Daily Horoscope: ಮೀನ ರಾಶಿಗೆ ಕಾಡುವ ಅಪವಾದ, ಕಟಕಕ್ಕೆ ಸಿಗುವುದು ಅವಕಾಶ

By Suvarna NewsFirst Published Dec 20, 2021, 5:02 AM IST
Highlights

20 ಡಿಸೆಂಬರ್ 2021, ಸೋಮವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ? ಯಾವ ರಾಶಿಗೆ ಕಂಟಕವಿದೆ?
ಹಿತಶತ್ರುಗಳ ಕಾಟಕ್ಕೆ ಸಿಂಹ ಹೈರಾಣು, ಆರೋಗ್ಯ ಸಮಸ್ಯೆಗೆ ಮಿಥುನ ಕಂಗಾಲು

ಮೇಷ(Aries): ಸ್ನೇಹಿತರ ಸಹಕಾರದಿಂದ ಸಾಲ ತೀರಿಸುವಿರಿ. ಉದ್ಯೋಗ ಕ್ಷೇತ್ರದಲ್ಲಿ ಹಿರಿಯ ಉದ್ಯೋಗಿಗಳಿಂದ ಬೈಸಿಕೊಳ್ಳಬೇಕಾಗುತ್ತದೆ. ಕೆಲಸದಲ್ಲಿ ಹೆಚ್ಚು ಶ್ರದ್ಧೆ ಅಗತ್ಯ. ವಿದ್ಯಾರ್ಥಿಗಳಿಗೆ ನಿಲ್ಲದ ಏಕಾಗ್ರತೆ. ಜೀವನ ಸಂಗಾತಿಯೊಂದಿಗೆ ಮುನಿಸು. ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ. 

ವೃಷಭ(Taurus): ಬಹು ಕಾಲದಿಂದ ಕನಸು ಕಂಡ ಪ್ರವಾಸ ಇಂದು ನನಸು. ಆಪ್ತರೊಂದಿಗೆ ಸಮಯ ಕಳೆಯುವುದರಿಂದ ಹೆಚ್ಚುವ ಉಲ್ಲಾಸ. ಹೊಸ ಹೊಸ ಅನುಭವಗಳಿಂದ ಕಲಿಕೆ. ಮಕ್ಕಳ ವಿಚಾರಕ್ಕೆ ಪೋಷಕರು ಜಗಳವಾಡದಿರಿ. ವ್ಯಾಪಾರದ ವಿಷಯಗಳಲ್ಲಿ ತುಂಬಾ ಆತುರ ಬೇಡ. ಮನೆದೇವರ ಸ್ಮರಣೆ ಮಾಡಿ. 

Latest Videos

ಮಿಥುನ(Gemini): ಧೀರ್ಘಕಾಲದಿಂದ ಅನುಭವಿಸುತ್ತಿರುವ ಆರೋಗ್ಯ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಂಡಾವು. ಒಮ್ಮೆ ವೈದ್ಯರಲ್ಲಿ ತಪಾಸಣೆ ಮಾಡಿಸಿ. ಮಕ್ಕಳ ಪ್ರಬುದ್ಧತೆ ಅಚ್ಚರಿ ತಂದೀತು. ಉದ್ಯೋಗದಲ್ಲಿ ನಿಲ್ಲದ ಏಕಾಗ್ರತೆ, ಸಾಗದ ಕೆಲಸ. ವ್ಯಾಪಾರಿಗಳಿಗೆ ಧನ ನಷ್ಟ. ಧನ್ವಂತರಿ ಮಂತ್ರ ಹೇಳಿಕೊಳ್ಳಿ. 

ಕಟಕ(Cancer): ನಿರುದ್ಯೋಗಿಗಳು ಬಂದ ಅವಕಾಶಕ್ಕೆ ನೆಪ ಹೇಳಿ ಕೈ ಬಿಡಬೇಡಿ. ಬಂದ ಅವಕಾಶ ಚಿಕ್ಕದಾಗಿದ್ದರೂ, ಬಳಸಿಕೊಂಡರೆ ಭವಿಷ್ಯದಲ್ಲಿ ಒಳಿತಾಗಲಿದೆ. ಉದ್ಯೋಗಿಗಳಿಗೆ ಸಹೋದ್ಯೋಗಿಗಳ ಸಹಕಾರ ಸಿಕ್ಕಿ ಸಮಯಕ್ಕೆ ಸರಿಯಾಗಿ ಕೆಲಸಗಳು ಮುಗಿಯುವುವು. ಶಿವ ಸ್ಮರಣೆಯಿಂದ ಒಳಿತಾಗುವುದು. 

Lord Shiva facts: ಶಿವನಿಗೆ ಇಬ್ಬರಲ್ಲ, ಒಂಬತ್ತು ಮಕ್ಕಳು, ಅದರಲ್ಲೊಬ್ಬಳು ಮಗಳು!

ಸಿಂಹ(Leo): ಹಿತಶತ್ರುಗಳ ಉಪಟಳ ಹಾಗೂ ದಾಯಾದಿಗಳ ಕಿರಿಕಿರಿ ಕಾಡಬಹುದು. ಮಾತಿಗೆ ಮಾತು ಬೆಳೆಸದೆ ಮೌನದಿಂದ ಕಾರ್ಯ ಸಾಧಿಸಿ. ನಿಮ್ಮ ವೈಯಕ್ತಿಕ ವಿಷಯಗಳಲ್ಲಿ ಮೂರನೇ ವ್ಯಕ್ತಿ ಮಧ್ಯಪ್ರವೇಶಿಸಲು ಬಿಡದಿದ್ದರೆ ಉತ್ತಮ. ಹಣದ ಸ್ಥಿತಿ ಉತ್ತಮವಾಗಿರುತ್ತದೆ. ಹಸುವಿಗೆ ಬೆಲ್ಲ, ಅಕ್ಕಿ ನೀಡಿ. 

ಕನ್ಯಾ(Virgo): ಸಂಗಾತಿಯೊಂದಿಗೆ ಜಗಳ, ಮುನಿಸು ಹೆಚ್ಚುವುದು. ನಿಮ್ಮ ಸಂಗಾತಿಗೆ ನಿಮ್ಮೊಂದಿಗೆ ಹೆಚ್ಚಿನ ನಂಬಿಕೆ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಿ. ವ್ಯಾಪಾರ ವಹಿವಾಟುಗಳಲ್ಲಿ ಲಾಭ. ಉದ್ಯೋಗದಲ್ಲಿರುವ ಜನರು ತಮ್ಮ ಬಾಕಿ ಕೆಲಸವನ್ನು ಇಂದೇ ಪೂರ್ಣಗೊಳಿಸಿ.  ದೇವತಾ ಕಾರ್ಯಗಳಲ್ಲಿ ಭಾಗವಹಿಸುವಿರಿ. ಶಿವಶಕ್ತಿಯರ ಪ್ರಾರ್ಥನೆ ಮಾಡಿ. 

ತುಲಾ(Libra): ಸಕ್ಕರೆ ಕಾಯಿಲೆ, ರಕ್ತದೊತ್ತಡ ಸಮಸ್ಯೆಗಳಿದ್ದರೆ ಒಮ್ಮೆ ತಪಾಸಣೆ ಮಾಡಿಸಿಕೊಳ್ಳಿ. ಹೆತ್ತವರ ಸಹಕಾರದಿಂದ ಕಷ್ಟದ ಕೆಲಸಗಳು ಸರಾಗವಾಗಿ ಸಾಗುವುವು. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರಲಿದೆ. ಅವಿವಾಹಿತರಿಗೆ ಕ್ಲೇಶ ಉಂಟಾಗುವುದು. ಪೋಷಕರ ಆಶೀರ್ವಾದ ಪಡೆಯಿರಿ. 

Weekly Horoscope: ಈ ರಾಶಿಗೆ ಪಾಲುದಾರಿಕೆ ಕೆಲಸಗಳಲ್ಲಿ ಎಚ್ಚರ ಅಗತ್ಯ, ನಿಮ್ಮ ರಾಶಿಗೇನಿದೆ ನೋಡಿ..

ವೃಶ್ಚಿಕ(Scorpio): ನಿಮ್ಮ ವೈರಿಯೊಡನೆ ಇದ್ದಕ್ಕಿದ್ದ ಹಾಗೆ ಸಮನ್ವಯ ಸಾಧಿಸಿ ಸಮಯ ಕಳೆಯುವಿರಿ. ತಾತ್ಕಾಲಿಕವಾಗಿ ದ್ವೇಷ ಶಮನವಾದಂತೆ ಕಂಡುಬರುವುದು. ತಾಯಿಯ ಸಹಕಾರದಿಂದ ಆರೋಗ್ಯ ಸಮಸ್ಯೆಗಳು ನೀಗುವುವು. ಉದ್ಯೋಗದಲ್ಲಿ ಪ್ರಗತಿ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. 

ಧನುಸ್ಸು(Sagittarius): ಹೊಸ ತಂತ್ರಜ್ಞಾನ ಮತ್ತು ಜ್ಞಾನವನ್ನು ಪಡೆಯುವ ಬಯಕೆಯಿಂದ ಕಲಿಕೆ. ಬದಲಾಗುತ್ತಿರುವ ಋತುವಿನ ಕಾರಣದಿಂದ ಆರೋಗ್ಯದಲ್ಲಿ ಏರುಪೇರು. ಬಿಡುವಿಲ್ಲದ ದುಡಿಮೆಯಾದರೂ ಧನಲಾಭದಿಂದ ಸಂತೃಪ್ತಿ. ಶಾರದಾ ದೇವಿಯ ಸ್ಮರಣೆ ಮಾಡಿ.

ಮಕರ(Capricorn): ಮನಸ್ಸನ್ನು ನಿಗ್ರಹಿಸಿಕೊಳ್ಳದಿದ್ದರೆ ಹುಚ್ಚುಕೋಡಿಯಂತೆ ಓಡಿ ಸಮಯ ಹಾಳು ಮಾಡುವುದು. ಸರ್ಕಾರಿ ಕೆಲಸಗಳಲ್ಲಿರುವವರಿಗೆ ಸಿಹಿ ಸುದ್ದಿ. ವರ್ಗಾವಣೆ ಬಯಸುವವರಿಗೆ ಫಲ ಸಂಭಾವ್ಯತೆ. ಕುಟುಂಬ ಸದಸ್ಯರ ಜೊತೆ ಮಾತಿನಿಂದ ಸಮಾಧಾನ. ತಾಯಿಯ ಕೈಯಿಂದ ಸಿಹಿ ತಿನ್ನಿಸಿಕೊಳ್ಳಿ. 

ಕುಂಭ(Aquarius): ವೈದ್ಯ ವೃತ್ತಿಯಲ್ಲಿರುವವರು, ಎಂಜಿನಿಯರ್‌ಗಳಿಗೆ ಹಿರಿಯರಿಂದ ಪ್ರಶಂಸೆ. ಕೆಲವು ಅನಗತ್ಯ ಖರ್ಚುಗಳು ಇರಬಹುದು. ವಾಹನ ಚಾಲನೆ ಮಾಡುವ ಮುನ್ನ ಮನೆ ದೇವರನ್ನು ಸ್ಮರಿಸಿ. ಕುಟುಂಬ ಸದಸ್ಯರ ಜೊತೆ ತಾಳ್ಮೆಯಿಂದ ಮಾತನಾಡಿ. ಕಾರ್ತಿಕೇಯನ ಆರಾಧನೆ ಮಾಡಿ. 

ಮೀನ(Pisces): ಉದ್ಯೋಗದಲ್ಲಿ ತಪ್ಪುಗಳಾಗುವ ಸಾಧ್ಯತೆ. ವಿನಾಕಾರಣ ಅಪವಾದ ಎದುರಿಸಬೇಕಾಗಬಹುದು. ನಿಮ್ಮ ನಿಲುವನ್ನು ವ್ಯಕ್ತಪಡಿಸದೆ ಇರಬೇಡಿ. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು, ಆ ಸಂಬಂಧ ಸಹಿ ಹಾಕಲು ಇಂದು ಒಳಿತಲ್ಲ. ವಿಷ್ಣು ಸಹಸ್ರನಾಮ ಪಠಿಸಿ. 
 

click me!