ಬೆಂಗಳೂರಿಗೆ ಈ ಮಾರ್ಗದಿಂದ ಸಂಚರಿಸಲಿವೆ ನೂತನ KSRTC ಬಸ್‌

Published : Oct 22, 2019, 02:26 PM IST
ಬೆಂಗಳೂರಿಗೆ ಈ ಮಾರ್ಗದಿಂದ ಸಂಚರಿಸಲಿವೆ ನೂತನ KSRTC ಬಸ್‌

ಸಾರಾಂಶ

ಬೆಂಗಳೂರಿಗೆ ನೂತನ KSRTC ಬಸ್ ಸೇವೆ ಆರಂಭ ಮಾಡಲಾಗಿದೆ. ದಾವಣಗೆರೆ-ಶಿವಮೊಗ್ಗ ಮಾರ್ಗವಾಗಿ ಹೊಸ ಬಸ್ ಗಳು ಸಂಚಾರ ಮಾಡಲಿದೆ. 

ನ್ಯಾಮತಿ [ಅ.22]: ಹೊನ್ನಾಳಿಯಿಂದ ನ್ಯಾಮತಿ-ಸವಳಂಗ-ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು. ಪಟ್ಟಣದ ಮಹಂತೇಶ್ವರ ರಸ್ತೆಯ ಬಸ್‌ ನಿಲ್ದಾಣದಲ್ಲಿ ಸೋಮವಾರ ಅವರು ರಾಜ್ಯ ರಸ್ತೆ ಸಾರಿಗೆ ಬಸ್‌ಗೆ ಚಾಲನೆ ನೀಡಿ ಮಾತನಾಡಿದರು. ಹೊನ್ನಾಳಿಯಿಂದ ಬೆಳಗಿನ ಝಾವ 5-30ಕ್ಕೆ ಬಿಟ್ಟು ನ್ಯಾಮತಿಗೆ 5-45ಕ್ಕೆ ಬಂದು ಸವಳಂಗ ಮಾರ್ಗವಾಗಿ ಶಿವಮೊಗ್ಗ ಆನಂತರ ಬೆಂಗಳೂರು ಸೇರುತ್ತದೆ. ನಂತರ ಎರಡನೇ ಬಸ್‌ ಹೊನ್ನಾಳಿಯಿಂದ ಬೆಳಗ್ಗೆ 7-30ಕ್ಕೆ ಬಿಟ್ಟು ನ್ಯಾಮತಿಗೆ 7-45ಕ್ಕೆ ಬಂದು ಸವಳಂಗ ಮಾರ್ಗವಾಗಿ ಶಿವಮೊಗ್ಗ ತಲುಪಿ ಬೆಂಗಳೂರು ತಲುಪುತ್ತದೆ ಎಂದರು.

ಶಿವಮೊಗ್ಗದಿಂದ ರಾತ್ರಿ 10ಕ್ಕೆ ಬಿಟ್ಟು ಸವಳಂಗ ನ್ಯಾಮತಿ ಮಾರ್ಗವಾಗಿ ಹೊನ್ನಾಳಿ ಸೇರುತ್ತದೆ. ಮತ್ತೊಂದು ಬಸ್‌ ರಾತ್ರಿ 11-30ಕ್ಕೆ ಬಿಟ್ಟು ಸವಳಂಗ ನ್ಯಾಮತಿ ಮಾರ್ಗವಾಗಿ ಹೊನ್ನಾಳಿಗೆ ಬರುತ್ತದೆ. ಇನ್ನು ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ಸಾರಿಗೆಯ 6 ಬಸ್‌ಗಳನ್ನು ಹೊನ್ನಾಳಿಯಿಂದ ನ್ಯಾಮತಿ ಮಾರ್ಗವಾಗಿ ಶಿವಮೊಗ್ಗಕ್ಕೆ ಹೋಗಿ ಬರುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವೇಳೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ತಾಪಂ ಉಪಾಧ್ಯಕ್ಷ ಎಸ್‌.ಪಿ.ರವಿಕುಮಾರ, ಸಿ.ಕೆ.ರವಿ, ಎಚ್‌.ಎನ್‌.ವಿರುಪಾಕ್ಷಪ್ಪ, ತಾ. ಕಸಾಪ ಅಧ್ಯಕ್ಷ ಜಿ.ನಿಜಲಿಂಗಪ್ಪ, ಎನ್‌.ಆರ್‌.ಸುಂದರೇಶ, ತಾ. ಬಿಜೆಪಿ ಘಟಕ ಅಧ್ಯಕ್ಷ ಅಜೇಯರೆಡ್ಡಿ, ಎ.ಪ್ರಸಾದ್‌, ಗ್ರಾಪಂ ಸದಸ್ಯರು ಇತರರು ಇದ್ದರು.

PREV
click me!

Recommended Stories

ದಾವಣಗೆರೆ ಮೃಗಾಲಯದಲ್ಲಿ ಚುಕ್ಕೆ ಜಿಂಕೆಗಳ ಸರಣಿ ಸಾವು, ಸಾರ್ವಜನಿಕರಿಗೆ ಪ್ರವೇಶ ನಿಷೇಧ, ವೈದ್ಯರ ತೀವ್ರ ನಿಗಾ
ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬಿಜೆಪಿ ಮಾಜಿ ಕಾರ್ಪೋರೇಟರ್ ಶವ ಪತ್ತೆ, ಮಕ್ಕಳಿಂದ ದುಡುಕಿನ ನಿರ್ಧಾರ