿದ ನಂತರ ಬೆಂಗಳೂರು ವಿಮಾನ ನಿಲ್ದಾಣದ ಬಗ್ಗೆ ಪ್ರಸ್ತಾಪಿಸುವುದಾಗಿ ಪ್ರಶ್ನೆ​ಯೊಂದಕ್ಕೆ ಉತ್ತ​ರಿ​ಸಿ​ದರು.
ಭಾರತದ ಲೇಖಕ ಸಲ್ಮಾನ್‌ ರಷ್ದಿ ಮೇಲೆ ಅಮೇರಿಕಾದಲ್ಲಿ ಹಲ್ಲೆ ನಡೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಇಡೀ ವಿಶ್ವ ಈ ಹಲ್ಲೆಯನ್ನು ಖಂಡಿಸಿದೆ. ಬೆಳಗ್ಗೆಯಿಂದ ನಾನು ರಾಮನಗರದಲ್ಲೇ ಇದ್ದೇನೆ. ಈ ಬಗ್ಗೆ ಉಭಯ ರಾಷ್ಟದೊಂದಿಗೆ ಮಾತನಾಡುತ್ತೇನೆ ಎಂದರು.

ಬಿಜೆಪಿ ನೇತೃ​ತ್ವದ ಸರ್ಕಾರ ಹಾಗೂ ಹಿಂದಿನ ಸರ್ಕಾ​ರ​ಗಳ ಆಡ​ಳಿ​ತ​ವನ್ನು ಜನರು ಗಮ​ನಿ​ಸಿ​ದ್ದಾರೆ. ಕಳೆದ 8 ವರ್ಷಗಳ ಆಡಳಿತದಲ್ಲಿ ವ್ಯತ್ಯಾಸವೇನು ಎಂಬುದರ ಬಗ್ಗೆ ತಿಳಿದುಕೊಂಡಿದ್ದಾರೆ. ಈ ವ್ಯತ್ಯಾಸವನ್ನು ನಾನು ಹೇಳಿದರೆ ಯಾರೂ ನಂಬವುದಿ​ಲ್ಲ. ಆದರೆ, ವಿವಿಧ ಕಾರ್ಯಕ್ರಮಗಳು, ಯೋಜನೆಗಳಿಂದ ತಮ್ಮ ಜೀವನದಲ್ಲಿ ಆದ ಪರಿವರ್ತನೆ ಮತ್ತು ಪ್ರಗತಿಯ ಬಗ್ಗೆ ಫಲಾನುಭವಿಗಳು ವ್ಯಕ್ತಪಡಿಸಿರುವ ಅನಿಸಿಕೆಗಳು ಮೋದಿ ಸರ್ಕಾರ ಮತ್ತು ಇತರ ಸರ್ಕಾರಗಳ ನಡುವಿನ ವ್ಯತ್ಯಾಸವನ್ನು ಕಾಣಬಹುದು. ಮೋದಿ​ ಆಡಳಿತದಲ್ಲಿ ಇಡೀ ದೇಶವೇ ಅಭಿವೃದ್ಧಿ ಕಾಣುತ್ತಿದೆ. ಅವರ ಮೂಲಕ ​ಬೆಂಗ​ಳೂರು ಗ್ರಾಮಾಂತರ ಕ್ಷೇತ್ರ ಸೇರಿ​ದಂತೆ ಇಡೀ ದೇಶದಲ್ಲೆ ಗೆಲುವು ಸಾಧಿಸುತ್ತೆವೆ. ತಮ್ಮ ಭೇಟಿ ರಾಜಕೀಯ ಉದ್ದೇಶದಿಂದ ಕೂಡಿಲ್ಲ ಅಂತ ವಿದೇ​ಶಾಂಗ ವ್ಯವ​ಹಾ​ರ​ಗಳ ಸಚಿವ ಜೈಶಂಕರ್‌ ತಿಳಿಸಿದ್ದಾರೆ.   
 

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ