Daily Horoscope: ಕನ್ಯಾ ರಾಶಿಯ ನಿರುದ್ಯೋಗಿಗಳಿಗೆ ಅವಕಾಶ, ಮಿಥುನಕ್ಕೆ ಮನೋಕ್ಲೇಶ

By Suvarna NewsFirst Published Feb 8, 2022, 5:00 AM IST
Highlights

8 ಫೆಬ್ರವರಿ 2022, ಮಂಗಳವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಸಂಗಾತಿಯ ಸಂಪ್ರೀತಿಗೆ ಸೋಲುವ ಮಕರ, ವೃಷಭಕ್ಕೆ ನಿರಾಸೆ

ಮೇಷ(Aries): ನಿಮ್ಮ ಉತ್ತಮ ಆಲೋಚನೆ ನಿಮಗೆ ಒಳಿತೇ ಮಾಡುವುದು. ಆತ್ಮವಿಶ್ವಾಸದ ಕಾರಣ ವೃತ್ತಿರಂಗದಲ್ಲಿ ಮುನ್ನುಗ್ಗಿ ಗುರುತಿಸಿಕೊಳ್ಳುವಿರಿ. ಯಾರನ್ನೂ ನೋಯಿಸುವಂತೆ ಚುಚ್ಚು ಮಾತುಗಳನ್ನಾಡಬೇಡಿ. ಹಿತಶತ್ರುಗಳು ಹೆಚ್ಚಲಿದ್ದಾರೆ. ಕೆಂಪು ಧಾನ್ಯವನ್ನು ದಾನ ಮಾಡಿ. 

ವೃಷಭ(Taurus): ಆಸೆಯಿಂದ ಕಾಯುತ್ತಿರುವ ವಿಷಯದಲ್ಲಿ ನಿರಾಸೆ ಕಾದಿದೆ. ಲೇವಾದೇವಿ, ಶೇರು ವ್ಯವಹಾರ, ವ್ಯಾಪಾರದಲ್ಲಿ ನಷ್ಟ ಹೆಚ್ಚಲಿದೆ. ಮನೆಯಲ್ಲಿ ಅಂದುಕೊಂಡ ಕಾರ್ಯಗಳು ಆಗದೆ ಕಂಗಾಲಾಗುವಿರಿ. ತಲೆನೋವು, ಕೆಮ್ಮಿನಂಥ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಬಾಧಿಸಬಹುದು. ಅಮ್ಮನವರಿಗೆ ಅರ್ಚನೆ ಮಾಡಿಸಿ. 

Latest Videos

ಮಿಥುನ(Gemini): ದೊಡ್ಡವರಿಗೆ ಎದುರಾಡಿ ಅವರ ಮನಸ್ಸಿಗೆ ನೋವು ಮಾಡುವಿರಿ. ಇದರಿಂದ ನಿಮ್ಮ ಮನಸ್ಸೂ ಕೆಡುವುದು. ಎಲ್ಲ ಕೆಲಸಗಳಲ್ಲೂ ಅಡಚಣೆಗಳು ಎದುರಾಗುವುವು. ಕಚೇರಿಯಲ್ಲಿ ಎಡವಟ್ಟುಗಳು ಹೆಚ್ಚಾಗಿ ಬೈಸಿಕೊಳ್ಳುವಿರಿ. ಮಕ್ಕಳ ತಪ್ಪಿಗೆ ತಂದೆತಾಯಿ ಅವಮಾನ ಎದುರಿಸಬೇಕಾಗಬಹುದು. ಆಂಜನೇಯ ಸ್ಮರಣೆ ಮಾಡಿ.                                                

ಕಟಕ(Cancer): ವ್ಯಾಪಾರ ವ್ಯವಹಾರಗಳು ಸಾಮಾನ್ಯವಾಗಿರಲಿವೆ. ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು. ಸಾಮಾಜಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ. ಹೊಸ ವ್ಯಕ್ತಿಗಳ ಪರಿಚಯ ಲಾಭದಾಯಕವಾಗಲಿದೆ. ವಿವಾಹಾದಿ ಯತ್ನಕ್ಕೆ ಫಲ ಸಿಗಲಿದೆ. ಹನುಮಾನ್ ಚಾಳೀಸ್ ಹೇಳಿಕೊಳ್ಳಿ. 

ಸಿಂಹ(Leo): ಸಣ್ಣ ಪ್ರಮಾಣದ ಉಳಿತಾಯಗಳು ಕೂಡಾ ಕಷ್ಟ ಕಾಲಕ್ಕೆ ದೊಡ್ಡ ಸಹಾಯ ಮಾಡಲಿವೆ ಎಂಬುದನ್ನು ನೆನಪಿಡಿ. ಸ್ವಲ್ಪ ಉಳಿಸಿ ಏನು ಮಾಡುವುದೆಂದು ಎಲ್ಲವನ್ನೂ ಧಾರಾಳವಾಗಿ ಖರ್ಚು ಮಾಡಬೇಡಿ. ತಾಯಿಯ ಸಹಾಯ ಸಿಗುವುದು. ತಾಯಿಯ ಕೈಯಿಂದ ಸಿಹಿ ತಿನಿಸಿಕೊಳ್ಳಿ. 

ಕನ್ಯಾ(Virgo): ಮೇಲಧಿಕಾರಿಗಳ ನಿರ್ಲಕ್ಷದಿಂದ ಉದ್ಯೋಗ ತೊರೆಯುವ ಯೋಚನೆ ಬರಬಹುದು. ನಿರುದ್ಯೋಗಿಗಳಿಗೂ ಅವಕಾಶ ಅರಸಿ ಬರಲಿದೆ. ಹೆಚ್ಚು ಯೋಚಿಸದೆ ಬಳಸಿಕೊಳ್ಳಿ. ಪ್ರೀತಿ ಪ್ರೇಮ ವ್ಯವಹಾರಗಳಿಗೆ ಮನೆಯವರ ಬೆಂಬಲ ದೊರೆತು ಸಂತಸ ಹೆಚ್ಚುವುದು. ಕೆಂಪು ವಸ್ತ್ರ ದಾನ ಮಾಡಿ. 

ತುಲಾ(Libra): ವಿವಾದಗಳಿಂದ ದೂರವಿರಿ. ದೈವಕಾರ್ಯವನ್ನು ಮಾಡುತ್ತೀರಿ. ಕಾಲುನೋವು, ಬೆನ್ನು ನೋವು ಹೆಚ್ಚಾಗಬಹುದು. ಸ್ವಂತ ಉದ್ಯೋಗದಲ್ಲಿರುವವರಿಗೆ ಉತ್ತಮ ಫಲವಿದೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ನೆರವು ಸಿಗಲಿದೆ. ಆಂಜನೇಯನಿಗೆ ಕೆಂಪು ವಸ್ತ್ರ ದಾನ ಮಾಡಿ. 

ವೃಶ್ಚಿಕ(Scorpio): ವಿವಾದಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ. ಮನೆಗೆ ಸಾಕಷ್ಟು ಖರ್ಚು ಮಾಡುವಿರಿ. ಮೈ ಕೈ ನೋವಿನಂಥ ಸಮಸ್ಯೆಗಳು ಕಿರಿ ಕಿರಿ ತರಬಹುದು. ಮನೆಯ ಕಿರಿಯ ಸದಸ್ಯರೊಂದಿಗೆ ಸೌಮ್ಯವಾಗಿ ವರ್ತಿಸಿ. ಸಂಗಾತಿಯೊಂದಿಗೆ ಜಗಳವಾಗಬಹುದು. ಆಂಜನೇಯ ಸ್ಮರಣೆ ಮಾಡಿ. 

Best Dads: ಅಪ್ಪ ಅಂದ್ರೆ ಹೀಗಿರಬೇಕು ಅನ್ನಿಸಿಕೊಳ್ಳೋ ರಾಶಿಯವರಿವರು!

ಧನುಸ್ಸು(Sagittarius): ನ್ಯಾಯಾಲಯದ ಪ್ರಕರಣಗಳು ನಿಮ್ಮ ಪರವಾಗಿರುತ್ತವೆ. ನಿಷ್ಪ್ರಯೋಜಕ ಚಟುವಟಿಕೆಗಳಲ್ಲಿ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡಬೇಡಿ. ಶೈಕ್ಷಣಿಕ ರಂಗದಲ್ಲಿ, ಪರೀಕ್ಷೆಗಳಲ್ಲಿ ಭಾಗವಹಿಸಿದವರಿಗೆ ಹಾಗೂ ಸಂದರ್ಶನ ಎದುರಿಸಿದವರಿಗೆ ಉತ್ತಮ ಫಲಿತಾಂಶ ದೊರೆಯಲಿದೆ. 

ಮಕರ(Capricorn): ಪ್ರೇಮ ಸಂಬಂಧಗಳು ನಿಮ್ಮ ಜೀವನೋತ್ಸಾಹ ಹೆಚ್ಚಿಸಬಹುದು. ಕೂಡಿಟ್ಟ ಹಣದ ಸದುಪಯೋಗವಾಗವಾಗಲಿದೆ. ಕೈಗೆತ್ತಿಕೊಂಡ ಕೆಲಸವನ್ನು ಅವಧಿಪೂರ್ವ ಪೂರ್ಣಗೊಳಿಸಿ ಸೈ ಎನಿಸಿಕೊಳ್ಳುವಿರಿ. ಮಕ್ಕಳಿಗೆ ನಿಮ್ಮ ಬಗ್ಗೆ ಪ್ರೀತಿ ಹೆಚ್ಚುವುದು. ಹಕ್ಕಿಗಳಿಗೆ ಕಾಳು ನೀಡಿ. 

Narmada Jayanti: ಪರಶಿವನ ಬೆವರಾಗಿ ನದಿ ನರ್ಮದೆ ಹುಟ್ಟಿದ ದಿನವಿಂದು, ಏನು ಆಕೆಯ ಕತೆ?

ಕುಂಭ(Aquarius): ದೇವರ ಮೇಲೆ ನಂಬಿಕೆ ಬರುವ ಸನ್ನಿವೇಶಗಳು ಸೃಷ್ಟಿಯಾಗುತ್ತದೆ. ನಿಮ್ಮ ನಿರ್ಧಾರಗಳು ಗಟ್ಟಿಯಾಗುವ ಹೊತ್ತಿಗೆ ಕಾರ್ಯವೇ ಮುಗಿದಿರುತ್ತದೆ. ಅನಗತ್ಯ ಆತಂಕಗಳು ಕಾಡುವುವು. ವಿರೋಧಿಗಳ ಉಪದ್ರವ ಹೆಚ್ಚಬಹುದು. ಹನುಮಾನ್ ಚಾಳೀಸ್ ಹೇಳಿಕೊಳ್ಳಿ. 

ಮೀನ(Pisces): ಪ್ರತ್ಯಕ್ಷ ಅಥವಾ ಪರೋಕ್ಷ ರೀತಿಯಲ್ಲಿ ಸರ್ಕಾರದಿಂದ ಪ್ರಯೋಜನಗಳನ್ನು ಪಡೆಯಬಹುದು. ನೀವು ಸಮಯಕ್ಕೆ ಸರಿಯಾಗಿ ಅವಕಾಶವನ್ನು ಬಳಸಿದರೆ, ನಿಮ್ಮ ವೃತ್ತಿಪರ ಜೀವನವು ಭವಿಷ್ಯದಲ್ಲಿ ಅಪಾರ ಪ್ರಯೋಜನಗಳನ್ನು ನೀಡುತ್ತದೆ. ನವಗ್ರಹ ಶ್ಲೋಕ ಹೇಳಿಕೊಳ್ಳಿ.

click me!